ಮನೆ ಅಪರಾಧ ಇಷ್ಟದ ತರಕಾರಿ ಸಾಂಬಾರ್ ಮಾಡಿಲ್ಲವೆಂಬ ಕಾರಣಕ್ಕೆ ತಾಯಿಯನ್ನೇ ಕೊಂದ ಮಗ

ಇಷ್ಟದ ತರಕಾರಿ ಸಾಂಬಾರ್ ಮಾಡಿಲ್ಲವೆಂಬ ಕಾರಣಕ್ಕೆ ತಾಯಿಯನ್ನೇ ಕೊಂದ ಮಗ

0

ಪಂಜಾಬ್(Punjab)​: ಮಧ್ಯಾಹ್ನದ ಊಟಕ್ಕೆ ತನಗಿಷ್ಟವಾದ ತರಕಾರಿ ಸಾಂಬಾರ್ ಮಾಡಿಲ್ಲವೆಂಬ ಕಾರಣಕ್ಕೆ ಮಗನೇ ತನ್ನ ತಾಯಿಯನ್ನು ಮನೆಯ ಮಹಡಿಯಿಂದ ತಳ್ಳಿ ಕೊಲೆ ಮಾಡಿರುವ ಘಟನೆ ಲೂಧಿಯಾನ ಜಿಲ್ಲೆಯ ನ್ಯೂ ಅಶೋಕ್ ನಗರದಲ್ಲಿ ಬೆಳಕಿಗೆ ಬಂದಿದೆ.

ಸುರಿಂದರ್ ಸಿಂಗ್ (26) ಅಲಿಯಾಸ್ ಟಿಂಕು ತಾಯಿ ಕೊಂದ ಕಿಡಿಗೇಡಿ. ಚರಂಜಿತ್ ಮೃತ ತಾಯಿ.

ಮಾಹಿತಿ ಪ್ರಕಾರ, ಮಧ್ಯಾಹ್ನದ ಊಟಕ್ಕೆ ತನ್ನ ನೆಚ್ಚಿನ ತರಕಾರಿಯನ್ನ ಅಡುಗೆ ಮಾಡಿಲ್ಲ ಎಂದು ಕೋಪಗೊಂಡು ಸ್ವಂತ ತಾಯಿಯನ್ನ ಥಳಿಸಿ, ಮನೆಯ ಛಾವಣಿಯಿಂದ ಕೆಳಗೆ ತಳ್ಳಿದ್ದಾನೆ. ಈ ವೇಳೆ ಪತ್ನಿ ರಕ್ಷಿಸಲು ಬಂದ ತಂದೆಗೂ ಸಹ ಟಿಂಕು ಕಬ್ಬಿಣದ ರಾಡ್​ನಿಂದ ಥಳಿಸಿದ್ದು, ಗಂಭೀರವಾಗಿ ಗಾಯಗೊಂಡ ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಆಕೆ ಸಾವನ್ನಪ್ಪಿದ್ದಾರೆ.

ಆರೋಪಿ ಮಾನಸಿಕ ಅಸ್ವಸ್ಥನಾಗಿದ್ದು, ನಿರುದ್ಯೋಗಿಯಾಗಿದ್ದಾನೆ.

ಚರಂಜಿತ್ ಮೃತದೇಹವನ್ನು ಸಿವಿಲ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಸಂಬಂಧಿಕರು ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಕುರಿತು ಸೇಲಂ ತಬರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.

ಹಿಂದಿನ ಲೇಖನಹಾಸನಾಂಬ ದರ್ಶನಕ್ಕೆ ಹರಿದು ಬಂದ ಭಕ್ತಸಾಗರ: 3 ದಿನದಲ್ಲಿ 42.78 ಲಕ್ಷ ರೂ. ಸಂಗ್ರಹ
ಮುಂದಿನ ಲೇಖನಭಾರತ-ಪಾಕಿಸ್ತಾನದ ಗಡಿಯಲ್ಲಿ ನಿರ್ಮಾಣವಾಗಲಿರುವ ವಾಯುನೆಲೆಗೆ ಪ್ರಧಾನಿ ಶಂಕುಸ್ಥಾಪನೆ