ಮನೆ ಸುದ್ದಿ ಜಾಲ ಕುಣಿಗಲ್ ನಲ್ಲಿ  ಕೆಎಸ್ ​ಆರ್ ​ಟಿಸಿ ಬಸ್ ​ನ ಟೈರ್ ಸ್ಫೋಟ:  ಇಬ್ಬರಿಗೆ ಗಂಭೀರ ಗಾಯ

ಕುಣಿಗಲ್ ನಲ್ಲಿ  ಕೆಎಸ್ ​ಆರ್ ​ಟಿಸಿ ಬಸ್ ​ನ ಟೈರ್ ಸ್ಫೋಟ:  ಇಬ್ಬರಿಗೆ ಗಂಭೀರ ಗಾಯ

0

ಕುಣಿಗಲ್: ತಾಲೂಕಿನ ಹುತ್ರಿದುರ್ಗ ವ್ಯಾಪ್ತಿಯ ಶಿವಪುರ ಗ್ರಾಮದ ಬಳಿ ಕೆಎಸ್ ​ಆರ್​ ಟಿಸಿ ಬಸ್ ​ನ ಹಿಂಬದಿ ಟೈರ್ ಸ್ಪೋಟಗೊಂಡು ಇಬ್ಬರು ವ್ಯಕ್ತಿಗಳು ಗಂಭೀರ ಗಾಯಗೊಂಡಿದ್ದಾರೆ.

Join Our Whatsapp Group

ಗಾಯಾಳುಗಳಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಆದಿ ಚುಂಚನಗಿರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ತಾವರೆಕೆರೆಯಿಂದ ಇಪ್ಪಾಡಿ ಮಾರ್ಗವಾಗಿ ಕುಣಿಗಲ್​ ಗೆ ತೆರಳುತ್ತಿದ್ದ ಸರ್ಕಾರಿ ಬಸ್​ ನ ಟೈರ್ ಸ್ಫೋಟಗೊಂಡು ಶಿವಪುರ ಗ್ರಾಮದ ಬಳಿ ಅವಘಡ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಹಿಂಬದಿ ಚಕ್ರದ ಮೇಲ್ಭಾಗದ ಸೀಟ್ ​ನಲ್ಲಿ ಕುಳಿತಿದ್ದ ಇಬ್ಬರು ಪ್ರಯಾಣಿಕರ ಕಾಲು ಮುರಿದಿದೆ.

ಬಸ್ ​ನ ಟೈರ್ ಹಳೆಯದಾಗಿದ್ದು ಹಾಗೂ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರನ್ನು ಹತ್ತಿಸಿಕೊಂಡಿದ್ದರಿಂದ ಅವಘಡ ಸಂಭವಿಸಿದೆ ಎನ್ನಲಾಗಿದೆ. ಬಸ್ಸಿನಲ್ಲಿ ಶಾಲೆ-ಕಾಲೇಜಿಗೆ ತೆರಳುತ್ತಿದ್ದ ಸಾಕಷ್ಟು ವಿದ್ಯಾರ್ಥಿಗಳಿದ್ದರು. ಅದೃಷ್ಟವಶಾತ್ ಭಾರೀ ಅವಘಡ ತಪ್ಪಿದೆ.

ಕುಣಿಗಲ್​ ನಿಂದ ಇಪ್ಪಾಡಿ ಮಾರ್ಗವಾಗಿ ತಾವರೆಕೆರೆ ಗ್ರಾಮಕ್ಕೆ ತೆರಳುತ್ತಿದ್ದ ಬಸ್ ​ಗಳಲ್ಲಿ ವ್ಯತ್ಯಯ ಉಂಟಾಗಿದೆ.

ಹಿಂದಿನ ಲೇಖನಅಭಿಯೋಗ ಇಲಾಖೆಗೆ ಪ್ರಭಾರ ನಿರ್ದೇಶಕರ ನೇಮಕಾತಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ಮುಂದಿನ ಲೇಖನಮಧ್ಯ ಪ್ರದೇಶದಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ