ಮನೆ ರಾಜಕೀಯ ಮಂಡ್ಯ ಜಿಪಂನಿಂದ ಸಚಿವ ಅಶ್ವತ್ಥ್ ನಾರಾಯಣಗೆ ನೋಟಿಸ್ ಜಾರಿ

ಮಂಡ್ಯ ಜಿಪಂನಿಂದ ಸಚಿವ ಅಶ್ವತ್ಥ್ ನಾರಾಯಣಗೆ ನೋಟಿಸ್ ಜಾರಿ

0

ಮಂಡ್ಯ(Mandya): ಮೇ. 16 ರಂದು ನೀತಿ ಸಂಹಿತೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣಗೆ ಮಂಡ್ಯ ಜಿಲ್ಲಾ ಪಂಚಾಯಿತಿಯಿಂದ ನೋಟಿಸ್ ಜಾರಿಯಾಗಿದೆ.

ಅಶ್ವತ್ಥ್ ನಾರಾಯಣ ಅವರು ಮೇ16 ರಂದು ಮಂಡ್ಯ ಮಿಮ್ಸ್ ಮಹಿಳಾ ಸರ್ಕಾರಿ ಕಾಲೇಜಿಗೆ ಭೇಟಿ ನೀಡಿದ್ದು. ಮಿಮ್ಸ್ ಸೇರಿದಂತೆ ಮಂಡ್ಯದ ಹಲವೆಡೆ ಭೇಟಿ ನೀಡಿದ್ದರು. ಈ ಕುರಿತು ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಕಾಂಗ್ರೆಸ್ ನೀಡಿದ ದೂರಿನ ಅನ್ವಯ ಜಿಲ್ಲಾಡಳಿತ ವರದಿ ತರಸಿಕೊಂಡಿದೆ.

ತಹಶೀಲ್ದಾರ್ ನೀಡಿದ ವರದಿಯಲ್ಲಿ ಮೇಲ್ನೋಟಕ್ಕೆ ನೀತಿ ಸಂಹಿತೆ ಉಲ್ಲಂಘಿಸಿರುವುದು ತಿಳಿದುಬಂದಿದೆ. ಈ ಹಿನ್ನೆಲೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣಗೆ ನೋಟಿಸ್ ನೀಡಿ ಸ್ಪಷ್ಟನೆ ನೀಡುವಂತೆ ಜಿಲ್ಲಾ ಪಂಚಾಯಿತಿ ಕೇಳಿದೆ.

ಹಿಂದಿನ ಲೇಖನಶೂನ್ಯ ಫಲಿತಾಂಶ: ಎರಡು ಬಿಬಿಎಂಪಿ ಶಾಲಾ ಮುಖ್ಯೋಪಾಧ್ಯಯರಿಗೆ ಶೋಕಾಸ್ ನೋಟಿಸ್
ಮುಂದಿನ ಲೇಖನಸೆಸ್ಕಾಂ ಕೆಲಸ ಖಾಲಿ ಇದೆ; ಜೂನ್ 7ರೊಳಗೆ ಅರ್ಜಿ ಸಲ್ಲಿಸಿ