ಮನೆ ಅಪರಾಧ ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮ: 7 ಸಿಬ್ಬಂದಿಗೆ ವರ್ಗಾವಣೆ ಶಿಕ್ಷೆ

ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮ: 7 ಸಿಬ್ಬಂದಿಗೆ ವರ್ಗಾವಣೆ ಶಿಕ್ಷೆ

0

ಬೆಂಗಳೂರು(Bengaluru): ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆದಿದ್ದ ಅಕ್ರಮಕ್ಕೆ ಸಾಥ್ ನೀಡಿರುವ ಜೈಲಿನ ಏಳು ಸಿಬ್ಬಂದಿ ವಿರುದ್ಧ ಕಾರಾಗೃಹ ಇಲಾಖೆ, ರಾಜ್ಯದ ವಿವಿಧ ಜೈಲುಗಳಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಪ್ರಕರಣದ ತನಿಖೆಯ ಹೊಣೆ ಹೊತ್ತುಕೊಂಡಿದ್ದ ಐಪಿಎಸ್ ಅಧಿಕಾರಿ ಎಸ್.ಮುರುಗನ್ ಅವರು ಸೋಮವಾರ ನೀಡಿದ್ದ ವರದಿಯನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿ ಶಿಸ್ತು ಕ್ರಮ ಕೈಗೊಂಡಿದೆ.

ವರ್ಗಾವಣೆಗೊಂಡ ಕಾರಾಗೃಹ ಸಿಬ್ಬಂದಿ: ಎನ್.‌ಅಶೋಕ್ (ವಿಜಯಪುರ), ಎಸ್.ಎನ್.ರಮೇಶ್ (ಬಳ್ಳಾರಿ), ಶಿವಾನಂದ ಕೆ. ಗಾಣಿಗಾರ್ (ಬೆಳಗಾವಿ), ಉಮೇಶ್ ಆರ್.ದೊಡ್ಡಮನಿ (ಮೈಸೂರು), ಲೋಕೆಶ್​ ಪಿ. (ಧಾರವಾಡ), ಭೀಮಣ್ಣ, ದೇವಪ್ಪ ನೆದಲಗಿ (ಶಿವಮೊಗ್ಗ) ಹಾಗೂ ಮಹೇಶ್ ಸಿದ್ದನಗೌಡ ಪಾಟೀಲ್ ಕಲಬುರಗಿ ಜೈಲಿಗೆ ವರ್ಗಾವಣೆ ಆಗಿದ್ದಾರೆ.