20-30 ಅಡಿ ಬೆಳೆಯುವ ಸದಾ ಹರಿದ್ವರ್ಣದ ಮರ. ರಾಜ್ಯದ ಎಲ್ಲೆಡೆ ಬೆಳೆಯುತ್ತದೆ. ಬೇರಿನಿಂದ ಬೇರೆ ಮರ ಗಿಡಗಳಿಂದ ಪೋಷಣೆ ಪಡೆವ ಪರೋಪ ಜೀವಿಯಾಗಿದೆ. ಅಂಡಾಕಾರದ ಎಲೆ ಹಸಿರು, ಹಳದಿ ಕೆಂಪು ಹೂ, ಮಾಂಸಲ ಹೂ, ಮತ್ತು ದುಂಡನೆ ನೀಲಿ ಗಪ್ಪು ಕಾಯಿ. ಒಳಗೆ ಗುಂಡೇ ಬೀಜ.
ಬೀಜದಿಂದ ಹೊಸ ಸಸಿ ಹಕ್ಕಿ, ಪ್ರಾಣಿಗಳಿಂದ ಬೀಜ ಪ್ರಸಾರ. ಇತ್ತೀಚೆಗೆ ಗಂಧಕೃಷಿ ಆರಂಭವಾಗಿದೆ. ಕಾಂಡ ಬಲಿತಷ್ಟು ಒಳಗಡೆ ತಿರುಳು ಮರ ಚೇಗು ಗಟ್ಟಿ ಅದನ್ನು ಎಣ್ಣೆ ಮತ್ತು ಅಲಂಕಾರಿಕ ವಸ್ತು ಉದ್ಯಮಕ್ಕಾಗಿ ಬಳಸುತ್ತಾರೆ. ಇದೇ ಶ್ರೀಗಂಧ. ಮದ್ದಿನ ಬಳಕೆಗೆ ಸಹ ಗಟ್ಟಿ ಕಾಂಡದ ಒಳ ತಿರುಳು ಬೇಕು. ಗಂಧದೆಣ್ಣೆಗೆ ಭಾರಿ ಬೇಡಿಕೆ. ಸ್ಯಾಂಟಲಾಲ್, ಬೀಟಾ ಸ್ಯಾಂಟಲಾಲ್, ಐಸೊಮೆರಿಕ್ ಸೆಸ್ಕ್ಪಿಟ ರ್ವೀನು ಮತ್ತು ಆಲ್ಡಿ ಹೈಡುಗಳು ಶ್ರೀಗಂಧದ ರಾಸಾಯನಿಕಗಳು.
ಮದ್ದಿಗಾಗಿ ಬಾಹ್ಯ ಮತ್ತು ಸೇವನೆಗಾಗಿ ಶ್ರೀಗಂಧ ಬಳಸುತ್ತಾರೆ. ಬಹಳ ತಂಪು. ಕಹಿ ರಸವಿದ್ದರೂ ವಿಷ, ಕ್ಷಯ, ಕಫ, ಬಾಯಾರಿಕೆ, ಉರಿ ಪರಿಹಾರವಾಗುತ್ತದೆ.
ಔಷಧೀಯ ಗುಣಗಳು :-
* ಕಿವಿನೋವು, ಮೂಗು ಊರಿ, ಹಲ್ಲು ನೋವು ಬಂದಾಗ ಗಂಧದ ಎಣ್ಣೆ ಸಂಗಡ ಸಾಸಿವೆ ಎಣ್ಣೆ ಬೆರೆಸಿ ಬಿಸಿ ಮಾಡಿ ಹಚ್ಚಿದರೆ ನೋವು ಕಡಿಮೆಯಾಗುತ್ತದೆ.
* ಎಲೆ ಚಿಗುರಲೆ ಅರೆದು ತಂಬುಳಿ ರೂಪದಲ್ಲಿ ಮಲೆನಾಡಿಗರು ಸೇವಿಸುತ್ತಾರೆ.
* ಚರ್ಮದ ಕಾಯಿಲೆಗೆ ಪರಿಹಾರ ರೂಪವಾಗಿ ಎಣ್ಣೆ, ಅರೆದ ಎಲೆ ಲೇಪನದಿಂದ ಲಾಭವಿದೆ.
* ಮೂತ್ರದ ಉರಿ, ಬಣ್ಣ ಬದಲಾಗುವಿಕೆ ಶ್ರೀಗಂಧ ಕೊರಡು ತೇಯ್ದು ಕುಡಿದರೆ ಮೂತ್ರ ಉರಿ ಕಡಿಮೆಯಾಗುತ್ತದೆ.
* ದೇಹದಲ್ಲಿ ಊತ, ಮೈ ಕೈ ನೀರು ಸೇರಿರುವಂತಹ ಸಂದರ್ಭದಲ್ಲೇ ಗಂಧದ ಎಣ್ಣೆಯನ್ನು 15-20 ಹನಿಯನ್ನು ಸೇವನೆ ಮಾಡಿದರೆ ದೇಹದಲ್ಲಿಯ ಊತ, ಮೈ ಕೈ ನೀರೂರುವ ಸಮಸ್ಯೆಯೂ ಕಡಿಮೆಯಾಗುತ್ತದೆ.
ಲೆಮನ್ ಜ್ಯೂಸ್ ಆರೋಗ್ಯಕ್ಕೆ ಉತ್ತಮ..!
ಜೈಲಿನಲ್ಲಿರುವವರು ಮತ ಚಲಾಯಿಸಬಹುದೇ ?
ಉದ್ಯೋಗ ಅವಕಾಶ, ಆನ್ಲೈನಲ್ಲಿ ಅರ್ಜಿ ಸಲ್ಲಿಸಿ….
ಯಾಕೆ ಮೇ 8ನ್ನ ವಿಶ್ವ ರೆಡ್ ಕ್ರಾಸ್ ದಿನ ಎಂದು ಆಚರಿಸಲಾಗುತ್ತದೆ
ಬೆಂಗಳೂರಿನಲ್ಲಿ ಭೂಕುಸಿತ
ಸುನಿತಾ ಜೊತೆ ಗಗನಕ್ಕೇರಿದ ಭಗವದ್ಗೀತೆ, ಗಣೇಶ ಮೂರ್ತಿ..!
ಮೈಸೂರಿನ ಹೆಬ್ಬಾಳ್ ಕೆರೆಯಲ್ಲಿ ಮೀನುಗಳ ಮಾರಣಹೋಮ….
ಸುಳ್ಳು ಮಾಹಿತಿಯನ್ನ ಸ್ಪಷ್ಟಪಡಿಸಿದ ಆರೋಗ್ಯ ಇಲಾಖೆ..
ಹನುಮ ಕೇಸರಿಯಾದ ಕಥೆ….
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.