ಮನೆ ರಾಷ್ಟ್ರೀಯ ಆಂಧ್ರ‍ಪ್ರದೇಶದ ರಾಜ್ಯಪಾಲರಾಗಿ ಕನ್ನಡಿಗ ಎಸ್. ಅಬ್ದುಲ್‌ ನಜೀರ್ ಪ್ರಮಾಣ ವಚನ

ಆಂಧ್ರ‍ಪ್ರದೇಶದ ರಾಜ್ಯಪಾಲರಾಗಿ ಕನ್ನಡಿಗ ಎಸ್. ಅಬ್ದುಲ್‌ ನಜೀರ್ ಪ್ರಮಾಣ ವಚನ

0

ವಿಜಯವಾಡ: ಆಂಧ್ರ‍ಪ್ರದೇಶದ ನೂತನ ರಾಜ್ಯಪಾಲರಾಗಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ಕನ್ನಡಿಗ ಎಸ್. ಅಬ್ದುಲ್‌ ನಜೀರ್ ಅವರು ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು.

ರಾಜಭವನಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಆಂಧ್ರಪ್ರದೇಶ ಹೈಕೋರ್ಟ್‌’ನ ಮುಖ್ಯನ್ಯಾಯಮೂರ್ತಿ ಪ್ರಶಾಂತ್‌ ಕುಮಾರ್‌ ಮಿಶ್ರಾ ಅವರು, ನಜೀರ್‌ ಅವರಿಗೆ ಪ್ರಮಾಣ ವಚನ ಬೋಧಿಸಿದರು.

ಮುಖ್ಯಮಂತ್ರಿ ಜಗನ್‌’ಮೋಹನ್‌ ರೆಡ್ಡಿ, ಅವರ ಪತ್ನಿ ವೈ.ಎಸ್‌ ಭಾರತಿ, ರಾಜ್ಯದ ಮಂತ್ರಿಗಳು ಹಾಗೂ ಹೈಕೋರ್ಟ್‌’ನ ನ್ಯಾಯಮೂರ್ತಿಗಳು ಸಮಾರಂಭದಲ್ಲಿ ಹಾಜರಿದ್ದರು.

ಈ ಹಿಂದೆ ಆಂಧ್ರಪ್ರದೇಶ ರಾಜ್ಯಪಾಲರಾಗಿದ್ದ ಬಿಸ್ವಾ ಭೂಷನ್‌ ಹರಿಚಂದ್ರನ್‌ ಅವರನ್ನು ಚತ್ತೀಸ್‌’ಗಢ ವರ್ಗಾವಣೆ ಮಾಡಲಾಗಿದೆ.

ಹಿಂದಿನ ಲೇಖನಅರಸೀಕೆರೆ ಶಿವ ದೇವಾಲಯ
ಮುಂದಿನ ಲೇಖನಎಸ್ಎಸ್ಎಲ್’ಸಿ ಪರೀಕ್ಷೆ: ಪ್ರಸಾರ ಭಾರತಿಯಲ್ಲಿ ಫೆ.27 ರಿಂದ ಬಾನ್ ದನಿ ವಿಶೇಷ ಕಾರ್ಯಕ್ರಮ