ಮನೆ ಅಪರಾಧ ಹಾಡಿ ಜನರ ಮೇಲೆ ಸುಳ್ಳು ಪ್ರಕರಣ ದಾಖಲು ಆರೋಪ: ಅನೀಲ್ ಚಿಕ್ಕಮಾದು ಅಹೋರಾತ್ರಿ ಧರಣಿ

ಹಾಡಿ ಜನರ ಮೇಲೆ ಸುಳ್ಳು ಪ್ರಕರಣ ದಾಖಲು ಆರೋಪ: ಅನೀಲ್ ಚಿಕ್ಕಮಾದು ಅಹೋರಾತ್ರಿ ಧರಣಿ

0

ಮೈಸೂರು(Mysuru): ಹಾಡಿ ಜನರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಅರೋಪಿಸಿ ವಲಯ ಅರಣ್ಯಾಧಿಕಾರಿ ವಿರುದ್ಧ ಹೆಚ್.ಡಿ ಕೋಟೆ ಶಾಸಕ ಅನೀಲ್ ಚಿಕ್ಕಮಾದು ಅಹೋರಾತ್ರಿ ಧರಣಿ ನಡೆಸಿದರು.

ಬಂಡೀಪುರ ಅರಣ್ಯ ವ್ಯಾಪ್ತಿಯ ಮೊಳೆಯೂರು ವಲಯ ಕಚೇರಿಯಲ್ಲಿ  ಅರಣ್ಯಾಧಿಕಾರಿ ಪುಟ್ಟರಾಜು  ವಿರುದ್ಧ ಹಾಡಿ ಜನರೊಂದಿಗೆ ಶಾಸಕ ಅನಿಲ್ ಚಿಕ್ಕಮಾದು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದರು.

ಜಿಂಕೆ‌ ಕೊಂದಿದ್ದಾರೆಂದು ಅರೋಪಿಸಿ ಅರಣ್ಯಾಧಿಕಾರಿಗಳು ಎಚ್ ಡಿ ಕೋಟೆ ತಾಲೂಕಿನ ಕೆಬ್ಬೇಪುರ ಹಾಡಿಯ 16 ಮಂದಿ ಮೇಲೆ ದೂರು ದಾಖಲಿಸಿ ಇಬ್ಬರನ್ನು ಬಂಧಿಸಿದ್ದರು. ಆದರೆ   ಹಾಡಿಗೆ ಬಂದ ಜಿಂಕೆಯನ್ನು ನಾಯಿಗಳು ಕೊಂದಿವೆ ಎಂಬುದು ಹಾಡಿ ಜನರ ವಾದ. ಈ ಬಗ್ಗೆ ಸರಿಯಾಗಿ ವಿಚಾರಣೆ ನಡೆಸದೆ ದೂರು ದಾಖಲಿಸಿದ್ದಾರೆಂದು ಶಾಸಕ ಚಿಕ್ಕಮಾದು ಆರೋಪಿಸಿದ್ದಾರೆ.