ಮನೆ ಹಾಸ್ಯ ಹಾಸ್ಯ

ಹಾಸ್ಯ

0

‘ನ್ಯಾಯಾಧೀಶ : ಕೊಲೆ ನಡೆದದ್ದನ್ನು ನೋಡಿದ ನೀವು ಆ ಕೊಲೆಯನ್ನ ತಡೆಯಲು ಯಾಕೆ ಪ್ರಯತ್ನಿಸಲಿಲ್ಲ ?

ಕಕ್ಷಿ : ಸ್ವಾಮಿ, ನಾನು ತಡೆಯಲು ಹೋಗಿದ್ದರೆ ಸಾಕ್ಷಿ ಹೇಳಲು ನಿಮ್ಮ ಮುಂದೆ ಇರುತ್ತಿರಲಿಲ್ಲ.

***

ವಕೀಲ : ನಾನು ನಿನ್ನ ಕೇಸ್ ನ ತೆಗೆದುಕೊಂಡರೆ ನನಗೆ ಫೀಸು ಕೊಡಲು ನಿನ್ನ ಕೈಲಿ ಸಾಧ್ಯವಾ ?

ಕಕ್ಷಿದಾರ : ನನ್ನ ಹತ್ತಿರ ಇರುವುದು ಅಂದರೆ ಒಂದೇ ಒಂದು ಕಾರು ಸರ್.

ವಕೀಲ : ಸರಿ, ನಿನ್ನ ಮೇಲೆ ಯಾವ ಆಪಾದನೆ ಹೊರೆಸಿದ್ದಾರೆ ಪೊಲೀಸರು.

ಕಕ್ಷಿದಾರ : ಆ ಕಾರನ್ನ ಕದ್ದೆ ಅಂತ.

***

ಶಿವ : ಯಾಕಯ್ಯ ಕಾರು ಪಾರ್ಕ್ ಮಾಡಿ ಅದರ ಎರಡು ಚಕ್ರ ಬಿಚ್ಚುತ್ತಾ ಇದ್ದೀಯಾ ?

ಬಾಲು : ಯಾಕೆ ಬೋರ್ಡ್ ಕಾಣಿಸ್ತಿಲ್ವ ? parking for two wheelers only ಅಂತಿದೆ.

***

ಗಿರೀಶ : ಮದುವೆಯಾದ ಇಷ್ಟು ವರ್ಷದಲ್ಲಿ 10-15 ಸಂದರ್ಭದಲ್ಲಿ ನೀವು ಬಹಳ ಖುಷಿಯಾಗಿದ್ದೆ ಅಂದ್ಯಲ್ಲ ಯಾವುದದು ?

ತಿಮ್ಮ : ನನ್ನ ಹೆಂಡ್ತಿ ತವರುಮನೆಗೆ ಹೋದಾಗ ?

***

“ನಾವು ಮಾತನಾಡುವ ಮನೆ ಮಾತಿಗೆ-ಮಾತೃಭಾಷೆ ಎಂದು ಏಕೆ ಅನ್ನುವರು ?”

“ಬಹುಶಃ ಮನೆಯಲ್ಲಿ ತಂದೆಗಿಂತ ತಾಯಿಯ ಮಾತೇ ಹೆಚ್ಚು ಕೇಳಿ ಬರುತ್ತಿರುವುದರಿಂದ !”

ಹಿಂದಿನ ಲೇಖನಯೋಗದಿಂದ ದೂರವಾಗುವುದು ಹಲವು ರೋಗ
ಮುಂದಿನ ಲೇಖನಇಂದಿನ ರಾಶಿ ಭವಿಷ್ಯ