ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಟೀಚರ್ : ʼನೆರೆಹೊರೆʼ ಎಂದರೇನು ?

ಬಾಲು : ಸರ್, ಅಕ್ಕ-ಪಕ್ಕದ ಮನೆಯವರು ʼನೆರೆʼ, ಅವರು ಆಗಾಗ ಬಂದು ಕಾಫಿ ಪುಡಿ, ಸಕ್ಕರೆ, ಉಪ್ಪು, ಕೇಳಿದರೆ ʼಹೊರೆʼ ಸರ್…

****

“ನೀನು ಯಾಕೆ ಭಿಕ್ಷೆ ಬೇಡ್ತಿ?”

“ಕುಡಿಯೋಕ್ಕೆ ಹಣ ಬೇಕು.”

“ಯಾಕೆ ಕುಡೀತಿ”

“ಭಿಕ್ಷೆ ಬೇಡೋಕೆ ಧೈರ್ಯ ಬರಲಿ ಅಂತ.”

****

ನಿನ್ನೆ ರಾತ್ರಿ ನಿಮ್ಮ ಮನೆ ಮುಂದೆ ಮಲಗಿದ್ದ ನಾಯಿ ನನ್ನ ಕಾಲನ್ನ ಕಚ್ಚಿ ಬಿಡ್ತು.

“ ನಮ್ಮ ಮನೇಲಿ ನಾಯಿ ಎಲ್ಲಿಯದು ? ಇಲ್ಲೇ ನಾವೇ ಮಲಗಿದ್ದೆ” ಅಂದರೂ ಮನೆಯಾತ.

****

ಡಾಕ್ಟರ್ : ನಿಮ್ಮ ಚಿಕಿತ್ಸೆಗೆ ಎರಡು ಬಾಟಲು ರಕ್ತ ಬೇಕು

ರಾಜಕಾರಣಿ : ನನ್ನ ನೆಂಟರಿದ್ದಾರಲ್ಲ ಅವರಲ್ಲಿ ಯಾರದ್ದಾದ್ರೂ ರಕ್ತ ತಗೊಳ್ಳಿ.

ಡಾಕ್ಟರ್ : ಹಾಗೆಲ್ಲ ಪರೀಕ್ಷೆ ಮಾಡದೆ ತಗೊಳೋಕ್ಕಾಗಲ್ಲ. ಮ್ಯಾಚ್ ಆಗಬೇಡವೇ ?

ರಾಜಕಾರಣಿ : ತಗೊಳಿ ಡಾಕ್ಟರೇ.. ಮ್ಯಾಚ್ ಆಗುತ್ತೆ. ಯಾಕಂದ್ರೆ ಅವರೆಲ್ಲ ನನ್ನ ರಕ್ತ ಹೀರೆ ಬೆಳೆದಿರೋದು.

****

ಸ್ವಾಮಿ : ಈಗಿನ ಕಾಲದ ಹುಡುಗಿಯರು ತವರು ಮನೆಗೆ ಹೋಗೋದು ಕಮ್ಮಿ ಅಲ್ವಾ?

ಗುರು : ಹೌದು, ನನ್ನ ಹೆಂಡ್ತಿ ಅವಳ ಕಡೆ ನೆಂಟ್ರು ಮನೆಗೆ ಬಂದಾಗ ಒಂದೆರಡು ದಿನ ನಿಮ್ಮಮ್ಮನ ಮನೆಗೆ ಹೋಗಿರಿ ಅಂತ ನನ್ನನ್ನೇ ತವರು ಮನೆಗೆ ಕಳಿಸಿಬಿಡುತ್ತಾಳೆ.

****

ಪೋಲಿಸ್ ಅಧಿಕಾರಿ : ಸರಿ, ನಿನ್ನ ಕಳೆದುಹೋದ ಸೈಕಲಿನ ನಂಬರ್ ಹೇಳು.

ಕಳಕೊಂಡ : ನಂಬರ್ ಸೈಕಲ್ಲಿನೊಡನೆಯೇ ಕಳೆದು ಹೋಗಿದೆ ಸರ್

ಹಿಂದಿನ ಲೇಖನಶೀರ್ಷಾಸನ – ಯೋಗಾಸನಗಳ ರಾಜ
ಮುಂದಿನ ಲೇಖನಇಂದಿನ ರಾಶಿ ಭವಿಷ್ಯ