ಮನೆ ರಾಜಕೀಯ ಮುಸ್ಕಾನ್ ಹಾಗೂ ಆಕೆಯ ತಂದೆಯ ಬಂಧನಕ್ಕೆ ಪ್ರಮೋದ್ ಮುತಾಲಿಕ್ ಒತ್ತಾಯ

ಮುಸ್ಕಾನ್ ಹಾಗೂ ಆಕೆಯ ತಂದೆಯ ಬಂಧನಕ್ಕೆ ಪ್ರಮೋದ್ ಮುತಾಲಿಕ್ ಒತ್ತಾಯ

0

ಬೆಳಗಾವಿ: ಆಲ್ ಖೈದಾ ಸಂಘಟನೆಯನ್ನು ನಿಷೇಧಿಸಲಾಗಿದ್ದರೂ ಮುಸ್ಕಾನ್ ಅವರನ್ನು ಹೊಗಳಿರುವಂತ ಆಲ್ ಖೈದ ಉಗ್ರ ಜವಹರಿ ವೀಡಿಯೋ ಬಂದಿದ್ದು ಎಲ್ಲಿಂದ.? ಹೇಗೆ ಎನ್ನುವ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು. ಮಂಡ್ಯದ ಮುಸ್ಕಾನ್ ಹಾಗೂ ಆಕೆಯ ತಂದದೆಯನ್ನು ಬಂಧಿಸಬೇಕು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಒತ್ತಾಯಿಸಿದ್ದಾರೆ.

ಈ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕರ್ನಾಟಕದ ಮಂಡ್ಯದ ಮುಸ್ಕಾನ್ ನನ್ನು, ಆಲ್ ಖೈದಾ ಜವಹರಿ ಹೊಗಳಿದ್ದು ಖಂಡನೀಯವಾಗಿದೆ. ಈ ವಿಚಾರವನ್ನು ಸರ್ಕಾರ ಹಗುರವಾಗಿ ತೆಗೆದುಕೊಳ್ಳಬಾರದು ಎಂದರು.

ಆಲ್ ಖೈದಾ ನಿಷೇಧವಿದ್ದರೂ ವೀಡಿಯೋ ರಿಲೀಸ್ ಆಗಿದ್ದು ಹೇಗೆ.? ಎಲ್ಲಿಂದ ಬಂತು ಎನ್ನುವ ತನಿಖೆ ನಡೆಸಬೇಕು. ಕರ್ನಾಟಕದ ಮಂಡ್ಯದ ಮುಸ್ಕಾನ್ ವರೆಗೆ ಆಲ್ ಖೈದಾ ಉಗ್ರ ಮಾತನಾಡುವಂತೆ ಆದದ್ದು ಹೇಗೆ ಎನ್ನುವ ಕುರಿತಂತೆಯೂ ತನಿಖೆ ನಡೆಸಬೇಕು.

ಅಲ್ಲದೇ ಈವರೆಗೆ ಅವರ ಮನೆಗೆ ಯಾರೆಲ್ಲಾ ಭೇಟಿ ನೀಡಿದ್ದಾರೆ ಎಂಬುದನ್ನು ವಿಚಾರಣೆ ನಡೆಸುವಂತೆ ಎಂದು ಆಗ್ರಹಿಸಿದರು.

ಹಿಂದಿನ ಲೇಖನಬೆಂಗಳೂರಿನ ಶಾಲೆಗಳಿಗೆ ಬಂದಿದ್ದು ಹುಸಿ ಬಾಂಬ್‌ ಬೆದರಿಕೆ
ಮುಂದಿನ ಲೇಖನಮದುವೆಯ ನಿಜವಾದ ಭರವಸೆಯ ಆಧಾರದ ಮೇಲೆ ಲೈಂಗಿಕತೆಯು ಅತ್ಯಾಚಾರವಲ್ಲ: ದೆಹಲಿ ಹೈಕೋರ್ಟ್