ಮನೆ ಅಪರಾಧ ಗುಂಡ್ಲುಪೇಟೆ: ಕ್ಷುಲ್ಲಕ ಕಾರಣಕ್ಕೆ ಯುವಕನ ಕೊಲೆ

ಗುಂಡ್ಲುಪೇಟೆ: ಕ್ಷುಲ್ಲಕ ಕಾರಣಕ್ಕೆ ಯುವಕನ ಕೊಲೆ

0

ಗುಂಡ್ಲುಪೇಟೆ(Gundlupete): ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನ ಎದೆಗೆ ಡ್ರ್ಯಾಗನ್‌ನಿಂದ ಇರಿದು ಕೊಲೆ ಮಾಡಿರುವ ಘಟನೆ ಗುಂಡ್ಲುಪೇಟೆ ಪಟ್ಟಣದಲ್ಲಿ ನಡೆದಿದೆ.

ಗುಂಡ್ಲುಪೇಟೆಯ ನಾಯಕರ ಬೀದಿ ನಿವಾಸಿ ಸಂಜಯ್‌ (23) ಕೊಲೆಯಾದ ಯುವಕ. ಕೊಲೆ ಆರೋಪಿಯಾದ ಪಟ್ಟಣದ ನಿವಾಸಿ ಅಭಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಸಂಜಯ್‌ ಮತ್ತು ಅಭಿ ನಡುವೆ ಮೊದಲಿನಿಂದಲೂ ಜಗಳ ನಡೆಯುತ್ತಿತ್ತು, ಪಟ್ಟಲದಮ್ಮನ ಜಾತ್ರೆ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದಿತ್ತು ಎನ್ನಲಾಗಿದೆ. ಸೋಮವಾರ ರಾತ್ರಿ ಸುಮಾರು 7.30 ರ ಸಮಯದಲ್ಲಿ ಪಟ್ಟಣದ ನಾಯಕರ ಬೀದಿಯ ಅರಳೀಕಟ್ಟೆ ಸರ್ಕಲ್‌ ಬಳಿ ಸಂಜಯ್‌ ನಿಂತಿದ್ದಾಗ ಅಲ್ಲಿಗೆ ಬಂದ ಅಭಿ ಏಕಾಏಕಿ ಡ್ರ್ಯಾಗನ್‌ ನಿಂದ ಸಂಜಯ್‌ ಎದೆಗೆ ಇರಿದು ಪರಾರಿಯಾಗಿದ್ದಾನೆ. ಸಂಜಯ್‌ ನನ್ನು ಆಸ್ಪತೆಗೆ ಸಾಗಿಸುವಷ್ಟರಲ್ಲಿಯೇ ಮೃತಪಟ್ಟಿದ್ದಾನೆ.

ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ಸಂಜಯ್‌ ಮೃತದೇಹವನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಎಸ್‌.ಪಿ. ಶಿವಕುಮಾರ್‌, ಡಿ.ವೈ.ಎಸ್‌.ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಹಿಂದಿನ ಲೇಖನಮೈಸೂರಿನಲ್ಲಿ ಮತ್ತೆ ಸರಗಳ್ಳತನ: ಮಹಿಳೆಯ ಚಿನ್ನದ  ಸರ ಕದ್ದ ಖದೀಮರು
ಮುಂದಿನ ಲೇಖನಅಯ್ಯೋ.. ಕರ್ನಾಟಕ ಕಟುಕರ  ಕೈಯಲ್ಲಿ ಸಿಕ್ಕಿಕೊಂಡಿದೆ: ಹೆಚ್ ಡಿ ಕುಮಾರಸ್ವಾಮಿ