ಮನೆ ರಾಷ್ಟ್ರೀಯ ಮುಂಗಾರು ಬೆಳೆಗಳ ಕನಿಷ್ಟ ಬೆಂಬಲ ಬೆಲೆ ಏರಿಕೆಗೆ ಕೇಂದ್ರ ಸಚಿವ ಸಂಪುಟ ತೀರ್ಮಾನ

ಮುಂಗಾರು ಬೆಳೆಗಳ ಕನಿಷ್ಟ ಬೆಂಬಲ ಬೆಲೆ ಏರಿಕೆಗೆ ಕೇಂದ್ರ ಸಚಿವ ಸಂಪುಟ ತೀರ್ಮಾನ

0

ನವದೆಹಲಿ (New Delhi): ಮುಂಗಾರು ಬೆಳೆಗಳ ಕನಿಷ್ಟ ಬೆಂಬಲ ಬೆಲೆ ಏರಿಕೆ ಮಾಡಲು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಸಂಪುಟ ಸಭೆ ಬಳಿಕ ಈ ಕುರಿತು ಮಾತನಾಡಿ ಮಾಹಿತಿ ನೀಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್, ಮುಂಗಾರಿನಲ್ಲಿ ಬೆಳೆಯುವ ಬೆಳೆಗಳ ಬೆಂಬಲ ಬೆಲೆ ಏರಿಕೆಗೆ ನಿರ್ಧರಿಸಲಾಗಿದೆ. ಕ್ವಿಂಟಾಲ್ ಬೇಳೆ ಬೆಂಬಲ ಬೆಲೆ 480 ರೂ., ಕ್ವಿಂಟಾಲ್ ಎಳ್ಳು 523 ರೂ., ಸೂರ್ಯಕಾಂತಿ ಬೀಜದ ಬೆಂಬಲ ಬೆಲೆ 385 ರೂ., ಹೆಸರುಕಾಳು ಕ್ವಿಂಟಾಲ್ ಗೆ 300 ರೂ. ಏರಿಕೆ ಮಾಡಲು ತೀರ್ಮಾನಿಸಲಾಗಿದೆ.   

ತೊಗರಿ ಮೇಲಿನ ಬೆಂಬಲೆ ಬೆಲೆ ಕ್ವಿಂಟಾಲ್ ಗೆ 300 ರೂ., ಹೆಸರು ಕಾಳಿಗೆ 300 ರೂ., ರಾಗಿ ಬೆಂಬಲ ಬೆಲೆ 201 ರೂ., ಶೇಂಗಾ 300 ರೂ., ಹತ್ತಿ ಬೆಂಬೆಲ ಬೆಲೆ 354 ರೂ. ಹೆಚ್ಚಳ ಮಾಡಲು ಸಂಫುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದರು.