ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಒಬ್ಬ ತನ್ನ ನೋಯುತ್ತಿದ್ದ ಹಲ್ಲು ಕೀಳಿಸಲು ಇಸ್ಲಾಮಾಬಾದ್ಀನಿಂದ ಕರಾಚಿಗೆ ಬಂದ. ದಂತ ವೈದ್ಯರು ಪ್ರಶ್ನಿಸಿದರು “ಅಲ್ಲಾ ಇಸ್ಲಾಮಾಬಾದಿನಲ್ಲೇ ಸಾಕಷ್ಟು ದಂತ ವೈದ್ಯರಿದ್ದಾರೆ. ಇಲ್ಲಿಯ ತನಕ ಬರುವ ಆಗತ್ಯ?”

ಆತ: “ನಮಗೆ ಇಸ್ಲಾಮಾಬಾದಿನಲ್ಲಿ ಬಾಯಿ ತೆರೆಯಲು ಇಲ್ಲಿಯ ಹಾಗೆ ಆವಕಾಶವಿಲ್ಲ. ಆದಕ್ಕೇ ಇಲ್ಲಿಗೆ ಬಂದಿದ್ದು!”

Join Our Whatsapp Group

***

ಅಂದು ಆ ತರುಣ ತುಂಬಾ ವ್ಯಗ್ರವಾಗಿದ್ದ. ಕುಟುಂಬ ಯೋಜನೆಯ ಕ್ಲಿನಿಕ್ ಒಂದಕ್ಕೆ ನುಗ್ಗಿ ಅಲ್ಲಿದ್ದ ಡಾಕ್ಟರಿಗೆ

ತರಾಟೆಗೆ ತೆಗೆದು ಕೊಂಡ.

“ನೀವು ನನ್ನ ಮೇಲೆ ವ್ಯಾಸೆಕ್ಟಮಿ ಶಸ್ತ್ರಕ್ರಿಯೆ ನಡೆಸಿದಿರಿ. ಆದರೂ ನನ್ನ ಹೆಂಡತಿ ಮತ್ತೆ ಬಸುರಿ ಆಗಿದ್ದಾಳೆ

ನಿಮಗೆ ಕೆಲಸದಲ್ಲಿ ಸ್ವಲ್ಪವೂ ಅನುಭವವಿಲ್ಲವೆಂದು ಕಾಣುತ್ತೆ” ದಬಾಯಿಸಿದ.

ವೈದ್ಯ: “ಶಾಂತಿ, ಶಾಂತಿ, ನಾನು ನಿನ್ನ ಮೇಲೆ ಆಪರೇಷನ್ ನಡೆಸಿರುವುದು ನಿಜ; ಆದರೆ ನಿನ್ನ ನೆರೆಹೊರೆಯವರ

ಮೇಲಲ್ಲವಲ್ಲಾ?” ತರುಣನ ಬಾಯಿ ಏಕ್‌ದಂ ಮುಚ್ಚಿತು.

****

“ಪೇಪರ್ ಓದ್ಯಾ ಶಾಮಣ್ಣಾ?” ಶೀನಣ್ಣ ಕೇಳಿದ. ಸಾರಿಗೆ ಬಸ್ ಉರುಳಿ ಎಂಟು ಹತ್ತು ಜನ ಸತ್ತರಂತೆ ಶಾಮಣ್ಣ “ಹಾಗಾದರೆ ಅದು ಇನ್ನೆಂತಹ ಬಾರಿ ಪಾತ್ರೆಯಪ್ಪಾ ಸಾರು ಮಾಡಿದ್ದು? ಬಸ್ಸು ಮುಳುಗುವಷ್ಟು ಭಾರಿ ಪಾತ್ರೆ ನಾನು ಇವತ್ತೇ ಕೇಳುತ್ತಿರುವುದು ತುಂಬಾ ತಮಾಷೆ ಆಗಿದೆಯಲ್ಲಾ!”

ಹಿಂದಿನ ಲೇಖನಯಾವ ಸಮಯದಲ್ಲಿ ವ್ಯಾಯಾಮ ಒಳ್ಳೆಯದು?
ಮುಂದಿನ ಲೇಖನಈ ಒಂದು ವಸ್ತುವನ್ನು ಮನಿ ಪ್ಲಾಂಟ್​ ಗೆ ಕಟ್ಟಿದ್ರೆ ಅದೃಷ್ಟ ಬದಲಾಗಿ ಶ್ರೀಮಂತರಾಗ್ತಾರಂತೆ!