ಮನೆ ಅಪರಾಧ ಶಿವಮೊಗ್ಗ:  ಸ್ಮಶಾನಕ್ಕೆ ಕೊಂಡೊಯ್ಯುತ್ತಿದ್ದ ಶವ ಆಸ್ಪತ್ರೆಗೆ ರವಾನೆ

ಶಿವಮೊಗ್ಗ:  ಸ್ಮಶಾನಕ್ಕೆ ಕೊಂಡೊಯ್ಯುತ್ತಿದ್ದ ಶವ ಆಸ್ಪತ್ರೆಗೆ ರವಾನೆ

0

ಶಿವಮೊಗ್ಗ(Shivamogga):  ಮೃತ ವ್ಯಕ್ತಿಯ ಶವವನ್ನು ಅಂತ್ಯಕ್ರಿಯೆಗೆಂದು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ಸಂದರ್ಭದಲ್ಲಿ  ಮಾರ್ಗಮಧ್ಯೆ ಹಾಜರಾದ ಪೊಲೀಸರು ಪಾರ್ಥೀವ ಶರೀರವನ್ನು ಚಟ್ಟದಿಂದ ಕೆಳಗಿಳಿಸಿ ನಗರದ ಮೆಗ್ಗಾನ್ ಆಸ್ಪತ್ರೆಗೆ ಮರುಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಮಾರುತಿ ಕ್ಯಾಂಪ್ ನ ವಿಠ್ಠಲ ಮೃತ ದುರ್ದೈವಿ.

ಏನಿದು ಘಟನೆ ?:

ಸಮೀಪದ ಲಕ್ಕಿನಕೊಪ್ಪದ ಕಾಡಿನಲ್ಲಿ ಬೆಳಿಗ್ಗೆ ಉರುಳಿಹಳ್ಳಿ ಮಾರುತಿ‌ ಕ್ಯಾಂಪ್ ನಿವಾಸಿ ವಿಠಲ ಮತ್ತು ಅತನ ಸ್ನೇಹಿತ ಇಬ್ವರು ಕುಡಿದು ಮಲಗಿದ್ದಾರೆ. ಜೊತೆಯಲ್ಲಿ ಮಲಗಿದ್ದ ವಿಠಲನ ಸ್ನೇಹಿತ ಎದ್ದು ಗ್ರಾಮಕ್ಕೆ ತೆರಳಿದ್ದು, ವಿಠಲ ಎದ್ದು ಬಂದಿಲ್ಲ.ಗ್ರಾಮಸ್ಥರೊಬ್ಬರು ಕಾಡಿಗೆ ತೆರಳಿದಾಗ ವಿಠಲನ ಶವ ಪತ್ತೆಯಾಗಿದ್ದು, ಆತನ ಕುಟುಂಬಕ್ಕೆ ವಿಷಯ ಮುಟ್ಟಿಸಿದ್ದಾರೆ. ಕುಟುಂಬದವರೂ ಬಂದಿದ್ದಾರೆ.

ಹೆಚ್ಚು ಕುಡಿತದಿಂದ ಆತ‌ ಸತ್ತಿರಬಹುದು ಎಂದು ಅನುಮಾನ ವ್ಯಕ್ತಪಡಿಸಿ ಅಂತ್ಯ ಸಂಸ್ಥಾರಕ್ಕೆ ಗ್ರಾಮದ ಸ್ಮಶಾನಕ್ಕೆ ಮೃತದೇಹ ಕೊಂಡೊಯ್ದಿದ್ದಾರೆ. ಆದರೆ, ಗ್ರಾಮಸ್ಥರೊಬ್ಬರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿ ತುಂಗನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಅಂತ್ಯ ಸಂಸ್ಕಾರವನ್ನ ತಡೆದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಮರುಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ರವಾನಿಸಿದ್ದಾರೆ.

ಹಿಂದಿನ ಲೇಖನಶೆಡ್ ಮೇಲೆ ಗುಡ್ಡ ಕುಸಿತ:  ಮೂವರ ಸಾವು, ಓರ್ವನ ಸ್ಥಿತಿ ಗಂಭೀರ
ಮುಂದಿನ ಲೇಖನಕೆರೂರಿನಲ್ಲಿ ಗಲಭೆ: ನಾಲ್ಕು ಪ್ರಕರಣ ದಾಖಲು, 18 ಮಂದಿ ವಶ