ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಗುರುತು

ಗುಂಡ ಊಟ ಮಾಡುವಾಗ ಮನೆಯೊಡೆಯನನ್ನು ಕೇಳಿದ.

 “ಯಾಕೆ ನಿಮ್ಮ ನಾಯಿ ನಾನು ತಿಂಡಿ ತಿನ್ನುವಾಗೆಲ್ಲ ಜೋರಾಗಿ ಬೊಗಳುತ್ತೆ?”

ಅದಕ್ಕೆ ಮನೆಯೊಡೆಯ ಹೇಳಿದ “ಅದರ ತಟ್ಟೆಯಲ್ಲಿ ಬೇರೆ ಯಾರಿಗೆ ತಿಂಡಿ ಕೊಟ್ಟರು ಅದಕ್ಕೆ ಸಿಟ್ಟು.”

Join Our Whatsapp Group

*****

ತಾಯತದ ಪ್ರಭಾವ

ಗುಂಡ : “ನೀವು ಕೊಟ್ಟ ತಾಯತದ ಪ್ರಭಾವ ಚೆನ್ನಾಗಿದೆ ಸ್ವಾಮಿ.”

ಶಾಶ್ತ್ರಿಗಳು : “ತಾಯತ ಕಟ್ಟಿದ ಮೇಲೆ ನಿಮ್ಮ ಹೆಂಡತಿಗೆ ಹಿಡಿದ ಭೂತ ಓಡಿ ಹೋಯಿತು ತಾನೆ”

ಗುಂಡ : “ಇಲ್ಲ ಸ್ವಾಮಿಗಳೇ ನನ್ನ ಹೆಂಡತಿಯೇ ಓಡಿ ಹೋದಳು.”

*****

ಯಾವುದು?

ಶೀಲಾ : “ಸಾರಾಯಿ, ಮತ್ತು ನೀರು ಇದರಲ್ಲಿ ಯಾವುದು ಅಪಾಯಕಾರಿ”

ಗುಂಡ : “ನೀರು”

ಶೀಲಾ : “ಅದು ಹ್ಯಾಗೆ?”

ಗುಂಡ : “ಪ್ರವಾಹ ಬಂದರೆ ಸಾವಿರಾರು ಜನ ಸಾಯುತ್ತಾರೆ, ಆದರೆ ಈ ಸಾರಾಯಿಯಿಂದ ಎಲ್ಲಿ ಅಷ್ಟೊಂದು ಜನ ಸಾಯುತ್ತಾರೆ?”