ಮೈಸೂರು(Mysuru): ನಮ್ಮ ಭಾಷೆ ನಮ್ಮ ಸಂಸ್ಕಾರ ತೀರ್ಮಾನ ಮಾಡುತ್ತದೆ. ಈ ಹಿಂದೆ ಬಿಜೆಪಿ ಹೀಗೆ ಇರಲಿಲ್ಲ. ಬಿಜೆಪಿ ನಾಯಕರಿಗೆ ಮನವಿ ಮಾಡ್ತೀನಿ ಹೀಗೆ ಮಾತನಾಡುವವರಿಗೆ ಸಂಸ್ಕಾರ ಕಲಿಸಿ ಎಂದು ಶಾಸಕ ಸಾ.ರಾ.ಮಹೇಶ್ ತಿಳಿಸಿದರು.
ಹೆಚ್.ಡಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿದ್ದುಕೊಂಡೇ ಆಡಳಿತ ನಡೆಸಿದ್ದರು. ಅಳುವ ಬದಲಿಗೆ ಕೆಲಸ ಮಾಡಿ ತೋರಿಸಬೇಕು ಎಂದು ಟೀಕಿಸಿದ್ಧ ಸಚಿವ ಅಶ್ವಥ್ ನಾರಾಯಣ್ ವಿರುದ್ಧ ಇಂದು ನಗರದಲ್ಲಿ ತುರ್ತು ಸುದ್ದಿಗೋಷ್ಟಿ ನಡೆಸಿ ಜೆಡಿಎಸ್ ಶಾಸಕ ಸಾ.ರಾ ಮಹೇಶ್ ವಾಗ್ದಾಳಿ ನಡೆಸಿದ್ದಾರೆ.
ಅಶ್ವಥ್ ನಾರಾಯಣ್ ನನ್ನ ಒಳ್ಳೆಯ ಸ್ನೇಹಿತ. ನಾನು ಕೂಡ ಬಿಜೆಪಿಯಲ್ಲಿ ಇದ್ದವನು. ನಾನು ಇದ್ದ ವೇಳೆ ರಾಜ್ಯದ, ರಾಷ್ಟ್ರದ ನಾಯಕರು ಯಾವುದಾದರೂ ಒಬ್ಬ ಕಾರ್ಯಕರ್ತನ ಮನೆಯಲ್ಲಿ ಉಳಿಯುತ್ತಿದ್ದರು. ಆದರೆ ಈಗ ಜಿಲ್ಲಾ ನಾಯಕರು ಕೂಡ ಉಳಿಯುತ್ತಿಲ್ಲ.ಸಮಿಶ್ರ ಸರ್ಕಾರದಲ್ಲಿ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದರು. ಮಾಜಿ ಮುಖ್ಯಮಂತ್ರಿಗಳು ಮುಖ್ಯಮಂತ್ರಿ ಅಧಿಕೃತ ನಿವಾಸ ಬಿಡದೆ ಇದ್ದಿದ್ದ ಕಾರಣಕ್ಕೆ ಮಧ್ಯಾಹ್ನ ಊಟಕ್ಕೆ ರೆಸ್ಟ್ ಗೆ ಹೋಟೆಲ್ ಗೆ ಹೊಗುತ್ತಿದ್ದರು. ಮನೆಯಲ್ಲೂ ಇರಿಸೋದಕ್ಕೆ ಬಿಡೊದಿಲ್ಲ ಎನ್ನುತ್ತಿದ್ದರು. ನಮ್ಮವರು ಹೋಟೆಲ್ ನಲ್ಲಿ ಇರುತ್ತಿದ್ದರು. ಹಾಗಾದರೇ ನಿಮ್ಮವರು ಗುಡಿಸಿಲಿನಲ್ಲಿ ಇದ್ದರಾ..? ಬಾಂಬೆಯಲ್ಲಿ ಇದ್ದವರು ಗುಡಿಸಿಲಿನಲ್ಲಿ ಇದ್ದರಾ..? ಎಂದು ಕಿಡಿಕಾರಿದದರು.
ರಾಜಕಾರಣದಲ್ಲಿ ಟೀಕೆ ಸಾಮಾನ್ಯ. ಆದರೆ, ತಪ್ಪು ಮಾಡಿದ್ದರೇ ಟೀಕಿಸಲಿ ಅದನ್ನು ಬಿಟ್ಟು ಈ ರೀತಿ ಟೀಕೆ ಸರಿಯಲ್ಲ. ವೈಯಕ್ತಿಕ ಜೀವನವೇ ಬೇರೆ, ಸಾರ್ವಜನಿಕ ಜೀವನವೇ ಬೇರೆ. ನಮ್ಮಲ್ಲಿ ಚೆನ್ನಾಗಿ ಮಾತನಾಡುವ ನಾಯಕರು ಇದ್ದಾರೆ. ಆದರೆ ನಾವು ದೇವೇಗೌಡರ ಅಣತಿಯಂತೆ ಮಾತನಾಡುತ್ತೇವೆ. ನೀವು ಆರ್ ಅಶೋಕ್ ಅವ್ರ ಓವರ್ ಟೆಕ್ ಮಾಡ್ತಾ ಇದ್ದೀರಾ. ಸಮಿಶ್ರ ಸರ್ಕಾರ ಬೀಳಲು ನೀವು ಒಬ್ಬರು ಕಾರಣ. ನಿಮಗೆ ಉಪ ಮುಖ್ಯಮಂತ್ರಿ ಸ್ಥಾನ ಸಿಗದೆ ಇರುವುದಕ್ಕೆ ಈ ರೀತಿ ಪ್ಲಾನ್ ಮಾಡ್ತಾ ಇದ್ದೀರಾ. ಕುಮಾರಸ್ವಾಮಿ ಏನು..? ನೀವು ಏನು ಅಂತಾ ಈ ನಾಡಿಗೆ ಗೊತ್ತಿದೆ ಎಂದು ಸಾ.ರಾ ಮಹೇಶ್ ಟಾಂಗ್ ನೀಡಿದರು.
ಮಾತನಾಡುವಾಗ ಇತಿ ಮಿತಿಯಲ್ಲಿ ಮಾತನಾಡಿ. ಉನ್ನತ ಶಿಕ್ಷಣ ಸಚಿವರಾಗಿ ಇದೇನಾ ನಿಮ್ಮ ಸಂಸ್ಕಾರ…? ನಿಮ್ಮ ಹಿರಿಯ ನಾಯಕರು ನಿಮಗೆ ಬುದ್ದಿ ಹೇಳಬೇಕಲ್ವಾ..? ಈಗಾಲೂ ಮನವಿ ಮಾಡಿ ಹೇಳುತ್ತಿದ್ದೇನೆ. ನೀವು ಮಾತನಾಡಿದ್ರಿ ಅಂತಾ ನಾವು ಮಾತನಾಡಲ್ಲ ಎಂದರು.
ಕುಮಾರಸ್ವಾಮಿ ಸ್ವಾಮಿ ಹೋಟೆಲ್ ವಾಸ್ತವ್ಯ ವಿಚಾರ ಒಂದೇ ಇರೋದು. ಮತ್ತೇನು ವಿಚಾರ ಇಲ್ವಲ್ವಾ ಕುಮಾರಸ್ವಾಮಿ ಮೇಲೆ ಮಾತನಾಡಲು. ಕುಮಾರಸ್ವಾಮಿ ಮೇಲೆ ಯಾವುದೇ ಹಗರಣ ಇಲ್ಲ, ಡಿನೋಟಿಫಿಕೇಷನ್ ಹಗರಣ ಇಲ್ಲ ಎಂದು ಹರಿಹಾಯ್ದರು.
ಅಶ್ವಥ್ ನಾರಾಯಣ್ ಬಹಿರಂಗ ಚರ್ಚೆಗೆ ಬರಲಿ. ನನಗೆ ಸಿಗಲಿ ಹೇಳುತ್ತೇನೆ. ಉನ್ನತ ಶಿಕ್ಷಣ ಸಚಿವ ನೀನು ಯಾಕೆ ಹೀಗೆ ಆದೆ ಅಂತಾ ಕೇಳ್ತೀನಿ. ಜಿಲ್ಲೆಯಲ್ಲಿ ದೇವೇಗೌಡರು, ಕುಮಾರಸ್ವಾಮಿ ಅವರಿಂದ ಬೆಳೆದ ಅನೇಕ ನಾಯಕರು ನಾವು ಇದ್ದೀವಿ ಎಂದು ಸಾ.ರಾ ಮಹೇಶ್ ಹೇಳಿದರು.
ಕದ್ದ ಹಣವನ್ನು ಆಲದ ಮರದ ಕೆಳಗೆ ಬಚ್ಚಿಟ್ಟ ಬೂಪ
ಅರಬ್ಬೀ ಸಮುದ್ರದಲ್ಲಿ ಮುಳುಗುತ್ತಿರುವ ಮೀನುಗಾರಿಕಾ ಬೋಟ್..
EPF ವಿಚಾರದಲ್ಲಿ ಬದಲಾವಣೆ.
ಬೆಂಗಳೂರು ಕೆಂಪೇಗೌಡ ಏರ್ಪೋರ್ಟ್ ಗೆ ಪ್ರಶಸ್ತಿ ಸಿಕ್ಕಿದೆ
ಮೋದಿಯವರ ಬಗ್ಗೆ ಹಾಡು ಹಾಡಿದ್ದಕ್ಕೆ ಮುಸ್ಲಿಮರಿಂದ ಮಾರಣಾಂತಿಕ ಹಲ್ಲೆ
ಮೋದಿಯವರ ಬಗ್ಗೆ ಹಾಡು ಹಾಡಿದ್ದಕ್ಕೆ ಮುಸ್ಲಿಮರಿಂದ ಮಾರಣಾಂತಿಕ ಹಲ್ಲೆ…
ಬರುತ್ತಿದೆ ಅಯೋಧ್ಯ ರಾಮನ "ಬಯೋ ಪಿಕ್"…
ವಿಶ್ವ ದಾಖಲೆ ನಿರ್ಮಿಸಿದ ಭಾರತೀಯ ಬಾಲಕಿ…
ವಿಮಾನದಲ್ಲಿ ನಮಾಜ್
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.