ಮನೆ ಅಪರಾಧ ಮೈಸೂರು: ತೋಟದ ಮನೆಯಲ್ಲಿ ವ್ಯಕ್ತಿಯ ಬರ್ಬರ ಕೊಲೆ

ಮೈಸೂರು: ತೋಟದ ಮನೆಯಲ್ಲಿ ವ್ಯಕ್ತಿಯ ಬರ್ಬರ ಕೊಲೆ

0

ಮೈಸೂರು: ವ್ಯಕ್ತಿಯೋರ್ವನನ್ನು ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಕೆ. ಆರ್ ನಗರ ತಾಲೂಕಿನ ಅರ್ಜುನ ಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ನಡೆದಿದೆ.

ಗ್ರಾಮದ ರಮೇಶ್ ರಾಜ್ (58) ಕೊಲೆಯಾದ ವ್ಯಕ್ತಿಯಾಗಿದ್ದು, ಹಾಸನ-ಮೈಸೂರು ಹೆದ್ದಾರಿಯ ಪಕ್ಕದ ಜಮೀನಿನ ತೋಟದ ಪಂಪ್‌ಸೆಟ್ ಶೆಡ್ಡ್‌ನಲ್ಲಿ ಕೊಲೆ ಮಾಡಲಾಗಿದ್ದು, ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಈ ಘಟನೆಯಿಂದ ಗ್ರಾಮದ ಜನರಲ್ಲಿ ಆತಂಕ ಮನೆ ಮಾಡಿದೆ.

ಕೊಲೆಯಾದ ರಮೇಶ್ ರಾಜ್ ಅವರಿಗೆ ಇಬ್ಬರು ಪತ್ನಿಯರು, ನಾಲ್ವರು ಗಂಡು ಮಕ್ಕಳು ಮತ್ತು ಓರ್ವ ಪುತ್ರಿ ಇದ್ದಾಳೆ.  ಘಟನೆ ಸಂಬಂಧ ರಮೇಶ್‌ರಾಜ್ ಪತ್ನಿ ಸುಧಾ ಕೆ.ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಎಸ್‌ಪಿ ಆರ್. ಚೇತನ್, ಡಿವೈಎಸ್‌ಪಿ ಡಾ. ಸುಮೀತ್ ಅವರು ಸ್ಥಳ ಪರಿಶೀಲಿಸಿ ಕೊಲೆ ಸಂಬಂಧ ಮಾಹಿತಿ ಪಡೆದರು. ಕೊಲೆ ಪ್ರಕರಣ ಭೇದಿಸಲು ತಂಡ ರಚಿಸಲಾಗಿದೆ.

ಹಿಂದಿನ ಲೇಖನರಷ್ಯಾಗೆ ನಾನೇ ನಂಬರ್ 1 ಟಾರ್ಗೆಟ್: ಉಕ್ರೇನ್ ಅಧ್ಯಕ್ಷ
ಮುಂದಿನ ಲೇಖನಎನ್ ಎಸ್ ಇ ಪ್ರಕರಣ: ಮಾಜಿ ಎಂಡಿ ಚಿತ್ರಾ ರಾಮಕೃಷ್ಣ ಸಲಹೆಗಾರ ಆನಂದ್ ಸುಬ್ರಮಣಿಯನ್ ಬಂಧನ