ಮನೆ ಜ್ಯೋತಿಷ್ಯ ಇಂದಿನ ರಾಶಿ ಭವಿಷ್ಯ

ಇಂದಿನ ರಾಶಿ ಭವಿಷ್ಯ

0

ನಿಮಗಿಂದು ಶುಭ ದಿನವೇ ಅಥವಾ ಅಶುಭ ದಿನವೇ ನಿಮ್ಮ ರಾಶಿಯ ಫಲಾಫಲ ಈ ದಿನ ಹೇಗಿರುತ್ತದೆ ಎಂಬುದನ್ನು ಇಂದಿನ ರಾಶಿ ಭವಿಷ್ಯ ನೋಡಿ ತಿಳಿದುಕೊಳ್ಳಿ.

ಮೇಷ ರಾಶಿ

ಈ ದಿನ ಶುಭದಾಯಕವಾಗಿರುತ್ತದೆ. ಸಹೋದರರಿಂದ ನೆರವು ದೊರೆಯುತ್ತದೆ. ದೇವಾಲಯ ದರ್ಶನ ಯೋಗ ಇದೆ. ಮನಸಿಗೆ ನೆಮ್ಮದಿ ಇದೆ. ಸಾಲ ಬಾಧೆ, ಶತ್ರು ಬಾಧೆ ನಿವಾರಣೆ ಆಗುತ್ತದೆ. ದೀರ್ಘ ಕಾಲದ ಪ್ರಯಾಣ ಮಾಡಲಿದ್ದೀರಿ. ಆ ಪ್ರಯಾಣ ಸುಖಕರವಾಗಿರುತ್ತದೆ. ದೊಡ್ಡ ವ್ಯಾಪಾರಿಗಳಿಗೆ ಅಧಿಕ ಲಾಭ ಇದೆ.

ವೃಷಭ ರಾಶಿ

ನಿಮ್ಮ ರಾಶಿಯವರಿಗೆ ಸಾಧಾರಣ ಫಲ ಇದೆ. ನಿಮಗೆ ಗೋಚಾರದಲ್ಲಿ ಅಷ್ಟಮ ಶನಿ ಇದೆ. ಹಾಗಂತ ಹೆದರುವ ಅಗತ್ಯ ಇಲ್ಲ. ಎಲ್ಲ ರಾಶಿಯವರಿಗೂ ಶುಭಾಶುಭ ಫಲಗಳು ಸಾಮಾನ್ಯ. ಆದರೆ ಈ ದಿನ ವಾಹನ ಚಾಲನೆಯಲ್ಲಿ ಎಚ್ಚರದಿಂದ ಇರಿ. ಹೊಸ ವಾಹನ ಖರೀದಿ ಮಾಡುವುದು ಬೇಡ. ಯಾವುದೇ ಹೊಸ ಕೆಲಸ ಶುರು ಮಾಡಬೇಡಿ. ಮಾನಸಿಕ ಬಾಧೆ ಇದೆ. ನಿರ್ಧಾರ ತೆಗೆದುಕೊಳ್ಳಲು ಆಗಲ್ಲ. ದಕ್ಷಿಣಾಮೂರ್ತಿ ದೇವರಿಗೆ ಅರ್ಚನೆ ಮಾಡಿಸಿ.

ಮಿಥುನ ರಾಶಿ

ಈ ದಿನ ತೃಪ್ತಿದಾಯಕವಾಗಿರುತ್ತದೆ. ಸಾಂಸಾರಿಕವಾಗಿ, ಕೌಟುಂಬಿಕವಾಗಿ, ವ್ಯಾಪಾರದಲ್ಲಿ ಆಗಬಹುದು, ಉದ್ಯೋಗದಲ್ಲಿ ಆಗಬಹುದು ತೃಪ್ತಿ ದೊರೆಯುತ್ತದೆ. ನೂತನ ದಂಪತಿಗೆ ಸಂತಾನ ವಿಚಾರವಾಗಿ ಶುಭ ಸುದ್ದಿ ದೊರೆಯುವ ಸಾಧ್ಯತೆ ಇದೆ. ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಬೇಕು ಅಂದುಕೊಳ್ಳುವ ವಿದ್ಯಾರ್ಥಿಗಳಿಗೆ ಅನುಕೂಲಕರ ಸನ್ನಿವೇಶ ನಿರ್ಮಾಣ ಆಗಲಿದೆ. ಹಿರಿಯರ ಆಶೀರ್ವಾದ ದೊರೆಯಲಿದೆ.

ಕರ್ಕಾಟಕ ರಾಶಿ

ಈ ದಿನ ಮಿಶ್ರಫಲ ಇರುತ್ತದೆ. ಶತ್ರುತ್ವ ದೂರ ಆಗುವ ದಿನ ಇದು. ನೂತನ ವಸ್ತ್ರ ಖರೀದಿಗೆ ಮುಂದಾಗುತ್ತೀರಿ. ಮಹಿಳೆಯರಿಗೆ ಉತ್ತಮ ದಿನ ಇದು. ಆಹಾರ-ನೀರು ಸೇವನೆ ವಿಚಾರದಲ್ಲಿ ಎಚ್ಚರವಾಗಿ ಇರಿ. ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದಂತೆ ಸಮಸ್ಯೆಗಳಗಬಹುದು. ಇಂದಿನ ದೋಷ ನಿವಾರಣೆಗೆ ಹನ್ನೆರಡು ಸೂರ್ಯ ನಮಸ್ಕಾರ ಮಾಡಬೇಕು.

ಸಿಂಹ ರಾಶಿ

ಅತ್ಯಂತ ಶುಭದಾಯಕ ದಿನವಿದು. ವಿವಾಹ ಮಾತುಕತೆಗಳಲ್ಲಿ ಜಯ ಪ್ರಾಪ್ತಿ ಇದೆ. ವಿವಾಹ ಮಾತುಕತೆಗಳಲ್ಲಿ ಜಯ ಪ್ರಾಪ್ತಿ. ಮನಸಿಗೆ ಸಂತೋಷ ಆಗುವ ರೀತಿಯಲ್ಲಿ ಅಭಿವೃದ್ಧಿ ಇದೆ. ಸರಕಾರಿ ಕೆಲಸದಲ್ಲಿ ಅಭಿವೃದ್ಧಿ, ಬಡ್ತಿ, ಧನಲಾಭ, ಶತ್ರುನಾಶ, ಸಾಳ ಬಾಧೆ ನಿವಾರಣೆ, ಆರೋಗ್ಯದಲ್ಲಿ ವೃದ್ಧಿ, ಸ್ನೇಹಿತರಿಂದ ಸಹಾಯ ಪಡೆಯುತ್ತೀರಿ.

ಕನ್ಯಾ ರಾಶಿ

ಈ ದಿನ ಅಶುಭದಾಯಕವಾಗಿದೆ. ಸಣ್ಣ-ಪುಟ್ಟ ಅಪಘಾತ ಆಗಬಹುದು. ಸಮಸ್ಯೆಗಳಾಗಬಹುದು. ಅತಿಯಾದ ಕೋಪ ಮಾಡಿಕೊಳ್ಳುವುದು ಒಳ್ಳೆಯದಲ್ಲ. ಇಬ್ಬರ ಜಗಳದಲ್ಲಿ ಮಧ್ಯೆ ಹೋಗಿ ಬಿಡಿಸಲು ಹೋಗಬೇಡಿ. ನೀವು ತೊಂದರಕ್ಕೆ ಸಿಲುಕಿಕೊಳ್ಳಬಹುದು. ಬೆಲೆಬಾಳುವ ವಸ್ತುಗಳ ಬಗ್ಗೆ ಗಮನ ಇರಲಿ. ದೂರ ಪ್ರಯಾಣ ಮಾಡಬೇಕಾಗುತ್ತದೆ. ಆದರೆ ಸುರಕ್ಷಿತ ಕ್ರಮ ತೆಗೆದುಕೊಳ್ಳಬೇಕು. ದೋಷ ನಿವಾರಣೆಗೆ ಶಂಕರಾಚಾರ್ಯ ವಿರಚಿತ ಗುರು ಸ್ತೋತ್ರ ಪಠಿಸಿ ಅಥವಾ ಶ್ರವಣ ಮಾಡಿ.

ತುಲಾ ರಾಶಿ

ಲಾಭದಾಯಕವಾದ ದಿನ ಇದು. ತಂದೆ-ತಾಯಿ ಆಶೀರ್ವಾದ ಸಿಗುವ ದಿನ. ಬೆಲೆಬಾಳುವ ವಸ್ತುಗಳನ್ನು ಖರೀದಿಸುತ್ತೀರಿ. ತಂದೆ-ತಾಯಿಗೆ ನಮಸ್ಕಾರ ಮಾಡಿಕೊಂಡು ಯಾವುದೇ ಕೆಲಸ ಆರಂಭಿಸಿ. ಸ್ಥಿರಾಸ್ತಿ ಖರೀದಿ ಮಾಡುವ ಮನಸ್ಸು ಇದ್ದರೆ ಜಯ ಪ್ರಾಪ್ತಿ ಆಗುತ್ತದೆ. ಆರೋಗ್ಯದಲ್ಲಿ ವೃದ್ಧಿ ಆಗುತ್ತದೆ.

ವೃಶ್ಚಿಕ ರಾಶಿ

ಶುಭದಾಯಕ ದಿನ ಇದು. ವಿದೇಶಿ ಪ್ರವಾಸಕ್ಕೆ ಯೋಚನೆ ಮಾಡುತ್ತಿದ್ದರೆ ಅದರಲ್ಲಿ ಜಯ ಪ್ರಾಪ್ತಿ ಇದೆ. ವ್ಯಾಪಾರ-ವ್ಯವಹಾರದಲ್ಲಿ ಉತ್ತಮ ಲಾಭ ಇದೆ. ಪದೋನ್ನತಿ ಹಾಗೂ ಉನ್ನತ ಸ್ಥಾನಮಾನ ಸಿಗುವ ಸಾಧ್ಯತೆ ಇದೆ. ಹೊಸ ಕೆಲಸದ ನಿರೀಕ್ಷೆಯಲ್ಲಿದ್ದರೆ ಅದರಲ್ಲೂ ಜಯ ಪ್ರಾಪ್ತಿ ಆಗುತ್ತದೆ. ಸುಖವಾದ ಅಭಿವೃದ್ಧಿಯನ್ನು ಪಡೆಯುತ್ತೀರಿ.

ಧನು ರಾಶಿ

ಉತ್ತಮವಾದ ಶುಭದಾಯಕ ದಿನವಿದು. ವ್ಯಾಪಾರಿಗಳು-ಉದ್ಯಮಿಗಳಿಗೆ ಅತಿಶಯವಾದ ಶುಭಫಲ ದೊರೆಯಲಿದೆ. ತೈಲ-ನೀರು ಮಾರಾಟ ಮಾಡುವವರಿಗೆ ಅಭಿವೃದ್ಧಿ. ಬಂಡವಾಳ ಹೂಡಿಕೆಗೂ ಇಂದು ಶುಭ ದಿನ. ಷೇರು ಮತ್ತಿತರ ಹೂಡಿಕೆ ವ್ಯವಹಾರಗಳಲ್ಲಿ ಅಧಿಕವಾದ ಲಾಭ ದೊರೆಯುತ್ತದೆ.

ಮಕರ ರಾಶಿ

ಅಶುಭದಾಯಕವಾದ ದಿನ ಇದು. ನಕಾರಾತ್ಮಕ ಪರಿಣಾಮಗಳು ಆಗಬಹುದು.ರೋಗಭಯ ಕಾಡುತ್ತದೆ. ಅಧಿಕಾರದ ಕುರ್ಚಿಯಿಂದ ಕೆಳಗಿಳಿಯುವ ದಿನ. ಆತುರಪಟ್ಟು ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳಬೇಡಿ. ಇನ್ನು ಆರೋಗ್ಯದ ವಿಚಾರದಲ್ಲೂ ಎಚ್ಚರವಾಗಿರಬೇಕು. ಈಶ್ವರನ ಆರಾಧನೆ ಮಾಡಿ.

ಕುಂಭ ರಾಶಿ

ನಿಮಗೆ ಇಂದು ಸಾಧಾರಣವಾದ ದಿನ. ಬಂಧುಗಳ ಆಗಮನ ಆಗುತ್ತದೆ. ಮನಸಿಗೆ ಸಂತೋಷ ಆಗುತ್ತದೆ. ಬಂಧುಗಳು-ಸ್ನೇಹಿತರು ನಿಮಗೆ ನೆರವು ನೀಡುತ್ತಾರೆ. ಮೂರನೇ ವ್ಯಕ್ತಿ ಅಥವಾ ಹೊಸ ಪರಿಚಯದ ವ್ಯಕ್ತಿಯಿಂದ ಧನ ನಷ್ಟ-ಮಾನ ನಷ್ಟ ಆಗುವ ಯೋಗ ಇದೆ. ಇದರಿಂದ ಭಯ-ಆತಂಕ ಉಂಟಾಗುತ್ತದೆ. ಆದ್ದರಿಂದ ಯಾವುದೇ ಕೆಲಸಕ್ಕೆ ಮುನ್ನ ತಂದೆ-ತಾಯಿ ಆಶೀರ್ವಾದ ಪಡೆಯಿರಿ.

ಮೀನ ರಾಶಿ

ತೃಪ್ತಿದಾಯಕ ದಿನವಿದು. ಶಿಕ್ಷಕರಿಗೆ-ವಿದ್ಯಾರ್ಥಿಗಳಿಗೆ ಉತ್ತಮವಾದ ದಿನ. ಶುಭ ಫಲ ಪಡೆಯುತ್ತೀರಿ. ಆರೋಗ್ಯದಲ್ಲಿ ವೃದ್ಧಿ ಇದೆ. ಮೃಷ್ಟಾನ್ನ ಭೋಜನ ಮಾಡುವ ಯೋಗ ಇದೆ. ರಾಜಕೀಯ ವ್ಯಕ್ತಿಗಳಿಗೆ ಜಯ ಪ್ರಾಪ್ತಿ ಆಗಲಿದೆ. ರೈತರಿಗೆ ಕೃಷಿಯಲ್ಲಿ ಅದ್ಭುತವಾದ ಬೆಳವಣಿಗೆ ಇದೆ. ಬಹಳ ಸಂತೋಷಕರವಾಗಿ ದಿನ ಕಳೆಯುತ್ತೀರಿ.

ಹಿಂದಿನ ಲೇಖನಸಿದ್ದರಾಮಯ್ಯ ಕಿರಿಯ ಸಹೋದರ ರಾಮೇಗೌಡ ನಿಧನ: ಸಂತಾಪ ಸೂಚಿಸಿದ ಸಿಎಂ ಬೊಮ್ಮಾಯಿ
ಮುಂದಿನ ಲೇಖನಚಿತ್ರದುರ್ಗದಲ್ಲಿ ಕಾರು-ಲಾರಿ ನಡುವೆ ಅಪಘಾತ: ಮೂವರ ಸಾವು