ಮನೆ ಮನರಂಜನೆ ‘ರಾಮಾಯಣ’ ಚಿತ್ರದಲ್ಲಿ ರಾವಣ ಪಾತ್ರವನ್ನು ಯಶ್ ತಿರಸ್ಕರಿಸಿದ್ದು ಯಾಕೆ ?

‘ರಾಮಾಯಣ’ ಚಿತ್ರದಲ್ಲಿ ರಾವಣ ಪಾತ್ರವನ್ನು ಯಶ್ ತಿರಸ್ಕರಿಸಿದ್ದು ಯಾಕೆ ?

0

ಇತ್ತೀಚೆಗೆ ನಿತೇಶ್ ತಿವಾರಿ ಅವರ ನಿರ್ದೇಶನದ ರಾಮಾಯಣದಲ್ಲಿ ಯಶ್ ರಾವಣ ಪಾತ್ರ ಮಾಡುತ್ತರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಮೊದಲು ಯಶ್ ರಾವಣ ಪಾತ್ರ ಮಾಡಲು ಬಹಳ ಮೆಚ್ಚುಗೆ ಯನ್ನು ನೀಡಿದ್ದರು, ಆದರೆ ಇತ್ತೀಚಿನ ಮಾಹಿತಿಗಳ ಪ್ರಕಾರ ಯಶ್ ರಾವಣ ಪಾತ್ರ ಮಾಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ.

Join Our Whatsapp Group


ರಾವಣನ ಪಾತ್ರ ಮಾಡಲು ಯಶ್ ಆಸಕ್ತಿ ವಹಿಸಿದ್ದರು. ರಾಮನ ಸದ್ಗುಣಶೀಲ ಪಾತ್ರವನ್ನು ನಿರ್ವಹಿಸುವುದಕ್ಕಿಂತ ಸಂಕೀರ್ಣ ಮತ್ತು ಶಕ್ತಿಯುತ ಎದುರಾಳಿ ಪಾತ್ರ ಮಾಡುವುದು ಲಾಭದಾಯಕ ಎಂದು ಅವರು ನಂಬಿದ್ದರು. ಚಿತ್ರದಲ್ಲಿ ರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ಅವರು ನಟಿಸಲಿದ್ದು, ಈ ಸಿನಿಮಾಗೆ ಸೇರುವ ಯಶ್ ಅವರ ಆಸಕ್ತಿಯನ್ನು ಮತ್ತಷ್ಟು ಹೆಚ್ಚಿಸಿತು.
ಆದರೆ, ಯಶ್ ಅವರ ತಂಡ ಈ ಪಾತ್ರವನ್ನು ಒಪ್ಪಿಕೊಳ್ಳದಂತೆ ಬಲವಾಗಿ ಸಲಹೆ ನೀಡಿದೆ. ತಮ್ಮ ಪ್ರೀತಿಯ ನಟ ರಾವಣನಷ್ಟು ಅಸಾಧಾರಣವಾದ ನೆಗೆಟಿವ್ ರೋಲ್ ನಿರ್ವಹಿಸುವುದನ್ನು ಅವರ ಅಭಿಮಾನಿಗಳು ಮೆಚ್ಚುವುದಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಈ ಪಾತ್ರ ತಮ್ಮ ಅಭಿಮಾನಿಗಳ ಮೇಲೆ ಪರಿಣಾಮ ಬೀರಬಹುದು ಎಂಬ ಸಲಹೆ ಬಂದ ಹಿನ್ನೆಲೆಯಲ್ಲಿ ಯಶ್ ರಾವಣ ಪಾತ್ರವನ್ನು ಕೈ ಬಿಟ್ಟಿದ್ದಾರೆ.

ಹಿಂದಿನ ಲೇಖನಜನ್ಮದಿನದ ಸಂಭ್ರಮದಲ್ಲಿ ಡಾರ್ಲಿಂಗ್ ಕೃಷ್ಣ
ಮುಂದಿನ ಲೇಖನಮಹಿಳೆಯರಿಗೆ  ಬಸ್ ಪ್ರಯಾಣ ಉಚಿತ: ಮೊದಲ ದಿನ ಪ್ರಯಾಣಿಸಿದವರೆಷ್ಟು ಮಂದಿ ಗೊತ್ತಾ ?