ಈ ನಕ್ಷತ್ರ ಪ್ರಯಾಣಿಕೆ ಶುಭವಲ್ಲ ಇದರಲ್ಲಿ ಕಳೆದ ಆಭರಣ ಪುನಃ ಪ್ರಾಪ್ತಿಯಾಗುವುದಿಲ್ಲ ಮಾಡಿದ ಕಾರ್ಯಗಳು ಜಾಗೃತೆಯಾಗಿ ಪೂರ್ಣವಾಗುತ್ತದೆ ಪ್ರಯಾಣ ಅವಶ್ಯಕವಾದರೆ ನೆಲ್ಲಿಕಾಯಿ ಸೇವಿಸಿ ದಕ್ಷಿಣ ಮತ್ತು ಪೂರ್ವಕ್ಕೆ ಪ್ರಯಾಣ ಮಾಡಬಹುದು. ಇದರಲ್ಲಿ, ಜ್ವರ ಉಂಟಾದರೆ ತುಂಬಾ ತೊಂದರೆ ದಾಯಕ. ವಾಯುದೇವರಿಗೆ ಶಾಂತಿ ಮಾಡಿ, ಔಷಧ ಸೇವಿಸಿದರೆ, ಒಂದು ತಿಂಗಳಲ್ಲಿ ಆರೋಗ್ಯವಾಗುತ್ತದೆ..ಈ ನಕ್ಷತ್ರಕ್ಕೆ ಚಂದ್ರನು ಬಂದಾಗ ಉತ್ಪಾತ ಮಾಡಿದರೆ ಮಳೆ ಬರುತ್ತದೆ. ಸೂರ್ಯನ ಸಂಕ್ರಮಣವಾದರೆ ಧಾನ್ಯದ ವಿಷಯದಲ್ಲಿ ತೊಂದರೆ.
ಕನ್ಯೆ ಸ್ವಾತಿಯಲ್ಲಿ ಋತುಮತಿಯಾದರೆ ಸೌಭಾಗ್ಯ ಪ್ರಾಪ್ತಿಯಾಗುತ್ತದೆ. ಋತುಶಾಂತಿ, ಪ್ರಸ್ತ, ನಾಮಕರಣ, ಅನ್ನಪ್ರಾಶನ, ಚೌಲ, ಕ್ಷೌರ, ಅಕ್ಷರಾಭ್ಯಾಸ, ವಿದ್ಯಾಭ್ಯಾಸ, ಶಸ್ತ್ರಧ್ಯಯನ, ವೇದ ವ್ರತ ಸ್ನಾತಕ, ವಿವಾಹ,ನೀರೆರೆದು ಕೊಳ್ಳುವುದು, ನವೀನ ವಸ್ತ್ರಧಾರಣೆ, ನವೀನ ಆಭರಣ ಧಾರಣೆ, ನೃತ್ಯ ಗೀತ ವಿದ್ಯಾರಂಭ, ವಾಹನ,ರಥಾರೋಹಣ, ನೆಲ ಊಳುವುದು, ಬಿತ್ತನೆ, ಹೆಗೆ ತೆಗೆಯುವುದು, ಧಾನ್ಯ ಒಣಗಿಸುವುದು,ಉಪ್ಪಿನಕಾಯಿ ಹಾಕುವುದು, ಆಭರಣ ಮಾಡಿಸುವುದು,ವ್ಯಾಪಾರ ಇವುಗಳಿಗೆಲ್ಲ ಶುಭವಾಗುತ್ತದೆ.
ಸ್ವಾತಿ ನಕ್ಷತ್ರದ ಒಂದನೇ ಚರಣದಲ್ಲಿ ಜನಿಸಿದವರು ಉತ್ತಮ ಮಾತುಗಾರ, ಬುದ್ಧಿವಂತ, ಎರಡನೇ ಚರಣದಲ್ಲಿ ಸರ್ಣವುಳ್ಳವನಾಗಿ, ದೂರಲೋಚನೆಯುಕ್ತ ಮೂರನೇ ಚರಣದಲ್ಲಿ ಮೂರ್ಖ, ಸಿಟ್ಟಿನಿಂದ ಶತ್ರುಗಳನ್ನು ದ್ವೇಷಿಸಿ ಹಣ ಕಳೆದುಕೊಳ್ಳುವವ ಮತ್ತು ನಾಲ್ಕನೇ ಚರಣದಲ್ಲಿ ಕೋಪಿಷ್ಟನಾದರೂ ಉತ್ತಮವೆನಿಸಿ, ಗುರು ಹಿರಿಯರ ಭಕ್ತನಾಗಿ ಧನವಂತ ಜೀವನ ನಡೆಸುವವ, ಮೊದಲು ರಾಹುದೇಶೆ 18 ವರ್ಷ ನಾಲ್ಕನೇ ದಿನ ವರುಷ, ಎಂಟನೇ ದಿನ ವರುಷ, ರೋಗಗಳು ಪೀಡಿಸುತ್ತವೆ. 12ನೇ ವರ್ಷದಲ್ಲಿ ಅಪಮೃತ್ಯು, 30 ರಲ್ಲಿ ಕಾಯಿಲೆ, 45 ರಲ್ಲಿ ಅಪಮೃತ್ಯು. ಜಾತಕಗ್ರಹ ಬಲದಿಂದ ಇವೆಲ್ಲ ಕಳೆದರೆ 90 ವರ್ಷ ಪೂರ್ಣ ಆಯಸ್ಸಾಗುವುದು.
ಸ್ವಾತಿ ನಕ್ಷತ್ರದ ಜಾತಕಾರ ವಿವಾಹಕ್ಕೆ ಹೊಂದುವ ನಕ್ಷತ್ರಗಳು :
ಸ್ವಾತಿ ನಕ್ಷತ್ರದ ಕನ್ಯೆಗೆ :
ಅಶ್ವಿನಿ, ಭರಣಿ, ಕೃತಿಕಾ ರೋಹಿಣಿ,ಮೃಗಶಿರಾ, ಆರ್ದ್ರಾ, ಪುನರ್ವಸು, ಪುಷ್ಯ, ಆಶ್ಲೇಷಾ, ಮಾಘಾ, ಪೂರ್ವಾಫಾಲ್ಗುಣಿ, ಉತ್ತರಾ, ಹಸ್ತಾ. ಚಿತ್ತಾ, ವಿಶಾಖಾ, ನಾಲ್ಕನೇ ಚರಣ ಅನುರಾಧ, ಜೇಷ್ಠಾ, ಮೂಲಾ, ಪೂರ್ವಾಷಾಢ, ಉತ್ತರಾಷಾಢ, ಶ್ರಾವಣ,ದನಿಷ್ಠಾ, ಶತಭಿಷಾ, ಪೂರ್ವ ಭಾದ್ರಪದಾ, ಉತ್ತರಭಾದ್ರಪದಾ, ರೇವತಿ.
ಸ್ವಾತಿ ನಕ್ಷತ್ರದ ವರನಿಗೆ :
ಅಶ್ವಿನಿ, ಭರಣಿ, ಕೃತಿಕಾ, ರೋಹಿಣಿ, ಮೃಗಶಿರಾ,ಆರ್ದ್ರಾ, ಪುನರ್ವಸು ಪುಷ್ಯ, ಆಶ್ಲೇಷ,ಮಘಾ, ಪೂರ್ವಾಪಾಲ್ಗುಣಿ, ಉತ್ತರಾ, ಹಸ್ತಾ, ಚಿತ್ತಾ, ಒಂದು ಎರಡನೇ ಚರಣ, ವಿಶಾಖಾ, ಒಂದು ಎರಡು ಮೂರನೇ ಚರಣ, ಅನುರಾಧ, ಜೇಷ್ಠಾ, ಉತ್ತರಾಷಾಢಾ 2-3 4
ನೇ ಚರಣ, ಶ್ರಾವಣ,ಧನಿಷ್ಠಾ, ಶತಭಿಷಾ, ಪೂರ್ವಾಭಾದ್ರಪದಾ ಒಂದು ಎರಡು ಮೂರನೇ ಚರಣ, ಉತ್ತರಾಭಾದ್ರಪದಾ, ರೇವತಿ.
ಸ್ವಾತಿ ನಕ್ಷತ್ರದವರ ಜನನಕ್ಕೆ ಶಾಂತಿ :
ಪೀವ್ಟೋ ಅನ್ನಾರಯಿ ವೃಧಃ ಸುಮೇಧಾಃ|
ಶ್ವೇತಃ ಸಿಷಕ್ತಿ ನಿಯುತಾ ಮಭಿಶ್ರೀಃ ತೇವಾಯವೇ
ಸಮನಸೋ ವಿತಸ್ತುರ್ವಿಶ್ವೇನ್ನರಃ ಸ್ವಪತ್ಯಾನಿ ಚಕ್ರುಃ||
ಈ ನಕ್ಷತ್ರದಲ್ಲಿ ಸಂತಾನದ ಜನಾನವಾದಾಗ ತಾಯಿ ತಂದೆಯರು ಈ ಮಂತ್ರವನ್ನು ಒಂದು ಮಾಲೆಯಷ್ಟು ಜಪಮಾಡಿ, ಯಥಾ ಶಕ್ತಿ ಅಕ್ಕಿ ಬೆಲ್ಲ ಅವರೇ ಕಾಳನ್ನು ದಾನ ಮಾಡಿದರೆ, ಈ ನಕ್ಷತ್ರದ ದೋಷ ಶಾಂತವಾಗುತ್ತವೆ.
ಯಂತ್ರ :
ಸನಃ ಪಿತೇವ ಸೂನವೇ ಅಗ್ನೇಸೂ ಪಾಯನೋಭವ|
ಸಚಂತ್ವಾನಃ ಸ್ವಸ್ತಯೆ ||
ಸರ್ವಪ್ರಥಮ ಈ ಯಂತ್ರವನ್ನು ಸವರ್ಣ ಪತ್ರದ ಮೇಲೆ ಉತ್ಕೀರ್ಣ ಗೊಳಿಸಿ ಶ್ರೀಗಂಧ, ಅಗರು, ಅಗಿಲು, ಗುಗ್ಗುಲದ ದೂಪ ನೀಡಿ, ಈ ಮೇಲಿನ ಮಂತ್ರವನ್ನು ಒಂದು ಸಹಸ್ರ ಸಂಖ್ಯೆಯಲ್ಲಿ ಜಪಿಸಬೇಕು. ಪಾಯಸ ನೈವೇದ್ಯ ಅರ್ಪಿಸಿ, ಹೋಮಮಾಡಿ, ಪಾಯಸವನ್ನೇ ಬಲಿ ನೀಡಬೇಕು. ಇದರಿಂದ ಈ ನಕ್ಷತ್ರದ ಸಮಸ್ತ ದೋಷಗಳ ಶಾಂತಿಯಾಗುತ್ತದೆ.
ಮಂತ್ರ :
ಓಂ ಹಾಂ ವಾಯವೇ ನಮಃ