ಮನೆ ರಾಜ್ಯ ಇಂದಿನ ಹವಾಮಾನ ವರದಿ

ಇಂದಿನ ಹವಾಮಾನ ವರದಿ

0

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಲಿನ ವಾತಾವಾರಣ ಇರಲಿದೆ. ಆದರೆ ಮೂರ್ನಾಲ್ಕು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಬೆಂಗಳೂರು, ಕಲಬುರಗಿ, ಮಂಗಳೂರು, ಶಿವಮೊಗ್ಗ, ಮೈಸೂರು, ಮಂಡ್ಯ, ಕೊಡಗು, ಬೀದರ್, ಹಾಸನ, ರಾಯಚೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿಕ್ಕಮಗಳೂರು, ದಾವಣಗೆರೆ ಸೇರಿದಂತೆ ದಕ್ಷಿಣ ಒಳನಾಡು ಭಾಗಗಳಲ್ಲಿ ಮುಂಜಾನೆ ಮೋಡ ಕವಿದ ವಾತಾವರಣ ಇರಲಿದ್ದು, ಮಧ್ಯಾಹ್ನದ ವೇಳೆಗೆ ಬಿಸಿಲಿನ ತಾಪಮಾನದಲ್ಲಿ ಏರಿಕೆಯಾಗಲಿದೆ. ಬೆಳಗಾವಿ, ಚಾಮರಾಜನಗರ, ಹಾವೇರಿ, ಬಾಗಲಕೋಟೆ ಜಿಲ್ಲೆಯಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ 29-19, ಮಂಗಳೂರಿನಲ್ಲಿ 29-24, ಶಿವಮೊಗ್ಗದಲ್ಲಿ 28-21, ಬೆಳಗಾವಿಯಲ್ಲಿ 26-20, ಮೈಸೂರಿನಲ್ಲಿ 31-20, ಮಂಡ್ಯದಲ್ಲಿ 31-21, ಕೊಡಗಿನಲ್ಲಿ 25-17, ರಾಮನಗರದಲ್ಲಿ 31-21,
ಹಾಸನದಲ್ಲಿ 27-19, ಚಾಮರಾಜನಗರದಲ್ಲಿ 31-21, ಚಿಕ್ಕಬಳ್ಳಾಪುರದಲ್ಲಿ 29-19, ಕೋಲಾರದಲ್ಲಿ 31-21, ತುಮಕೂರಿನಲ್ಲಿ 29-20, ಉಡುಪಿಯಲ್ಲಿ 29-24, ಚಿಕ್ಕಮಗಳೂರಿನಲ್ಲಿ 26-18, ದಾವಣಗೆರೆಯಲ್ಲಿ 29-21, ಚಿತ್ರದುರ್ಗದಲ್ಲಿ 29-20, ಹಾವೇರಿಯಲ್ಲಿ 28-21, ಬಳ್ಳಾರಿಯಲ್ಲಿ 33-23, ಗದಗದಲ್ಲಿ 29-21, ಕೊಪ್ಪಳದಲ್ಲಿ 31-22, ರಾಯಚೂರಿನಲ್ಲಿ 33-23, ಯಾದಗಿರಿಯಲ್ಲಿ 32-23, ವಿಜಯಪುರದಲ್ಲಿ 31-21, ಬೀದರ್ ನಲ್ಲಿ 29-21, ಕಲಬುರಗಿಯಲ್ಲಿ 31-22, ಬಾಗಲಕೋಟೆಯಲ್ಲಿ 31-22 ಡಿಗ್ರಿ ಸೆಲ್ಸಿಯಸ್‌ ಇರಲಿದೆ.

ಹಿಂದಿನ ಲೇಖನಶಾಲಾ-ಕಾಲೇಜುಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ: ನಿಯಮ ಉಲ್ಲಂಘಿಸಬಾರದು
ಮುಂದಿನ ಲೇಖನಇಂದಿನ ಚಿನ್ನ-ಬೆಳ್ಳಿ ದರದ ವಿವರ