ಮನೆ ರಾಜ್ಯ ಮಂಡ್ಯ: ಮಣ್ಣು ಬಾಯಿಗೆ ಹಾಕಿಕೊಂಡು ರೈತರ ಆಕ್ರೋಶ

ಮಂಡ್ಯ: ಮಣ್ಣು ಬಾಯಿಗೆ ಹಾಕಿಕೊಂಡು ರೈತರ ಆಕ್ರೋಶ

0

ಮಂಡ್ಯ: ಬಂದ್ ಹಿನ್ನೆಲೆ ಸಂಜಯ ವೃತ್ತದಲ್ಲಿ ಕಾವೇರಿ ಹೋರಾಟ ಕಾವೇರಿದ್ದು, ಮಣ್ಣು ಬಾಯಿಗೆ ಹಾಕಿಕೊಂಡು ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ.

ತಮಿಳುನಾಡಿಗೆ ನೀರು ಬಿಟ್ಟು ರೈತರ ಬಾಯಿಗೆ ಸರ್ಕಾರ ಮಣ್ಣು ಹಾಕಿದೆ‌ ಎಂದು ಪ್ರತಿಭಟನಾಕಾರರು  ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ಬರಗಾಲದ ಮುಖ್ಯಮಂತ್ರಿ. ಸರ್ಕಾರದ ಬಾಯಿಗೆ ಮಣ್ಣು ಹಾಕಬೇಕು ಎಂದು ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಆರಾಧ್ಯ ಕಿಡಿಕಾರಿದ್ದಾರೆ.

ದಕ್ಷಿಣ ವಲಯ ಐಜಿಪಿ ಡಾ.ಬೋರಲಿಂಗಯ್ಯ ಆಗಮಿಸಿ ಬಂದೋ ಬಸ್ತ್ ಪರಿಶೀಲನೆ ನಡೆಸಿದ್ದಾರೆ. ಮಂಡ್ಯ ಡಿಸಿ ಡಾ.ಕುಮಾರ್, ಎಸ್ ಪಿ ಎನ್.ಯತೀಶ್ ರಿಂದ ಮಾಹಿತಿ ಪಡೆದಿದ್ದಾರೆ.

ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ. ರಸ್ತೆ ತಡೆ ಹಿನ್ನೆಲೆ ಕೆಲವೆಡೆ ಟ್ರಾಫಿಕ್ ಡೈವರ್ಶನ್ ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಹಿಂದಿನ ಲೇಖನಟ್ಯ್ರಾಕ್ಟರ್ ಕಳ್ಳತನ ಮಾಡಿದ್ದ ವ್ಯಕ್ತಿಯ ಬಂಧನ
ಮುಂದಿನ ಲೇಖನರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ಪಕ್ಷದಿಂದ ಪ್ರತಿಭಟನೆ