ಮನೆ ರಾಜ್ಯ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಬಿ.ಎಲ್ ಸಂತೋಷ್ ಅಥವಾ ಪ್ರಹ್ಲಾದ್ ಜೋಷಿ ಸಿಎಂ ಆಗ್ತಾರೆ: ಎಂ.ಲಕ್ಷ್ಮಣ್

ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಬಿ.ಎಲ್ ಸಂತೋಷ್ ಅಥವಾ ಪ್ರಹ್ಲಾದ್ ಜೋಷಿ ಸಿಎಂ ಆಗ್ತಾರೆ: ಎಂ.ಲಕ್ಷ್ಮಣ್

0

ಮೈಸೂರು: ಬಿಜೆಪಿಯನ್ನು ಕಟ್ಟಿ ಬೆಳಿಸಿದ ಯಡಿಯೂರಪ್ಪ ಅವರನ್ನ ಮೂಲೆ ಗುಂಪು ಮಾಡಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಮತ್ತೆ ಏನಾದರೂ ಅಧಿಕಾರಕ್ಕೆ ಬಂದರೆ ಬಿ.ಎಲ್ ಸಂತೋಷ್ ಅಥವಾ ಪ್ರಹ್ಲಾದ್ ಜೋಷಿ ಸಿಎಂ ಆಗ್ತಾರೆ  ಹೊರತು ಲಿಂಗಾಯತರಿಗೆ ಬಿಟ್ಟಕೊಡಲ್ಲ. ವೀರಶೈವ ಲಿಂಗಾಯತ ಸಮುದಾಯ ಅರ್ಥ ಮಾಡಿಕೊಳ್ಳಬೇಕು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೇಳಿದರು.

ಶಾಸಕ ಸಿಟಿ ರವಿ ವೀರಶೈವ ಲಿಂಗಾಯತ ವಿರುದ್ಧ ಮಾತನಾಡಿರುವ ಆಡಿಯೋ ವೈರಲ್ ವಿಚಾರ ಕುರಿತು ಸುದ್ದಿಗೋಷ್ಟಿಯಲ್ಲಿ ಪ್ರತಿಕ್ರಿಯಿಸಿದ ಅವರು, ಲಿಂಗಾಯತ ಸಮುದಾಯವನ್ನು ಮೂಲೆ ಗುಂಪು ಮಾಡಲು ಬಿಜೆಪಿಯ ಮುಖಂಡರು ಹುನ್ನಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಧ್ರುವನಾರಾಯಣ್ ಸಾವು ಕಾಂಗ್ರೆಸ್ ಪಕ್ಷದ ಒತ್ತಡದಿಂದ ಆಗಿದ್ದು ಎಂದು ಹೇಳಿಕೆ ಕೊಟ್ಟಿದ್ದ ಛಲವಾದಿ ನಾರಾಯಣ ಸ್ವಾಮಿ ವಿರುದ್ಧ ಗುಡುಗಿದ ಎಂ.ಲಕ್ಷ್ಮಣ್,  ಛಲವಾದಿ ಎಂದು ಹೆಸರು ಇಟ್ಟುಕೊಂಡಿದ್ದೀಯಲ್ಲಪ್ಪಾ ನಿನಗೆ ಮಾನ ಮರ್ಯಾದೆ ಇದಿಯಾ. ಕಾಂಗ್ರೆಸ್ ಪಕ್ಷದಿಂದ ಎಲ್ಲವನ್ನೂ ಪಡೆದುಕೊಂಡು ಹೋಗಿ ಈಗ ಅವರಿಗೆ ದ್ರೋಹ ಮಾಡುವ ಕೆಲಸ ಮಾಡುತ್ತಿದ್ದೀರಾ.? ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ, ಎಚ್ ಸಿ ಮಹಾದೇವಪ್ಪ ಅವರ ಬಗ್ಗೆ ಧ್ರುವನಾರಾಯಣ್ ಬಗ್ಗೆ ಹಗುರವಾಗಿ ಮಾತನಾಡುತ್ತೀರಾ.? ನಮ್ಮ ಪಕ್ಕದಲ್ಲಿರುವ ದಲಿತ ಸಮುದಾಯದವರಿಗೆ ಕೇಳಿಕೊಳ್ಳುತ್ತೇನೆ ಇಂತವರಿಗೆ ಜನ ಕಲ್ಲು ತೆಗೆದುಕೊಂಡು ಹೊಡಿಬೇಕು ಎಂದು ವಾಗ್ದಾಳಿ ನಡೆಸಿದರು.

ಉರಿಗೌಡ ಮತ್ತು ನಂಜೇಗೌಡ ವಿಚಾರ ಕುರಿತು ಮಾತನಾಡಿದ ಕಾಂಗ್ರೆಸ್ ವಕ್ತಾರ ಲಕ್ಷಣ್, ಇದು ಬಿಜೆಪಿಯವರ ಕುತಂತ್ರ. ಒಕ್ಕಲಿಗರು ಮತ್ತು ಮುಸ್ಲಿಮರ ನಡುವೆ ದ್ವೇಷ ಮನೋಭಾವನೆ ಬಿತ್ತುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ. ಕೂಡಲೇ ಸಚಿವ ಅಶ್ವಥ್ ನಾರಾಯಣ ಮತ್ತು ಸಿಟಿ ರವಿ ಹಾಗೂ ಶೋಭಾ ಕರಂದ್ಲಾಜೆ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.

ಹಿಂದಿನ ಲೇಖನಜಿಮ್ಸ್ ಆಸ್ಪತ್ರೆಯಲ್ಲಿ ಮಹಿಳೆ ಮೇಲೆ ಅತ್ಯಾಚಾರ ಆರೋಪಿ ಬಂಧನ
ಮುಂದಿನ ಲೇಖನಮಹಿಳೆಯರ ಈ ನಡವಳಿಕೆಗಳು ಪುರುಷರಿಗೆ ಕಿರಿಕಿರಿಯುಂಟು ಮಾಡುತ್ತಂತೆ