ಮನೆ ಅಪರಾಧ ಕೆರೂರ: ಕೊಡಲಿಯಿಂದ ಹೊಡೆದು ವ್ಯಕ್ತಿಯ ಕೊಲೆ

ಕೆರೂರ: ಕೊಡಲಿಯಿಂದ ಹೊಡೆದು ವ್ಯಕ್ತಿಯ ಕೊಲೆ

0

ಕೆರೂರ: ಹಳಗೇರಿ ಗ್ರಾಮದ ಟೋಲನಾಕಾ ಹತ್ತಿರ ಉಗಲವಾಟ ಗ್ರಾಮದ ವ್ಯಕ್ತಿಯೊಬ್ಬರನ್ನು ಭಾನುವಾರ ರಾತ್ರಿ ಕಲ್ಲು, ಕೊಡಲಿಯಿಂದ ಹೊಡೆದು ಕೊಲೆ ಮಾಡಲಾಗಿದೆ.

Join Our Whatsapp Group

ಶರಣಪ್ಪ ಜಮ್ಮನಕಟ್ಟಿ (23) ಕೊಲೆಯಾದ ವ್ಯಕ್ತಿ.

ಕೊಲೆ ಮಾಡಿದ ಉಗಲವಾಟ ಗ್ರಾಮದ ಆರೋಪಿಗಳಾದ ಯಾಕುಬ್  ಅಗಸಿಮನಿ, ಸಲ್ಮಾನ ಕರೆಮನ್ಸೂರ, ಸಚಿನ್ ಭಜಂತ್ರಿ ಅನ್ನು ಪೋಲೀಸರು ಬಂಧಿಸಿದ್ದಾರೆ.

ಆರೋಪಿಗಳು ಮೃತ ವ್ಯಕ್ತಿ ಶರಣಪ್ಪ ಅವರ ದಡ್ಡಿಯಲ್ಲಿರುವ ಕುರಿಗಳನ್ನು ಕಳ್ಳತನ ಮಾಡಲು ಬಂದಿದ್ದರು.

ಆರೋಪಿ ಯಾಕುಬ್ ಅಗಸಿಮನಿಯನ್ನು ಶರಣಪ್ಪ ಹಿಡಿದುಕೊಂಡರು. ಆಗ ತಪ್ಪಿಸಿಕೊಳ್ಳಲು ಆರೋಪಿಗಳೆಲ್ಲರೂ ಸೇರಿ, ಕಲ್ಲು, ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂದು ಕೆರೂರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.