ಮನೆ ರಾಜಕೀಯ ಸಿದ್ದರಾಮಯ್ಯ ಅವರು ಹಿಂದೂಗಳ ನಂಬಿಕೆಯ ಬಗ್ಗೆ ಉಡಾಫೆ ತೋರಿಸಿದ್ದಾರೆ: ನಳಿನ್ ಕುಮಾರ್ ಕಟೀಲ್

ಸಿದ್ದರಾಮಯ್ಯ ಅವರು ಹಿಂದೂಗಳ ನಂಬಿಕೆಯ ಬಗ್ಗೆ ಉಡಾಫೆ ತೋರಿಸಿದ್ದಾರೆ: ನಳಿನ್ ಕುಮಾರ್ ಕಟೀಲ್

0

ಬೆಂಗಳೂರು(Bengaluru): ಸಿದ್ದರಾಮಯ್ಯ ಅವರು ಹಿಂದೂಗಳ ನಂಬಿಕೆಯ ಬಗ್ಗೆ ಉಡಾಫೆ ತೋರಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪ ಮಾಡಿದ್ದಾರೆ.

ಈ ಕುರಿತಾಗಿ ಟ್ವೀಟ್ ಮಾಡಿರುವ ನಳಿನ್ ಕುಮಾರ್ ಕಟೀಲ್, ಮಧ್ಯಾಹ್ನ ಮಾಂಸ ತಿಂದು ಸಂಜೆ ದೇವಸ್ಥಾನಕ್ಕೆ ಹೋದ್ರೆ ತಪ್ಪೇನು ಎಂದು ಕೇಳುವ ಮೂಲಕ  ಸಿದ್ದರಾಮಯ್ಯ ಅವರು ಮತ್ತೊಮ್ಮೆ ಹಿಂದೂಗಳ ನಂಬಿಕೆಯ ಬಗ್ಗೆ ಉಡಾಫೆ ತೋರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇವಸ್ಥಾನದ ಬಗ್ಗೆ ಹಿಂದೂಗಳ ಭಾವನೆ ಅರ್ಥ ಮಾಡಿಕೊಳ್ಳದವರಿಗೆ ಜನರೇ ಉತ್ತರ ಕೊಡಲಿದ್ದಾರೆ. ಚುನಾವಣೆ ಹತ್ತಿರ ಬರುವಾಗ ದೇವಸ್ಥಾನ, ಮಠಗಳಿಗೆ ಹೋಗುವ ನಾಟಕ ಯಾಕೆ? ಎಂದು ಪ್ರಶ್ನಿದ್ದಾರೆ.

ಕೊಡಗು ಪ್ರವಾಸಕ್ಕೆ ಸಿದ್ದರಾಮಯ್ಯ ಹೋದ ಸಂದರ್ಭದಲ್ಲಿ ಅವರು ಮಾಂಸಹಾರ ತಿಂದು ದೇವಸ್ಥಾನಕ್ಕೆ ಹೋಗಿದ್ದಾರೆ ಎಂಬುವುದು ಬಿಜೆಪಿ ಆರೋಪವಾಗಿದೆ. ಆದರೆ ಇದನ್ನು ಕಾಂಗ್ರೆಸ್ ನವರು ತಿರಸ್ಕಾರ ಮಾಡಿದ್ದಾರೆ.

ಇದೇ ವಿಚಾರವಾಗಿ ಮಾತನಾಡಿದ್ದ ಸಿದ್ದರಾಮಯ್ಯ, ಅವರು ನಾನು ತಿನ್ನುವ ಆಹಾರದ ಬಗ್ಗೆ ಮಾತನಾಡಲು ನೀವು ಯಾರಯ್ಯ ಎಂದು ಆಕ್ರೋಶಗೊಂಡು ಪ್ರಶ್ನೆ ಮಾಡಿದ್ದರು.

ನಾನು ಇದೇ ತಿಂಗಳು 18 ರಂದು ಮಧ್ಯಾಹ್ನ ಊಟ ಮಾಡಿ ಕುಳಿತಿದ್ದೆ. ಆದ ಸಂದರ್ಭದಲ್ಲಿ ಅಭಿಮಾನಿಗಳು ಬಂದು ಪೂಜೆ ಮಾಡಿದ್ದೆವೆ ಬರಬೇಕು ಎಂದು ಒತ್ತಾಯ ಮಾಡಿದ ಕಾರಣಕ್ಕೆ ಹೋದೆ. ಆದರೆ ದೇವರು ಇಂತದ್ದೆ ಊಟ ಮಾಡಿ ಬಾ ಅಂತ ಹೇಳುತ್ತಾರೆಯೇ ಎಂದು ಪ್ರಶ್ನಿಸಿದ್ದರು.

ಹಿಂದಿನ ಲೇಖನನಾವು ಪೂಜಿಸುವ ಈ ತುಳಸಿ ನಿಜಕ್ಕೂ ಯಾರು ಗೊತ್ತಾ.? ಇಲ್ಲಿದೆ ಮಾಹಿತಿ
ಮುಂದಿನ ಲೇಖನಕೆಪಿಟಿಸಿಎಲ್ ಹಗರಣ: ಸರ್ಕಾರದ ವೈಫಲ್ಯವೋ, ಹಗರಣದ ಸಾಧನೆಯೋ- ಡಿಕೆಶಿ ಪ್ರಶ್ನೆ