ಮನೆ ಅಪರಾಧ ತಂಗಿಗೆ ಕಿರುಕುಳ ನೀಡಿದ್ದನ್ನು ಪ್ರಶ್ನಿಸಿದ್ದಕ್ಕೆ ವಿದ್ಯಾರ್ಥಿಯ ಕೊಲೆ: ಇಬ್ಬರು ಅಪ್ರಾಪ್ತರ ಬಂಧನ

ತಂಗಿಗೆ ಕಿರುಕುಳ ನೀಡಿದ್ದನ್ನು ಪ್ರಶ್ನಿಸಿದ್ದಕ್ಕೆ ವಿದ್ಯಾರ್ಥಿಯ ಕೊಲೆ: ಇಬ್ಬರು ಅಪ್ರಾಪ್ತರ ಬಂಧನ

0

ನವದೆಹಲಿ(NewDelhi): ತನ್ನ ತಂಗಿಗೆ ಕಿರುಕುಳ ನೀಡಿದ್ದನ್ನು ಪ್ರಶ್ನಿಸಿದ ವಿದ್ಯಾರ್ಥಿಯನ್ನು ಇಬ್ಬರು ಅಪ್ರಾಪ್ತರು ಕೊಲೆಗೈದಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ಇಲ್ಲಿನ ಪಟೇಲ್ ನಗರದ ನಿವಾಸಿ ಮನೋಜ್ ಕುಮಾರ್ ನೇಗಿ ಎಂಬಾತನೇ ಹತ್ಯೆಯಾದ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಈ ಕೊಲೆ ಮಾಡಿದ ಇಬ್ಬರು ಅಪ್ರಾಪ್ತ ಆರೋಪಿಗಳನ್ನು ಬಂಧಿಸಲಾಗಿದೆ.


ಏನಿದು ಘಟನೆ ?
ಕೆಲ ದಿನಗಳ ಹಿಂದೆ ಇಬ್ಬರು ಹುಡುಗರು ಮನೋಜ್ ಕುಮಾರ್ ನೇಗಿ ಅವರ ಸಹೋದರಿಗೆ ಕಿರುಕುಳ ನೀಡಿದ್ದರು. ಇದನ್ನು ಮನೋಜ್ ಪ್ರಶ್ನಿಸಿದ್ದ. ಅಲ್ಲದೇ, ಆರೋಪಿಗಳಿಗೆ ಕಪಾಳಮೋಕ್ಷ ಮಾಡಿದ್ದ ಎನ್ನಲಾಗಿದೆ. ಇದರಿಂದ ಮನೋಜ್ ಮೇಲೆ ದ್ವೇಷ ಹೊಂದಿದ್ದ ಹುಡುಗರು, ಈ ಸೇಡು ತೀರಿಸಿಕೊಳ್ಳಲೆಂದು ಶುಕ್ರವಾರ ರಾತ್ರಿ ಮನೋಜ್ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದಾರೆ.
ವಿದ್ಯಾರ್ಥಿ ಮನೋಜ್ ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಕಂಪ್ಯೂಟರ್ ತರಗತಿ ಮುಗಿಸಿ ತನ್ನ ಮನೆಗೆ ಹೋಗುತ್ತಿದ್ದ. ಈ ವೇಳೆ ದಾರಿಯಲ್ಲಿ ಇಬ್ಬರು ಅಪ್ರಾಪ್ತ ಬಾಲಕರು ಆತನನ್ನು ಸುತ್ತುವರಿದು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ.
ಇದರಿಂದ ಗಂಭೀರವಾಗಿ ಗಾಯಗೊಂಡ ಮನೋಜ್ನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಅಷ್ಟರಲ್ಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಈ ಘಟನೆ ಸಂಬಂಧ ಹತ್ಯೆಯಾದ ಮನೋಜ್ ತಂದೆ ಚಂದನ್ ಸಿಂಗ್ ನೇಗಿ ನೀಡಿದ ದೂರಿನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಆರೋಪಿಗಳಾದ ಅಪ್ರಾಪ್ತ ಬಾಲಕರಿಬ್ಬರನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಹಿಂದಿನ ಲೇಖನಪತ್ರಕರ್ತರಿಗೆ ಹಣ ಆರೋಪ: ಇದು ‘ಪೇ ಸಿಎಂ’ ರೀತಿ ‘ಪೇ ಪಿಎಂ ‘ಆಗಿದೆ-  ಎಂ.ಬಿ ಪಾಟೀಲ್ ವ್ಯಂಗ್ಯ
ಮುಂದಿನ ಲೇಖನಈ ಗುಣಗಳಿರುವ ಮಹಿಳೆಯರನ್ನು ಮದುವೆಯಾಗಲು ಪುರುಷರು ಇಷ್ಟಪಡುತ್ತಾರಂತೆ