ಕೋಲಾರ: ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶ್ರೀನಿವಾಸಪುರ ಪಟ್ಟಣದ ಗಂಗೋತ್ರಿ ಪಿಯು ಕಾಲೇಜಿನ ಎಸ್.ಎಂ.ಕೌಶಿಕ್ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ.
ಆಂಧ್ರ ಗಡಿಭಾಗಕ್ಕೆ ಹೊಂದಿಕೊಂಡಿರುವ, ತೆಲುಗು ಭಾಷೆ ಪ್ರಭಾವವಿರುವ ಗ್ರಾಮೀಣ ಪ್ರದೇಶವಾದ ಶ್ರೀನಿವಾಸಪುರ ಶೈಕ್ಷಣಿಕವಾಗಿ ಇದೇ ಮೊದಲ ಬಾರಿ ಇಂಥ ಅದ್ಭುತ ಸಾಧನೆ ಮಾಡಿದೆ.
ನಿತ್ಯ ಎರಡು ಗಂಟೆಯಷ್ಟೇ ಓದಿಗೆ ಮೀಸಲಿಡುತ್ತಿದ್ದೆ. ಯಾವುದೇ ಕೋಚಿಂಗ್ ಪಡೆದಿಲ್ಲ. ಟ್ಯೂಷನ್ ಗೆ ಹೋಗಿಲ್ಲ. ಮೊದಲ ಸ್ಥಾನ ಬರಬಹುದೆಂದು ಕನಸಿನಲ್ಲೂ ಯೋಚನೆ ಮಾಡಿರಲಿಲ್ಲ. ಅವಕಾಶ ಸಿಕ್ಕರೆ ಬೆಂಗಳೂರಿನ ಆರ್.ವಿ.ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಓದಬೇಕು ಅಂದುಕೊಂಡಿದ್ದೇನೆ ಎಂದು ಕೌಶಿಕ್ ತಿಳಿಸಿದರು.
ಗಂಗೋತ್ರಿ ಪಿಯು ಕಾಲೇಜಿನ ಮಾಲೀಕ ಮುರಳೀನಾಥ್ ಪುತ್ರ ಕೌಶಿಕ್. ಸಹೋದರ ಈಶ್ವರ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ.
ನಮ್ಮ ಪಾಲಿಗೆ ಇದು ಡಬಲ್ ಧಮಾಕಾ. ನನ್ನ ಮಾಲೀಕತ್ವದ ಕಾಲೇಜಿಗೆ ಇಡೀ ರಾಜ್ಯದಲ್ಲಿ ವಿಜ್ಞಾನದಲ್ಲಿ ಮೊದಲ ಸ್ಥಾನ ಬಂದಿದೆ. ಅದಕ್ಕೆ ಕಾರಣ ನನ್ನ ಪುತ್ರ ಎಂದು ಮುರಳೀನಾಥ್ ಹೇಳಿದ್ದಾರೆ.
ಮೋದಿಯವರ ಬಗ್ಗೆ ಹಾಡು ಹಾಡಿದ್ದಕ್ಕೆ ಮುಸ್ಲಿಮರಿಂದ ಮಾರಣಾಂತಿಕ ಹಲ್ಲೆ…
ಬರುತ್ತಿದೆ ಅಯೋಧ್ಯ ರಾಮನ "ಬಯೋ ಪಿಕ್"…
ವಿಶ್ವ ದಾಖಲೆ ನಿರ್ಮಿಸಿದ ಭಾರತೀಯ ಬಾಲಕಿ…
ವಿಮಾನದಲ್ಲಿ ನಮಾಜ್
ಬಿಡುಗಡೆಯಾಗಿದೆ, ಜಗತ್ತಿನ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿ
ನಟಿ ಹರ್ಷಿಕ ಪೂರ್ಣಚ್ಚ ಹಾಗೂ ನಟ ಭುವನ್ ಮೇಲೆ ಹಲ್ಲೆ.
ಶಿಲ್ಪಾ ಶೆಟ್ಟಿ ರಾಜ್ ಕುಂದ್ರಾಗೆ ಎದುರಾಗಿದೆ ಸಂಕಷ್ಟ
ಮತದಾನದ ನಂತರ ಸಾವನಪ್ಪಿದ ವೃದ್ಧ….
ಮತ್ತೆ ರಾಜ್ಯಕ್ಕೆ ಆಗಮಿಸಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ…
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.