ಮನೆ ಹಾಸ್ಯ ಹಾಸ್ಯ

ಹಾಸ್ಯ

0

ನೌಕರ : ಸ್ವಾಮಿ ಮುಂದೆ ನಿಮ್ಮನೇಲಿ ಕೆಲಸ ಮಾಡೋದಿಲ್ಲ

ರಾಜು : ನಮ್ಮನೇಲಿ ನಿನಗೇನು ಅಂತ ತೊಂದರೆಯಾಯ್ತು ?

ನೌಕರ : ನಿಮ್ಮಾಕೆ ಯಾವಾಗಲೂ ನಿಮ್ಮನ್ನು ಗದರಿಸಿದಂತೆ ನನ್ನೂ ಗದರಿಸುತ್ತಾರೆ, ಕೈ ಮಾಡ್ತಾರೆ. ನನಗೂ ನಿಮಗೂ ಸ್ವಲ್ಪನಾದರೂ ವ್ಯತ್ಯಾಸ ಬೇಡವ ?   

***

ಡಾಕ್ಟರ್ :  ರಾಜು ಸತ್ತಿರೋ ಹಾಗಿದೆ, ತೆಗೆದು ಡೆತ್ ವಾರ್ಡಿಗೆ ಹಾಕಿ.

ರಾಜು : ನರ್ಸ್ ನನ್ ಮಾತು ಕೇಳಿ. ನಾನು ಸತ್ತಿಲ್ಲ.

ನರ್ಸ್ : ಸುಮ್ನೆ ಬಿದ್ಕೊಳ್ಳಯ್ಯ, ಡಾಕ್ಟರ್ಗಿಂತ ನಿನ್ಗೇನು ಮಹಾ ಗೊತ್ತು.

***

ರಾಜು : (ಫೋನಿನಲ್ಲಿ) ಅಲ್ವೋ ಕಿಟ್ಟು, ನೀನು ಕಳುಹಿಸಿದ ನಾಯಿ ಪ್ರಯೋಜನವಿಲ್ಲ.

ಕಿಟ್ಟು :ಯಾಕೋ ಏನ್ ಮಾಡ್ತು ?

ರಾಜು : ಏನು ಮಾಡಿಲ್ಲ ಅಂತ್ಲೇ ಫೋನ್ ಮಾಡ್ತಾ ಇರೋದು. “ಯಾರೇ ಬರಲಿ, ಕಚ್ಚಿ ಬಿಸಾಕುತ್ತೆ” ಅಂತ ಹೇಳಿದ್ದೆ. ನಮ್ಮತ್ತೆ ಬಂದು 15 ದಿನ ಆಯ್ತು ಏನು ಮಾಡುತ್ತಿಲ್ಲ.

ಹಿಂದಿನ ಲೇಖನಬಲಮುರಿಯ ನೀರಲ್ಲಿ ಮುಳುಗಿ ವಿದ್ಯಾರ್ಥಿ ಸಾವು
ಮುಂದಿನ ಲೇಖನಕರ್ನಾಟಕದ ಕ್ರೀಡಾಪಟುಗಳಿಗೆ ನಗದು ಬಹುಮಾನ ನೀಡಲು ಅರ್ಜಿ ಆಹ್ವಾನ