ಮನೆ ರಾಜಕೀಯ ಗೌಡರ ಕುಟುಂಬ ನಂಬರ್‌ ಗೇಮ್‌ ನಲ್ಲಿ ಪಳಗಿದೆ: ಅಶ್ವತ್ಥ ನಾರಾಯಣ

ಗೌಡರ ಕುಟುಂಬ ನಂಬರ್‌ ಗೇಮ್‌ ನಲ್ಲಿ ಪಳಗಿದೆ: ಅಶ್ವತ್ಥ ನಾರಾಯಣ

0

ಬೆಂಗಳೂರು (Bengaluru)- ಎಚ್.ಡಿ.ರೇವಣ್ಣ (H.D.Revanna) ಮತ್ತು ಕುಟುಂಬದವರು ನಂಬರ್ ಗೇಮ್‌ನಲ್ಲಿ ಪಳಗಿದ್ದಾರೆ. ಆದರೆ ನಮಗೆ ನಂಬರ್‌ ಗೇಮ್‌ ನಲ್ಲಿ ನಂಬಿಕೆ ಇಲ್ಲ ಎಂದು ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ (Dr.C.N.Ashwath Narayan) ಹೇಳಿದ್ದಾರೆ.

ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಗೆ ಶಿಕ್ಷಣ ಎಂದರೆ ಏನು ಅಂತ ಗೊತ್ತಿಲ್ಲ ಎಂದು ಹಾಸನದಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ ವ್ಯಂಗ್ಯವಾಡಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಜೆಡಿಎಸ್ “ಸಚಿವ ಅಶ್ವತ್ಥ‌ ನಾರಾಯಣ ಅವರೇ, ಶಿಕ್ಷಣ ನೀಡೋದು ಎಂದರೆ ಸರ್ಕಾರಿ ಕಾಲೇಜು ಮುಚ್ಚಿ ತಮ್ಮ ಹಾಗೇ ಖಾಸಗಿ ಕಾಲೇಜು ತೆರೆದು ಬಡವರಿಂದ ಲಕ್ಷ ಲಕ್ಷ ದೋಚೋದು ಎಂದುಕೊಂಡಿದ್ದೀರಾ.? ರೇವಣ್ಣ ನವರ ಸ್ವಕ್ಷೇತ್ರ ಹೊಳೆನರಸೀಪುರದಲ್ಲಿ 8 ಪ್ರಥಮ ದರ್ಜೆ, 6 ಸ್ನಾತಕೋತ್ತರ, 3 ಪಾಲಿಟೆಕ್ನಿಕ್‌, 1 ಎಂಜಿನಿಯರಿಂಗ್‌, 5 ಐಟಿಐ ಸರ್ಕಾರಿ ಕಾಲೇಜುಗಳಿವೆ ಎಂದು ಜೆಡಿಎಸ್ ಟ್ವೀಟ್ ಮಾಡಿತ್ತು.

ಇದೀಗ ಜೆಡಿಎಸ್ ಟ್ವೀಟ್ ಗೆ ತಿರುಗೇಟು ನೀಡಿ ಅಶ್ವತ್ಥನಾರಾಯಣ ಅವರು ಟ್ವೀಟ್‌ ಮಾಡಿದ್ದು, ನಮಗೆ ನಂಬರ್‌ ಗೇಮ್‌ನಲ್ಲಿ ನಂಬಿಕೆ ಇಲ್ಲ. ಹಾಗೆಯೇ ಶಿಕ್ಷಣ, ಉದ್ಯೋಗ, ಮೂಲ ಸೌಕರ್ಯ ಪೂರೈಸುವ ವಿಷಯದಲ್ಲಿ ರಾಜಕೀಯ ಮಾಡುವ ಅಗತ್ಯವೂ ಇಲ್ಲ ಎಂದಿದ್ದಾರೆ.

ಜೆಡಿಎಸ್‌ನಲ್ಲಿ ಅವರ ಕುಟುಂಬದ 3 ವಿಧಾನಸಭಾ ಸದಸ್ಯರು, 1 ಲೋಕಸಭಾ ಸದಸ್ಯರು, 1 ರಾಜ್ಯಸಭಾ ಸದಸ್ಯರು, 1 ವಿಧಾನ ಪರಿಷತ್ ಸದಸ್ಯರು ಇದ್ದಾರೆ. ಈ ನಂಬರ್‌ನಿಂದ ಅವರ ಕುಟುಂಬದ ಉದ್ಧಾರವಾಯಿತೇ ವಿನಃ ರಾಜ್ಯಕ್ಕೆ ಲಾಭವಾಗಿಲ್ಲ! ಕಿಡಿಕಾರಿದ್ದಾರೆ.

ಈ ನಂಬರ್‌ ಗೇಮ್‌ ಬಿಟ್ಟು ಇರುವ ಶೈಕ್ಷಣಿಕ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸುವ ಜೊತೆ ಉದ್ಯೋಗಾವಕಾಶ ಸೃಷ್ಟಿಸಲು ನಮ್ಮ ಸರ್ಕಾರ ಕೈಗೊಳ್ಳುತ್ತಿರುವ ಕ್ರಮವನ್ನು ಬೆಂಬಲಿಸಲಿ. ಅಧಿಕಾರ ಸಿಕ್ಕಾಗ ಕುಟುಂಬದವರು ಸ್ಪರ್ಧಿಸುವ ಕ್ಷೇತ್ರದ ಸಿಎಂ-ಸೂಪರ್‌ ಸಿಎಂಗಳಂತೆ ನಡೆದುಕೊಂಡ ಸ್ವಯಂ ಘೋಷಿತ ಮಣ್ಣಿನ ಮಕ್ಕಳಿಂದು ರಾಜ್ಯದ ಸಮಗ್ರ ಅಭಿವೃದ್ಧಿಗೆ ದುಡಿಯುತ್ತಿರುವ ನಮ್ಮ ಪಕ್ಷವನ್ನು ದೂಷಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಶಿಕ್ಷಣ, ಕೃಷಿ ಬಗ್ಗೆ ಅಷ್ಟು ಕಾಳಜಿ ಇರುವ ರೇವಣ್ಣ ಅವರಿಗೆ ಅಂದು ಲೋಕೋಪಯೋಗಿ, ಇಂಧನ ಇಲಾಖೆಗಳೇ ಬೇಕಾಗಿದ್ದೇಕೆ? ಎಂದು ಪ್ರಶ್ನಿಸಿದ್ದಾರೆ.

ಹಿಂದಿನ ಲೇಖನರಾಜ್ಯದಲ್ಲಿರುವುದು ʻದೌರ್ಭಾಗ್ಯದ ಸರ್ಕಾರʼ: ಸಿದ್ದರಾಮಯ್ಯ
ಮುಂದಿನ ಲೇಖನಐಸ್‌ ಕ್ರೀಂ ಬಾಕ್ಸ್‌ ನಲ್ಲಿ ಉಸಿರುಗಟ್ಟಿ ಇಬ್ಬರು ಬಾಲಕಿಯರ ಸಾವು