ಮನೆ ಕ್ರೀಡೆ ರಣಜಿ ಟ್ರೋಫಿ ಫೈನಲ್ ಪಂದ್ಯ: ಸಾಧಾರಣ ಮೊತ್ತಕ್ಕೆ ಕುಸಿದ ಬಂಗಾಳ ತಂಡ

ರಣಜಿ ಟ್ರೋಫಿ ಫೈನಲ್ ಪಂದ್ಯ: ಸಾಧಾರಣ ಮೊತ್ತಕ್ಕೆ ಕುಸಿದ ಬಂಗಾಳ ತಂಡ

0

ಕೋಲ್ಕತ್ತ: ಸೌರಾಷ್ಟ್ರದ ಎಡಗೈ ಮಧ್ಯಮವೇಗದ ಜೋಡಿ ಜೈದೇವ್ ಉನದ್ಕತ್ ಹಾಗೂ ಚೇತನ್ ಸಕಾರಿಯಾ ದಾಳಿಯ ಮುಂದೆ ಬಂಗಾಳ ತಂಡವು ಸಾಧಾರಣ ಮೊತ್ತಕ್ಕೆ ಕುಸಿಯಿತು.

ಈಡನ್ ಗಾರ್ಡನ್‌’ನಲ್ಲಿ ಗುರುವಾರ ಆರಂಭವಾದ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಸೌರಾಷ್ಟ್ರವು ಆತಿಥೇಯ ತಂಡವನ್ನು 174 ರನ್‌ಗಳಿಗೆ ಕಟ್ಟಿಹಾಕಿತು.

ಉನದ್ಕತ್ (44ಕ್ಕೆ3) ಹಾಗೂ ಚೇತನ್ (33ಕ್ಕೆ3) ಬಂಗಾಳದ ಪ್ರಮುಖ ಬ್ಯಾಟರ್‌’ಗಳ ವಿಕೆಟ್‌ ಗಳಿಸಿದರು.

ಎರಡನೇ ಇನಿಂಗ್ಸ್ ಆರಂಭಿಸಿದ ಸೌರಾಷ್ಟ್ರ ತಂಡವು 17 ಓವರ್‌ಗಳಲ್ಲಿ 2 ವಿಕೆಟ್‌’ಗಳಿಗೆ 81 ರನ್ ಗಳಿಸಿತು. ಹರ್ವಿಕ್ ದೇಸಾಯಿ (ಬ್ಯಾಟಿಂಗ್ 38) ಹಾಗೂ ‘ರಾತ್ರಿ ಕಾವಲುಗಾರ’ ಚೇತನ್ ಸಕಾರಿಯಾ (ಬ್ಯಾಟಿಂಗ್ 2) ಕ್ರೀಸ್‌’ನಲ್ಲಿದ್ದಾರೆ.

ಶಹಬಾಜ್, ಅಭಿಷೇಕ್ ಅರ್ಧಶತಕ: ಅಭಿಮನ್ಯು ಈಶ್ವರನ್ ಸೇರಿದಂತೆ ಆರು ಬ್ಯಾಟರ್‌’ಗಳು 65 ರನ್‌’ಗಳಿಗೇ ಪೆವಿಲಿಯನ್‌’ಗೆ ಮರಳಿದರು.

ಈ ಹಂತದಲ್ಲಿ ಜೊತೆಯಾದ ಶಹಬಾಜ್ ಅಹಮದ್ (69; 112ಎ, 4X11) ಹಾಗೂ ಅಭಿಷೇಕ್ (50; 98ಎ, 4X8) ಏಳನೇ ವಿಕೆಟ್ ಜೊತೆಯಾಟದಲ್ಲಿ 102 ರನ್‌ ಸೇರಿಸಿದರು.

ಆದರೂ ತಂಡದ ಮೊತ್ತವು ಇನ್ನೂರರ ಗಡಿ ದಾಟಲು ಉನದ್ಕತ್ ಬಳಗ ಬಿಡಲಿಲ್ಲ. ಚಿರಾಗ್ ಜಾನಿ ಹಾಗೂ ಧರ್ಮೇಂದ್ರಸಿಂಹ ಜಡೇಜ ಅವರು ತಲಾ ಎರಡು ವಿಕೆಟ್ ಗಳಿಸಿದರು.

ಸೌರಾಷ್ಟ್ರ ತಂಡವು ಹೋದ ವಾರ ಬೆಂಗಳೂರಿನಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಕರ್ನಾಟಕ ತಂಡವನ್ನು ಸೋಲಿಸಿತ್ತು. ಆ ಸಂದರ್ಭದಲ್ಲಿ ಜೈದೇವ್ ಅವರು ಭಾರತ ಟೆಸ್ಟ್ ತಂಡದಲ್ಲಿ ಆಡಲು ತೆರಳಿದ್ದರು. ಇಂದೋರ್‌’ನಲ್ಲಿ ನಡೆದಿದ್ದ ಇನ್ನೊಂದು ಸೆಮಿಫೈನಲ್‌’ನಲ್ಲಿ ಬಂಗಾಳವು ಮಧ್ಯಪ್ರದೇಶ ಎದುರು ಜಯಿಸಿತ್ತು.

ಹಿಂದಿನ ಲೇಖನಗಿಫ್ಟ್ ವೋಚರ್ ನೀಡಿಕೆ, ಪೂರೈಕೆಗೆ ಸರಕು ಮತ್ತು ಸೇವಾ ತೆರಿಗೆ ಅನ್ವಯಿಸದು: ಕರ್ನಾಟಕ ಹೈಕೋರ್ಟ್
ಮುಂದಿನ ಲೇಖನಬೀದರ್: ಬಿಜೆಪಿ ಮುಖಂಡನ ಮೇಲೆ ಅಪರಿಚಿತ ವ್ಯಕ್ತಿಗಳಿಂದ ಮಾರಣಾಂತಿಕ ಹಲ್ಲೆ