ಮನೆ ಅಪರಾಧ ಹಲ್ಲೆ ಆರೋಪ: ಜೈಜಗದೀಶ್ ವಿರುದ್ಧ ದೂರು ದಾಖಲು

ಹಲ್ಲೆ ಆರೋಪ: ಜೈಜಗದೀಶ್ ವಿರುದ್ಧ ದೂರು ದಾಖಲು

0

ಮಂಡ್ಯ(Mandya): ನಟ ಜೈಜಗದೀಶ್ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ವ್ಯಕ್ತಿಯೊಬ್ಬರು ನಾಗಮಂಗಲ ತಾಲ್ಲೂಕು ಬೆಳ್ಳೂರು ಠಾಣೆಯಲ್ಲಿ ದೂರು ಖಲಿಸಿದ್ದಾರೆ.

ಜಯರಾಮೇಗೌಡ ಎನ್ನುವವರು ಜೂನ್ 5 ರಂದು ದೂರು ನೀಡಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಟ ಜೈಜಗದೀಶ್ ಪ್ರಯಾಣಿಸುತ್ತಿದ್ದಾಗ ಅವರ ಕಾರಿನ ಮೇಲೆ ಖಾಲಿ ನೀರಿನ ಬಾಟಲಿ ಬಿದ್ದಿದೆ.

ನಂತರ ಬೆಳ್ಳೂರು ಕ್ರಾಸ್‌ನಲ್ಲಿ ಜಯರಾಮೇಗೌಡ ಬಸ್ ನಿಂದ ಕೆಳಗೆ ಇಳಿದಿದ್ದಾರೆ. ಈ ಸಂದರ್ಭದಲ್ಲಿ ಹಿಂದಿನಿಂದ ಬಂದ ಜೈಗದೀಶ್ ಅವಾಚ್ಯ ಶಬ್ದಗಳಿಂದ ನಿಂದಿಸಿದರು, ಹಲ್ಲೆ ನಡೆಸಿದರು ಎಂದು ಜಯರಾಮೇಗೌಡ ದೂರು ನೀಡಿದ್ದಾರೆ.

ಘಟನೆ ಬಗ್ಗೆ ದೂರು ದಾಖಲಾಗಿದ್ದು ಮುಂದಿನ ಕ್ರಮ ಜರುಗುಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.