ಬೆಂಗಳೂರು: ನಂದಿನಿ ಪ್ರೋಬಯೊಟಿಕ್ ಮೊಸರಿನ ಪ್ಯಾಕೆಟ್ ಮೇಲೆ ‘ದಹಿ’ ಎಂದು ಮುದ್ರಿಸಿದ್ದರ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಮೊಸರಿನ ಪ್ಯಾಕೆಟ್ ಮೇಲೆ ದಹಿ ಎಂಬ ಹಿಂದಿ ಪದ ಕಡ್ಡಾಯವಾಗಿ ಬಳಸುವಂತೆ ಹೊರಡಿಸಿರುವ ಆದೆಶಪತ್ರವನ್ನೂ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಹಂಚಿಕೊಂಡಿದ್ದಾರೆ.
ಇಂದು ಕೆಎಂಎಫ್ ಮುಖ್ಯಕಚೇರಿಗೆ ಭೇಟಿ ಕೊಟ್ಟಾಗ ತಿಳಿದ ಸತ್ಯ. ಕಡ್ಡಾಯವಾಗಿ ದಹಿ ಅಂತ ಬಳಸಲೇಬೇಕು ಎಂಬ ಆದೇಶ ಮಾಡಿದ್ದಾರೆ. ಇಂದು ದಹಿ, ನಾಳೆ ನಂದಿನಿ ದೂದ್, ನಂದಿನಿ ಪಾನಿ ಅಂದುಕೊಂಡು ಎಲ್ಲದಕ್ಕೂ ಹಿಂದಿ ಕಡ್ಡಾಯ ಮಾಡಿ ಕಡೆಗೆ ಕನ್ನಡವನ್ನೇ ಇಲ್ಲವಾಗಿಸೋ ಹುನ್ನಾರ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ.
ಮೆಟ್ರೋ ಹಿಂದಿಹೇರಿಕೆ ತಡೆದ ಹಾಗೆ ನಂದಿನಿ ಮೇಲಿನ ಹಿಂದಿಹೇರಿಕೆ ತಡೆಯಬೇಕಿದೆ ಎಂದೂ ಅವರು ಒತ್ತಾಯಿಸಿದ್ದಾರೆ.
ಇದೇವೇಳೆ, ಯಶವಂತಪುರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಸ್ಥಳೀಯ ಕನ್ನಡಿಗರು ‘ಗುಜರಾತಿಗಳಿಂದ ಕನ್ನಡಿಗರ KMF ಉಳಿಸಿ’ಎಂದು ಮನವಿ ಮಾಡಿ ಹಾರ ಹಾಕಿದ್ದಾರೆ.
ನಂದಿನಿ ಉಳಿಸಿ ಅಭಿಯಾನಕ್ಕೆ ಬೆಂಬಲಿಸಿದ ಕನ್ನಡಿಗರಿಗೆ ಅಭಿನಂದನೆಗಳು. ಕನ್ನಡ ಜಾಗೃತಿ, ಈ ನೆಲದ ಅಸ್ಮಿತೆಯ ಜಾಗೃತಿ ಯಾವ ರೂಪದಲ್ಲಿದ್ದರೂ ಅದು ಈ ನಾಡಿಗೆ ಒಳಿತು ಎಂದು ಬರೆದುಕೊಂಡಿದ್ದಾರೆ.
ಮತದಾರನಿಗೆ YSR ಕಾಂಗ್ರೆಸ್ ಶಾಸಕನಿಂದ ಕಪಾಳ ಮೋಕ್ಷ…
ಮೋದಿ ಇಂದು ಪಟ್ನಾ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಿದ್ರು
ರಾಜಕೀಯ ಕೊನೆಗಾಲದಲ್ಲಿ ನನ್ನ ಕೈ ಹಿಡಿದವರು ದೇವೇಗೌಡರು ಜೆಡಿಎಸ್ ಶಾಸಕ ಎ.ಮಂಜು ಹೇಳಿಕೆ.
HSRP ನಂಬರ್ ಪ್ಲೇಟ್ ಅಳವಡಿಸಿಲ್ವಾ ? ಹಾಗಿದ್ರೆ ದಂಡ ಬೀಳೋದು ಖಚಿತ…!
ಹ್ಯಾಪಿ ಮದರ್ಸ್ ಡೇ…….
ಹ್ಯಾಪಿ ಮದರ್ಸ್ ಡೇ…..
ಅಕ್ಷಯ ತೃತೀಯದಂದು ಚಿನ್ನ ಬೆಳ್ಳಿ ಮಾರಾಟದಲ್ಲಿ ಹೊಸ ದಾಖಲೆ..!
ಹೆಚ್ಚು ಹೊತ್ತು ಮೆಟ್ರೋದಲ್ಲಿ ಇದ್ದ ಕಾರಣ ದಂಡ ವಿಧಿಸಲಾಗಿದೆ…
ಲೆಮನ್ ಜ್ಯೂಸ್ ಆರೋಗ್ಯಕ್ಕೆ ಉತ್ತಮ..!
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.