ಶಿವ : ಯಾಕಯ್ಯ ಕಾರು ಪಾರ್ಕ್ ಮಾಡಿ ಅದರ ಎರಡು ಚಕ್ರ ಬಿಚ್ಚುತ್ತಾ ಇದ್ದೀಯಾ ?
ಬಾಲು : ಯಾಕೆ ಬೋರ್ಡ್ ಕಾಣಿಸ್ತಿಲ್ವ ? parking for two wheelers only ಅಂತಿದೆ.
++++
ಗಿರೀಶ : ಮದುವೆಯಾದ ಇಷ್ಟು ವರ್ಷದಲ್ಲಿ 10-15 ಸಂದರ್ಭದಲ್ಲಿ ನೀವು ಬಹಳ ಖುಷಿಯಾಗಿದ್ದೆ ಅಂದ್ಯಲ್ಲ ಯಾವುದದು ?
ತಿಮ್ಮ : ನನ್ನ ಹೆಂಡ್ತಿ ತವರುಮನೆಗೆ ಹೋದಾಗ ?
++++
“ನಾವು ಮಾತನಾಡುವ ಮನೆ ಮಾತಿಗೆ-ಮಾತೃಭಾಷೆ ಎಂದು ಏಕೆ ಅನ್ನುವರು ?”
“ಬಹುಶಃ ಮನೆಯಲ್ಲಿ ತಂದೆಗಿಂತ ತಾಯಿಯ ಮಾತೇ ಹೆಚ್ಚು ಕೇಳಿ ಬರುತ್ತಿರುವುದರಿಂದ !”
++++
ಟೀಚರ್ : ʼನೆರೆಹೊರೆʼ ಎಂದರೇನು ?
ಬಾಲು : ಸರ್, ಅಕ್ಕ-ಪಕ್ಕದ ಮನೆಯವರು ʼನೆರೆʼ, ಅವರು ಆಗಾಗ ಬಂದು ಕಾಫಿ ಪುಡಿ, ಸಕ್ಕರೆ, ಉಪ್ಪು, ಕೇಳಿದರೆ ʼಹೊರೆʼ ಸರ್…
++++
“ನೀನು ಯಾಕೆ ಭಿಕ್ಷೆ ಬೇಡ್ತಿ?”
“ಕುಡಿಯೋಕ್ಕೆ ಹಣ ಬೇಕು.”
“ಯಾಕೆ ಕುಡೀತಿ”
“ಭಿಕ್ಷೆ ಬೇಡೋಕೆ ಧೈರ್ಯ ಬರಲಿ ಅಂತ.”
++++
ನಿನ್ನೆ ರಾತ್ರಿ ನಿಮ್ಮ ಮನೆ ಮುಂದೆ ಮಲಗಿದ್ದ ನಾಯಿ ನನ್ನ ಕಾಲನ್ನ ಕಚ್ಚಿ ಬಿಡ್ತು.
“ ನಮ್ಮ ಮನೇಲಿ ನಾಯಿ ಎಲ್ಲಿಯದು ? ಇಲ್ಲೇ ನಾವೇ ಮಲಗಿದ್ದೆ” ಅಂದರೂ ಮನೆಯಾತ.
++++
ಡಾಕ್ಟರ್ : ನಿಮ್ಮ ಚಿಕಿತ್ಸೆಗೆ ಎರಡು ಬಾಟಲು ರಕ್ತ ಬೇಕು
ರಾಜಕಾರಣಿ : ನನ್ನ ನೆಂಟರಿದ್ದಾರಲ್ಲ ಅವರಲ್ಲಿ ಯಾರದ್ದಾದ್ರೂ ರಕ್ತ ತಗೊಳ್ಳಿ.
ಡಾಕ್ಟರ್ : ಹಾಗೆಲ್ಲ ಪರೀಕ್ಷೆ ಮಾಡದೆ ತಗೊಳೋಕ್ಕಾಗಲ್ಲ. ಮ್ಯಾಚ್ ಆಗಬೇಡವೇ ?
ರಾಜಕಾರಣಿ : ತಗೊಳಿ ಡಾಕ್ಟರೇ.. ಮ್ಯಾಚ್ ಆಗುತ್ತೆ. ಯಾಕಂದ್ರೆ ಅವರೆಲ್ಲ ನನ್ನ ರಕ್ತ ಹೀರೆ ಬೆಳೆದಿರೋದು.
++++
ಸ್ವಾಮಿ : ಈಗಿನ ಕಾಲದ ಹುಡುಗಿಯರು ತವರು ಮನೆಗೆ ಹೋಗೋದು ಕಮ್ಮಿ ಅಲ್ವಾ?
ಗುರು : ಹೌದು, ನನ್ನ ಹೆಂಡ್ತಿ ಅವಳ ಕಡೆ ನೆಂಟ್ರು ಮನೆಗೆ ಬಂದಾಗ ಒಂದೆರಡು ದಿನ ನಿಮ್ಮಮ್ಮನ ಮನೆಗೆ ಹೋಗಿರಿ ಅಂತ ನನ್ನನ್ನೇ ತವರು ಮನೆಗೆ ಕಳಿಸಿಬಿಡುತ್ತಾಳೆ.
++++
ಪೋಲಿಸ್ ಅಧಿಕಾರಿ : ಸರಿ, ನಿನ್ನ ಕಳೆದುಹೋದ ಸೈಕಲಿನ ನಂಬರ್ ಹೇಳು.
ಕಳಕೊಂಡ : ನಂಬರ್ ಸೈಕಲ್ಲಿನೊಡನೆಯೇ ಕಳೆದು ಹೋಗಿದೆ ಸರ್
ಕೆ ಸುಧಾಕರ್ ಗೆ ಗಂಡಾಂತರ.
ಕಾಂಗ್ರೆಸ್ ಕಾರ್ಯಕರ್ತರಿಗೆ ಐಟಿ ಕಿರುಕುಳ
ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆ ದ್ವಂಸ
ಏಪ್ರಿಲ್ 26ಕ್ಕೆ ಮೊದಲ ಹಂತದ ಚುನಾವಣೆ……
'ಕೈ' ಪರ ಪ್ರಚಾರದಲ್ಲಿದ್ದಾಗ ತಡೆದ ಬಿಜೆಪಿ ಕಾರ್ಯಕರ್ತರು….
ಹಿರಿಯ ನಾಗರಿಕರಿಗೆ ಹಾಗೂ ಅಂಗವಿಕಲರಿಗೆ ರಾಪಿಡೋ ವತಿಯಿಂದ ಸಿಹಿ ಸುದ್ದಿ
ಏಪ್ರಿಲ್ 26ಕ್ಕೆ ಏನೆಲ್ಲ ಲಭ್ಯವಿರುತ್ತದೆ….
ಲಂಡನ್ನಲ್ಲಿ ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ.
ಲೋಕಸಭಾ ಚುನಾವಣೆಗೆ ಬೆಂಗಳೂರಿನಲ್ಲಿ ನಿಷೇಧಾಗ್ನೆ ಜಾರಿ..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.