ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಶಿವ : ಯಾಕಯ್ಯ ಕಾರು ಪಾರ್ಕ್ ಮಾಡಿ ಅದರ ಎರಡು ಚಕ್ರ ಬಿಚ್ಚುತ್ತಾ ಇದ್ದೀಯಾ ?

ಬಾಲು : ಯಾಕೆ ಬೋರ್ಡ್ ಕಾಣಿಸ್ತಿಲ್ವ ? parking for two wheelers only ಅಂತಿದೆ.

Join Our Whatsapp Group

++++

ಗಿರೀಶ : ಮದುವೆಯಾದ ಇಷ್ಟು ವರ್ಷದಲ್ಲಿ 10-15 ಸಂದರ್ಭದಲ್ಲಿ ನೀವು ಬಹಳ ಖುಷಿಯಾಗಿದ್ದೆ ಅಂದ್ಯಲ್ಲ ಯಾವುದದು ?

ತಿಮ್ಮ : ನನ್ನ ಹೆಂಡ್ತಿ ತವರುಮನೆಗೆ ಹೋದಾಗ ?

++++

“ನಾವು ಮಾತನಾಡುವ ಮನೆ ಮಾತಿಗೆ-ಮಾತೃಭಾಷೆ ಎಂದು ಏಕೆ ಅನ್ನುವರು ?”

“ಬಹುಶಃ ಮನೆಯಲ್ಲಿ ತಂದೆಗಿಂತ ತಾಯಿಯ ಮಾತೇ ಹೆಚ್ಚು ಕೇಳಿ ಬರುತ್ತಿರುವುದರಿಂದ !”

++++

ಟೀಚರ್ : ʼನೆರೆಹೊರೆʼ ಎಂದರೇನು ?

ಬಾಲು : ಸರ್, ಅಕ್ಕ-ಪಕ್ಕದ ಮನೆಯವರು ʼನೆರೆʼ, ಅವರು ಆಗಾಗ ಬಂದು ಕಾಫಿ ಪುಡಿ, ಸಕ್ಕರೆ, ಉಪ್ಪು, ಕೇಳಿದರೆ ʼಹೊರೆʼ ಸರ್…

++++

“ನೀನು ಯಾಕೆ ಭಿಕ್ಷೆ ಬೇಡ್ತಿ?”

“ಕುಡಿಯೋಕ್ಕೆ ಹಣ ಬೇಕು.”

“ಯಾಕೆ ಕುಡೀತಿ”

“ಭಿಕ್ಷೆ ಬೇಡೋಕೆ ಧೈರ್ಯ ಬರಲಿ ಅಂತ.”

++++

ನಿನ್ನೆ ರಾತ್ರಿ ನಿಮ್ಮ ಮನೆ ಮುಂದೆ ಮಲಗಿದ್ದ ನಾಯಿ ನನ್ನ ಕಾಲನ್ನ ಕಚ್ಚಿ ಬಿಡ್ತು.

“ ನಮ್ಮ ಮನೇಲಿ ನಾಯಿ ಎಲ್ಲಿಯದು ? ಇಲ್ಲೇ ನಾವೇ ಮಲಗಿದ್ದೆ” ಅಂದರೂ ಮನೆಯಾತ.

++++

ಡಾಕ್ಟರ್ : ನಿಮ್ಮ ಚಿಕಿತ್ಸೆಗೆ ಎರಡು ಬಾಟಲು ರಕ್ತ ಬೇಕು

ರಾಜಕಾರಣಿ : ನನ್ನ ನೆಂಟರಿದ್ದಾರಲ್ಲ ಅವರಲ್ಲಿ ಯಾರದ್ದಾದ್ರೂ ರಕ್ತ ತಗೊಳ್ಳಿ.

ಡಾಕ್ಟರ್ : ಹಾಗೆಲ್ಲ ಪರೀಕ್ಷೆ ಮಾಡದೆ ತಗೊಳೋಕ್ಕಾಗಲ್ಲ. ಮ್ಯಾಚ್ ಆಗಬೇಡವೇ ?

ರಾಜಕಾರಣಿ : ತಗೊಳಿ ಡಾಕ್ಟರೇ.. ಮ್ಯಾಚ್ ಆಗುತ್ತೆ. ಯಾಕಂದ್ರೆ ಅವರೆಲ್ಲ ನನ್ನ ರಕ್ತ ಹೀರೆ ಬೆಳೆದಿರೋದು.

++++

ಸ್ವಾಮಿ : ಈಗಿನ ಕಾಲದ ಹುಡುಗಿಯರು ತವರು ಮನೆಗೆ ಹೋಗೋದು ಕಮ್ಮಿ ಅಲ್ವಾ?

ಗುರು : ಹೌದು, ನನ್ನ ಹೆಂಡ್ತಿ ಅವಳ ಕಡೆ ನೆಂಟ್ರು ಮನೆಗೆ ಬಂದಾಗ ಒಂದೆರಡು ದಿನ ನಿಮ್ಮಮ್ಮನ ಮನೆಗೆ ಹೋಗಿರಿ ಅಂತ ನನ್ನನ್ನೇ ತವರು ಮನೆಗೆ ಕಳಿಸಿಬಿಡುತ್ತಾಳೆ.

++++

ಪೋಲಿಸ್ ಅಧಿಕಾರಿ : ಸರಿ, ನಿನ್ನ ಕಳೆದುಹೋದ ಸೈಕಲಿನ ನಂಬರ್ ಹೇಳು.

ಕಳಕೊಂಡ : ನಂಬರ್ ಸೈಕಲ್ಲಿನೊಡನೆಯೇ ಕಳೆದು ಹೋಗಿದೆ ಸರ್

ಹಿಂದಿನ ಲೇಖನದೈನಂದಿನ ಜೀವನದಲ್ಲಿ ಯೋಗದ 10 ಆರೋಗ್ಯ ಪ್ರಯೋಜನಗಳು
ಮುಂದಿನ ಲೇಖನ“ಯಾವೋ ಇವೆಲ್ಲಾ’ ಚಿತ್ರದ ಆಡಿಯೋ ಬಿಡುಗಡೆ