ಮನೆ ರಾಜ್ಯ ನಾನು ಹಿಟ್‌ ಆ್ಯಂಡ್‌ ರನ್‌ ಮಾಡಿಲ್ಲ, ಇದೊಂದು ಆಕಸ್ಮಿಕ ಘಟನೆ: ನಟ ನಾಗಭೂಷಣ್‌

ನಾನು ಹಿಟ್‌ ಆ್ಯಂಡ್‌ ರನ್‌ ಮಾಡಿಲ್ಲ, ಇದೊಂದು ಆಕಸ್ಮಿಕ ಘಟನೆ: ನಟ ನಾಗಭೂಷಣ್‌

0

ಬೆಂಗಳೂರು: ಉತ್ತರಹಳ್ಳಿಯ ವಸಂತಪುರ ಮುಖ್ಯರಸ್ತೆಯಲ್ಲಿ  ಸೆಪ್ಟೆಂಬರ್ 30 ರಂದು ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ನಟ ನಾಗಭೂಷಣ್‌, ನಾನು ಹಿಟ್‌ ಆ್ಯಂಡ್‌ ರನ್‌ ಮಾಡಿಲ್ಲ. ಇದೊಂದು ಆಕಸ್ಮಿಕ ಘಟನೆ. ಅಪಘಾತಕ್ಕೆ ಈಡಾದ ಕುಟುಂಬದವರಿಗೆ ನನ್ನಿಂದ ಏನು ಸಹಾಯವಾಗುತ್ತದೆಯೋ ಅದನ್ನು ಮಾಡುತ್ತೇನೆ ಎಂದಿದ್ದಾರೆ.

ಸೋಮವಾರ ನಟ ನಾಗಭೂಷಣ್‌ ಅವರು ತನ್ನ ವಕೀಲರೊಂದಿಗೆ ಸುದ್ದಿಗೋಷ್ಠಿ ನಡೆಸಿದ್ದು, ಇದರಲ್ಲಿ ಅವರು ಪ್ರಕರಣ ಸಂಬಂಧ ಮಾತನಾಡಿದ್ದಾರೆ.

ಅಪಘಾತವಾದ ಬಳಿಕ ನಾನು ಎಲ್ಲಿಗೂ ಓಡಿಹೋಗಿಲ್ಲ. ನನ್ನ ಕಾರು ಕೂಡ ಅಲ್ಲೇ ಇತ್ತು. ನಾನು ಸ್ವತಃ ಗಾಯಾಳಗಳನ್ನು ಆಸ್ಪತ್ರೆಗೆ ದಾಖಲಿಸಿದ್ದೆ. ಅಪಘಾತವಾದ ಬಳಿಕ ನಾನೇ ಖುದ್ದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದೆ. ನಾನು ಅಂದಿನ ಘಟನೆಯಿಂದ ಮಾನಸಿಕವಾಗಿ ಕುಸಿದು ಬಿಟ್ಟಿದ್ದೇನೆ ಎಂದು ಹೇಳಬೇಡಿ ಎಂದು ನಟ ಹೇಳಿದ್ದಾರೆ.

 “ನಾನು ವೇಗವಾಗಿ ಕಾರು ಓಡಿಸಿಲ್ಲ. ಆ ರಸ್ತೆಯಲ್ಲಿ ಅಷ್ಟು ವೇಗವಾಗಿ ಕಾರು ಓಡಿಸಲು ಆಗುವುದಿಲ್ಲ. ಒಮ್ಮೆಗೆ ದಂಪತಿ ರಸ್ತೆಗೆ ಬಂದ ಕಾರಣದಿಂದ ಕಾರು ಅಪಘಾತವಾಯಿತು. ಆ ಕುಟುಂಬಕ್ಕೆ ಆದ ನೋವಿನ ಅರಿವು ನನಗಿದೆ. ಆ ಕುಟುಂಬದ ಜೊತೆಗಿರುವೆ, ಮುಂದಿನ ದಿನಗಳಲ್ಲಿ ಅವರ ಬಳಿ ಮಾತನಾಡಿಸುವ ಪ್ರಯತ್ನವನ್ನು ಮಾಡುತ್ತೇನೆ” ಎಂದಿದ್ದಾರೆ.

ಇದೇ ರೀತಿಯ ಅಪಘಾತದಲ್ಲಿ ನಾನು ನನ್ನ ತಂದೆಯನ್ನು ಕಳೆದುಕೊಂಡಿದ್ದೆ. ಗೌರಿ ಹಬ್ಬದ ದಿನದಂದು ಇಂಥದ್ದೇ ಅಪಘಾತದಲ್ಲಿ ನನ್ನ ತಂದೆ ನಿಧನರಾದರು. ಅದನ್ನು ಯಾರು ಮಾಡಿದರು ಅಂಥ ನಮಗೆ ಇದುವರೆಗೆ ಗೊತ್ತಾಗಿಲ್ಲ. ಯಾರಿಗಾದರೂ ಅಪಘಾತವಾದರೆ ಅವರನ್ನು ಆಸ್ಪತ್ರೆಗೆ ಸೇರಿಸಿ, ಓಡಿಹೋಗಬೇಡಿ. ನನ್ನ ತಂದೆಯ ಘಟನೆಯಿಂದ ನಾನು ಇದನ್ನೇ ಕಲಿತದ್ದು” ಎಂದು ನಟ ಹೇಳಿದ್ದಾರೆ.

ಹಿಂದಿನ ಲೇಖನಬೈಕ್-ಆ್ಯಂಬುಲೆನ್ಸ್ ನಡುವೆ ಮುಖಾಮುಖಿ ಡಿಕ್ಕಿ: ಇಬ್ಬರಿಗೆ ತೀವ್ರ ಗಾಯ
ಮುಂದಿನ ಲೇಖನಸೀಳು ತುಟಿ (ಕ್ಲೆಪ್ಟ್ ಲಿಪ್)