ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಶಂಕರ : ಏನು ರಾಮು ಹೋಗಿ ಹೋಗಿ ಅವಳನ್ನು ಮದುವೆ ಮಾಡಿಕೊಳ್ಳುತ್ತಿದ್ದೀಯ ?

ರಾಮು : ಅವಳು ನನ್ನ ಪ್ರಾಣ ಉಳಿಸಿದವಳು,

ಶಂಕರ : ಹೇಗೆ?

ರಾಮು : ನಾವಿಬ್ಬರು ಒಟ್ಟಿಗೆ ಇದ್ದುದನ್ನು ನೋಡಿ ಅವರಪ್ಪ ಮಚ್ಚು ಹಿಡಿದು ಬಂದಿದ್ದರು, ನನ್ನ ಕೊಲ್ತೀನಂತ, ಇವಳು ಕೊಲ್ಲಬೇಡ ಅಂತ, ಒಪ್ಪಿಸಿ ನನ್ನ ಪ್ರಾಣ ಉಳಿಸಿದಳು.

***

“ಮೇಡಂ, ಇದು ಟ್ಯೂ ಇನ್ ವನ್ ಔಷಧಿ ಮನುಷ್ಯರಿಗೂ ಕೂಡಿಸಬಹುದು, ನಾಯಿಗಳಿಗೂ ಕುಡಿಸಬಹುದು” ಅಂಗಡಿಯತಾ ಹೇಳಿದ.

“ಹೌದಾ! ಹಾಗಿದ್ರೆ ಒಂದೇ ಬಾಟಲ್ ಸಾಕು ನಾಯಿಗೆ ಹಾಕಿ ಉಳಿದರೆ ಆಮೇಲೆ ನಮ್ಮವರಿಗೆ ಕೊಡ್ತೀನಿ.

***

ಟೀಚರ್ : ಚೈನಾ ಅಥವಾ ಚಂದ್ರ ಇವೆರಡರಲ್ಲಿ ನಮ್ಮಿಂದ ಅತ್ಯಂತ ದೂರದಲ್ಲಿ ಇರುವುದು ಯಾವುದು? 

ವಿದ್ಯಾರ್ಥಿ : ಚೈನಾ.

ಟೀಚರ್ : ಯಾಕೆ?

ವಿದ್ಯಾರ್ಥಿ : ಏಕೆಂದರೆ ನಾವು ಎಲ್ಲಾ ಶುಭ್ರ ರಾತ್ರಿಗಳಲ್ಲೂ ಚಂದ್ರನನ್ನು ಕಾಣಬಹುದು, ಆದರೆ ಚೀನಾ ನಮಗೆ ಕಾಣಿಸುವುದಿಲ್ಲ. 

***

ನಂಜುಂಡ : ಪ್ರೀತಿಗೂ, ಮದುವೆಗೂ  ಅಂತರ ಹೆಚ್ಚಾದರೆ ಏನಾಗುತ್ತೆ?

ಪ್ರಭು : ಏನಿಲ್ಲಾ ಮದುವೆಗೂ ಮಗುಗೂ ಅಂತರ ಕಡಿಮೆಯಾಗುತ್ತೆ.

ಹಿಂದಿನ ಲೇಖನಮೊದಲು ನಮ್ಮ ರೈತರ ಬೆಳೆಗಳಿಗೆ ನೀರು ಹರಿಸಿ, ಬೆಳೆ ಸಂರಕ್ಷಿಸಿ: ಸಿದ್ದರಾಮಯ್ಯ
ಮುಂದಿನ ಲೇಖನಬರಿಗಾಲಿನಲ್ಲಿ ಕಚೇರಿಗೆ ಬರುವವರ ಬಗ್ಗೆ ಕಾರಿನಲ್ಲಿ ಓಡಾಡುವ ನಿಮಗೆ ಗೌರವವಿರಲಿ: ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ