ಮನೆ ಸುದ್ದಿ ಜಾಲ ಆ.21 ರಿಂದ 29 ರವರೆಗೆ ಕೃಷ್ಣೋತ್ಸವ ಕಾರ್ಯಕ್ರಮ

ಆ.21 ರಿಂದ 29 ರವರೆಗೆ ಕೃಷ್ಣೋತ್ಸವ ಕಾರ್ಯಕ್ರಮ

0

ಮೈಸೂರು (Mysuru): ಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ಆಗಸ್ಟ್ 21 ರಿಂದ 29 ರವರೆಗೆ ಮೈಸೂರು ಅರಮನೆ ಆವರಣದಲ್ಲಿರುವ ಶ್ರೀ ಕೃಷ್ಣಸ್ವಾಮಿ ದೇವಸ್ಥಾನದಲ್ಲಿ ಕೃಷ್ಣೋತ್ಸವ ಆಯೋಜಿಸಲಾಗಿದೆ.
ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ ಕೃಷ್ಣೋತ್ಸವದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮಗಳ ವಿವರ: 2022ರ ಆಗಸ್ಟ್ 21 ರಂದು ಭಾನುವಾರ ಶಿಕ್ಯೋತ್ಸವ, ಆಗಸ್ಟ್ 22ರಂದು ಸೋಮವಾರ ಪೂತನಿ ಸಂಹಾರ, ಆಗಸ್ಟ್ 23ರಂದು ಮಂಗಳವಾರ ಶಕಟಾಸುರ ಸಂಸಾರ, ಆಗಸ್ಟ್ 24ರಂದು ಬುಧವಾರ ಬಕಾಸುರ ವಧೆ, ಆಗಸ್ಟ್ 25 ಗುರುವಾರ ಯಮಳಾರ್ಜುನ ಮೋಕ್ಷ, ಆಗಸ್ಟ್ 26ರ ಶುಕ್ರವಾರ ಮೋಹಿನಿ ಅಲಂಕಾರ, ಆಗಸ್ಟ್ 27ರ ಶನಿವಾರ ಮಲ್ಲಯುದ್ಧ, ಆಗಸ್ಟ್ 28 ರ ಭಾನುವಾರ ರಾಸಕ್ರೀಡೆ ಗೋವಿಗೆ ಕಾಮಧೇನು ಅಲಂಕಾರ ರಾತ್ರಿ 8 ಗಂಟೆಗೆ ಕಂಸವಧೆ, ಆಗಸ್ಟ್ 29 ರ ಸೋಮವಾರ ರುಕ್ಮಿಣಿ ಕಲ್ಯಾಣೋತ್ಸವ ಕಾರ್ಯಕ್ರಮಗಳು ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದಿನ ಲೇಖನಪಾಕ್‌ ಡ್ರೋನ್‌ ಗಳ ಮೂಲಕ ಶಸ್ತ್ರಾಸ್ತ್ರ ಪೂರೈಕೆ: ಎನ್‌ಐಎನಿಂದ 8 ಕಡೆ ಶೋಧ
ಮುಂದಿನ ಲೇಖನಐಟಿಬಿಪಿಯಲ್ಲಿ ಕಾನ್ಸ್‌’ಟೇಬಲ್ ಹುದ್ದೆಗೆ ಅರ್ಜಿ ಆಹ್ವಾನ