ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಶಂಕರ : ಒಂದೊಂದು ಸಾರಿ ಸುಳ್ಳೇ ನಿಜ ಆಗ್ಬಿಡುತ್ತೆ ಕಣೋ.

ರಘು : ಯಾಕೋ ಏನಾಯ್ತು

ಶಂಕರ : ನಮ್ಮತ್ತೆಗೆ ಹುಷಾರಿಲ್ಲ, ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಂತ  ಡೋಂಗಿ ಹೊಡೆದು ಅರ್ಧ ದಿನ ರಜಾ ಹಾಕಿ ಮನೆಗೆ ಹೋದರೆ ನನ್ನ ಗ್ರಹಚಾರ ನಿಜವಾಗಿ ನಮ್ಮತ್ತೆ ಬಂದಿರೋದಾ.

ರೋಗಿ : (ತರರಾರಿನ ಧ್ವನಿಯಲ್ಲಿ) ಏನು ಹಲ್ಲು ಕೀಳೋದಕ್ಕೆ, ಅದೂ ಒಂದು ನಿಮಿಷದಲ್ಲಿ ಆಗೋ ಕೆಲಸಕ್ಕೆ ಫೀಸ್?

ವೈದ್ಯ : ನಿಮಗೆ ಬೇಕಿದ್ದರೆ ನಿಧಾನವಾಗಿ ಕೇಳುತ್ತೇನೆ ಬಿಡಿ.

Join Our Whatsapp Group

    ******** 

ಹೆಂಡತಿ : ನಿನ್ನೆ ರಾತ್ರಿ ನೀವೊಂದು ನೆಕ್ಲೆಸ್ ಕೊಡಿಸಿದಂತೆ ಕನಸು ಬಿತ್ತು, ಅದರ ಅರ್ಥ ಏನು ಇರಬಹುದು?

ಗಂಡ : ಇವತ್ತು ಸಂಜೆ ನಿಮಗೆ ಗೊತ್ತಾಗುತ್ತೆ

ಹೆಂಡತಿ ಖುಷಿಯಿಂದ ಕಾದು ಕುಳಿತಳು. ಸಂಜೆ ಮನೆಗೆ ಬಂದಾಗ ಗಂಡ ಗಿಫ್ಟ್ ಪ್ಯಾಕೆಟೊಂದನ್ನು ಕೊಟ್ಟ. ಕೂತೂಹಲದಿಂದ ಅದನ್ನು ಬಿಚ್ಚಿ ನೋಡಿದರೆ “ಕನಸುಗಳನ್ನು ಅರ್ಥಮಾಡಿಕೊಳ್ಳುವುದು ಹೇಗೆ” ಎಂಬ ಪುಸ್ತಕವಿತ್ತು.

 *********** 

ಗೋಪಾಲ : ಹುಡುಗಿಯರಿಗೆ ಐ ಲವ್ ಯು ಹೇಳುವ ಸೇಫ್ ಜಾಗ ಯಾವುದು?

ರಮೇಶ : ದೇವಸ್ಥಾನ ಕಣೋ

ಗೋಪಾಲ : ಅದು ಹೇಗೆ?

ರಮೇಶ : ಅಲ್ಲಿ ಮಾತ್ರ ತಾನೇ ಅವರ ಚಪ್ಪಲಿ ಧರಿಸದೇ ಇರುವುದು.

ಹಿಂದಿನ ಲೇಖನನಾಡಹಬ್ಬ ದಸರಾ ಮಹೋತ್ಸವ 2023: ಅರ್ಥಪೂರ್ಣ ಹಾಗೂ ಅದ್ದೂರಿ ಆಚರಣೆಗೆ ತೀರ್ಮಾನ
ಮುಂದಿನ ಲೇಖನಆ.1ರಿಂದ ಬೆಂ- ಮೈ ಹೆದ್ದಾರಿಯಲ್ಲಿ ಬೈಕ್ ಹಾಗೂ ಆಟೋ ನಿರ್ಬಂಧ