ಮನೆ ಅಪರಾಧ ಸಾಲ ಹಿಂದಿರುಗಿಸಿಲ್ಲವೆಂದು ಇಬ್ಬರು ಮಹಿಳೆಯರ ಮೇಲೆ ಹಲ್ಲೆ

ಸಾಲ ಹಿಂದಿರುಗಿಸಿಲ್ಲವೆಂದು ಇಬ್ಬರು ಮಹಿಳೆಯರ ಮೇಲೆ ಹಲ್ಲೆ

0

ಆನೇಕಲ್ (Anekal): ಸಾಲ ಹಿಂದಿರುಗಿಸಲಿಲ್ಲ ಎಂಬ ಕಾರಣಕ್ಕೆ ಮಹಿಳೆಯರಿಬ್ಬರ ಮೇಲೆ ಹಲ್ಲೆ ನಡೆಸಿ, ಬಟ್ಟೆ ಹರಿದು ಹಾಕಿರುವ ಘಟನೆ ಸರ್ಜಾಪುರ ಪೊಲೀಸ್‌ ಠಾಣೆ ವ್ಯಾಪ್ತಿಯ ನೆರಿಗಾ ಗ್ರಾಮದಲ್ಲಿ ನಡೆದಿದೆ.

ನೆರಿಗಾ ಗ್ರಾಮದ ಸುಬ್ಬಾರೆಡ್ಡಿ ಅವರ ಪುತ್ರಿಯರಾದ ಶಾಂತಿಪ್ರಿಯ ಮತ್ತು ಭಾನುಪ್ರಿಯ ಹಲ್ಲೆಗೊಳಗಾದವರು. ರಾಮಕೃಷ್ಣಾ ರೆಡ್ಡಿ, ಇಂದಿರಮ್ಮ ಮತ್ತು ಇವರ ಮಗ ಸುನೀಲ್‌ ಕುಮಾರ್‌ ಹಲ್ಲೆ ಮಾಡಿರುವ ಆರೋಪಿಗಳು.

ಶಾಂತಿಪ್ರಿಯ ಅವರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಐದು ವರ್ಷಗಳ ಹಿಂದೆ 1 ಲಕ್ಷ ರೂ. ಸಾಲ ಪಡೆದಿದ್ದರು. ಇದಕ್ಕೆ ನಿಯಮಿತವಾಗಿ ಬಡ್ಡಿ ಪಾವತಿಸಿದ್ದರು. ಕೋವಿಡ್‌–19 ನಂತರ ಬಡ್ಡಿ ಪಾವತಿಸಿರಲಿಲ್ಲ ಎನ್ನಲಾಗಿದೆ. ಹಣ ವಸೂಲಿ ಮಾಡಲು ಬಂದ ರಾಮಕೃಷ್ಣಾರೆಡ್ಡಿ, ಇಂದಿರಮ್ಮ ಮತ್ತು ಸುನೀಲ್‌ ಅವರು ಶಾಂತಿಪ್ರಿಯ ಅವರ ತಂದೆ ಸುಬ್ಬಾರೆಡ್ಡಿ ಅವರನ್ನು ಕೊಠಡಿಯಲ್ಲಿ ಕೂಡಿಹಾಕಿದ್ದಾರೆ. ಬಳಿಕ ಶಾಂತಿಪ್ರಿಯ ಅವರ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ಬಿಡಿಸಲು ಬಂದ ಭಾನುಪ್ರಿಯ ಅವರ ಬಟ್ಟೆ ಹರಿದು ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ವರ್ಷಕ್ಕೆ 1 ಲಕ್ಷ ರೂ. ಶೇ.30ರಷ್ಟು ಬಡ್ಡಿ ಹಾಕಿ ಒಟ್ಟು 11 ಲಕ್ಷ ರೂ. ಪಾವತಿಸಬೇಕು ಎಂದು ಹೇಳುತ್ತಿದ್ದಾರೆ. ಸಾಲ ವಾಪಸ್‌ ನೀಡುವುದಾಗಿ ತಿಳಿಸಿದರೂ ಸಹ ಹಲ್ಲೆ ನಡೆಸಿದ್ದಾರೆ ಎಂದು ಶಾಂತಿಪ್ರಿಯ ಆರೋಪಿಸಿದ್ದಾರೆ. ಈ ಬಗ್ಗೆ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಮಾನವರಹಿತ ಡಿಆರ್‌ಡಿಒ ಯುದ್ಧ ವಿಮಾನ ಯಶಸ್ವಿ ಹಾರಾಟ
ಮುಂದಿನ ಲೇಖನದೇವೇಗೌಡರ ಬಗ್ಗೆ ಕೆ.ಎನ್.ರಾಜಣ್ಣ ಹಗುರ ಮಾತು: ಕ್ಷಮೆ ಕೋರಲು ಸೂಚಿಸಿದ ಡಿಕೆಶಿ