ಮನೆ ರಾಜ್ಯ ಚಲುವರಾಯಸ್ವಾಮಿ ಗೆಲ್ಲಿಸುವಂತೆ ಸಿದ್ದರಾಮಯ್ಯ ಮನವಿ

ಚಲುವರಾಯಸ್ವಾಮಿ ಗೆಲ್ಲಿಸುವಂತೆ ಸಿದ್ದರಾಮಯ್ಯ ಮನವಿ

0

ನಾಗಮಂಗಲ(Nagamangala):  ನಾವು ವಿಧಾನಸೌಧಕ್ಕೆ ಹೋಗಲು ಚಲುವರಾಯಸ್ವಾಮಿಯನ್ನು ಗೆಲ್ಲಿಸಿಕೊಡಿ ಎಂದು ತಾಲ್ಲೂಕಿನ ಜನತೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ತಾಲ್ಲೂಕಿನ ದೇವಲಾಪುರ ಹೋಬಳಿಯ ಕೊಂಬಿನಕೊಪ್ಪಲು ಗ್ರಾಮದಲ್ಲಿ ನಡೆದ ಅರುವಿನಮ್ಮ ಪರ ಮತ್ತು ಕನಕ ಭವನದಲ್ಲಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎಚ್.ಡಿ.ದೇವೇಗೌಡರು ಕಳೆದ ಬಾರಿ ಇಲ್ಲಿಗೆ ಬಂದು ಅತ್ತು ಚಲುವರಾಯಸ್ವಾಮಿಯನ್ನು ಸೋಲಿಸಿದ್ದಾರೆ. ಚುನಾವಣೆ ಬಂದಾಗ ಅವರು ಮತ್ತೆ ಬಂದು ಕಣ್ಣೀರು ಹಾಕುತ್ತಾರೆ. ಆದರೆ ಈ ಹಿಂದೆ ಮಾಡಿದ ತಪ್ಪನ್ನು ಮತ್ತೆ ಮಾಡಬೇಡಿ ಎಂದು ಸಿದ್ದರಾಮಯ್ಯ ಹೇಳಿದರು. ಜೆಡಿಎಸ್‍ನವರು ಅವಕಾಶವಾದಿಗಳು, ಅವರನ್ನು ಗೆಲ್ಲಿಸುವುದರಿಂದ ಏನು ಪ್ರಯೋಜನವಿಲ್ಲ. ಚಲುವರಾಯಸ್ವಾಮಿ ಗೆದ್ದರೆ ನಾನು ಗೆದ್ದಂತೆ ಎಂದು ಸಿದ್ದರಾಮಯ್ಯ ಇದೇ ವೇಳೆ ತಿಳಿಸಿದರು.
ದಿನೇಶ್ ಗೂಳಿಗೌಡ ಮತ್ತು ಮಧು ಮಾದೇಗೌಡರ ಗೆಲುವಿಗೆ ಚಲುವರಾಯ ಸ್ವಾಮಿಯೇ ಕಾರಣ. ರಾಜ್ಯಕ್ಕೆ ಒಳ್ಳೆಯದಾಗಲು ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದರು.

ಹಿಂದಿನ ಲೇಖನಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಿ: ನವನೀತ್‌ ರಾಣಾ
ಮುಂದಿನ ಲೇಖನಎಫ್‌ಐಆರ್‌ಗಳ ದಾಖಲಾತಿ, ವ್ಯಕ್ತಿಗಳ ಬಂಧನ, ನ್ಯಾಯಾಲಯಗಳಲ್ಲಿ ಪ್ರಕರಣಗಳನ್ನು ವರದಿ ಮಾಡಲು ಮಾಧ್ಯಮಗಳಿಗೆ ಹಕ್ಕಿದೆ: ಬಾಂಬೆ ಹೈಕೋರ್ಟ್