ಮನೆ ಸುದ್ದಿ ಜಾಲ ಮೇ ೮ ರಂದು ವಿಶ್ವನಾಥ್ ೭೫ರ ಸಂಭ್ರಮ: ಕಾರ್ಯಕ್ರಮ

ಮೇ ೮ ರಂದು ವಿಶ್ವನಾಥ್ ೭೫ರ ಸಂಭ್ರಮ: ಕಾರ್ಯಕ್ರಮ

0

ಮೈಸೂರು(Mysuru): ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ ಮೇ 8 ರಂದು ಅಡಗೂರು ವಿಶ್ವನಾಥ್ ೭೫ ರ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಎಸ್.ಟಿ. ರವಿಕುಮಾರ್ ತಿಳಿಸಿದರು.

ಸಂಘದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಧಾನ ಪರಿಷತ್ ಸದಸ್ಯರಾದ ಎಚ್. ವಿಶ್ವನಾಥ್ ಅವರ ೭೫ ನೇ ಹುಟ್ಟುಹಬ್ಬದ ಅಂಗವಾಗಿ ಅವರ ಕೋರಿಕೆ ಮೇರೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ ೧೦.೩೦ಕ್ಕೆ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಉದ್ಘಾಟಿಸುವರು. ಬಳಿಕ ವಿಶ್ವನಾಥ್ ಅವರು ಮನದಾಳದ ಮಾತುಗಳನ್ನು ಆಡಲಿದ್ದಾರೆ.

ನಂತರ ಮಾಧ್ಯಮ ಮೈತ್ರಿಯಾನ ವಿಷಯ ಕುರಿತಂತೆ ನಾಡಿನ ಹಿರಿಯ ಪತ್ರಕರ್ತರಾದ ಹುಣಸವಾಡಿ ರಾಜನ್, ಎಚ್.ಆರ್. ರಂಗನಾಥ್, ಡಿ. ಉಮಾಪತಿ, ಬಿ.ಎಂ. ಹನೀಫ್ ಹಾಗೂ ರವೀಂದ್ರ ರೇಷ್ಮೆ ಮಾತನಾಡಲಿದ್ದಾರೆ.

ಬಳಿಕ ಮಧ್ಯಾಹ್ನ ೨.೩೦ಕ್ಕೆ ವಿಶ್ವಾಕ್ಷರ ಪಯಣ ಎಂಬ ಕಾರ್ಯಕ್ರಮ ನಡೆಯಲಿದ್ದು, ಮಾಜಿ ಸಿಎಂ ಡಾ.ಎಂ. ವೀರಪ್ಪ ಮೊಯ್ಲಿ ಉದ್ಘಾಟಿಸುವರು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಡ್ಡೀಕೆರೆ ಗೋಪಾಲ್, ಇನ್ನಿತರರು ಹಾಜರಿರುವರೆಂದರು.

ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಂ. ಸುಬ್ರಹ್ಮಣ್ಯ, ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಡ್ಡೀಕೆರೆ ಗೋಪಾಲ್, ಎಂ. ಚಂದ್ರಶೇಖರ್, ಡಾ.ವೈ.ಡಿ. ರಾಜಣ್ಣ ಹಾಜರಿದ್ದರು.

ಹಿಂದಿನ ಲೇಖನಮೈಸೂರು ವಿವಿಯ ಖಾಯಂ ಬೋಧಕ ಹುದ್ದೆಗಳ ನೇಮಕಾತಿಗೆ ಕ್ರಮಕ್ಕೆ ತೀರ್ಮಾನ
ಮುಂದಿನ ಲೇಖನರಾಜ್ಯದಲ್ಲಿ 181 ಮಂದಿಗೆ ಕೊರೊನಾ ಪಾಸಿಟಿವ್‌, 1 ಸಾವು