ಮನೆ ಸುದ್ದಿ ಜಾಲ ಕಾಂಗ್ರೆಸ್ ಪಾರ್ಟಿ ಪಂಚರಾಜ್ಯ ಚುನಾವಣೆಯಲ್ಲಿ ಕೂಡ ಕಾಣಿಸುತ್ತಿಲ್ಲ: ಪ್ರಲ್ಹಾದ್​ ​ಜೋಶಿ

ಕಾಂಗ್ರೆಸ್ ಪಾರ್ಟಿ ಪಂಚರಾಜ್ಯ ಚುನಾವಣೆಯಲ್ಲಿ ಕೂಡ ಕಾಣಿಸುತ್ತಿಲ್ಲ: ಪ್ರಲ್ಹಾದ್​ ​ಜೋಶಿ

0

ದಾವಣಗೆರೆ: ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಪಾರ್ಟಿ ಎಲ್ಲಿ ಕೂಡ ಕಾಣಿಸುತ್ತಿಲ್ಲ, ರಾಹುಲ್ ಗಾಂಧಿ ಅವರ ಪಕ್ಷದ ಸ್ಥಿತಿ ಜನರಿಗೆ ಗೊತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್​ ​ಜೋಶಿ ವಾಗ್ದಾಳಿ ನಡೆಸಿದರು ಎನ್ನಲಾಗಿದೆ. ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದ ಐದು ರಾಜ್ಯಗಳಲ್ಲಿ ಚುನಾವಣೆಯಾಗಿದೆ. ಮೇ ನಾಲ್ಕರಂದು ಫಲಿತಾಂಶ ಪ್ರಕಟವಾಗಲಿದೆ. ನರೇಂದ್ರ ‌ಮೋದಿಯವರ ನೇತೃತ್ವದಲ್ಲಿ ಬಹುದೊಡ್ಡ ಸಾಧನೆಯನ್ನು ಈ ಚುನಾವಣೆಯಲ್ಲಿ ಮಾಡುತ್ತೇವೆ. ದೇಶದ ಎಲ್ಲಾ ಕಡೆ ಶಾಂತಿಯುತವಾಗಿ ಚುನಾವಣೆ ನಡೆದಿದೆ ಎಂದಿದ್ದಾರೆ ಎನ್ನಲಾಗಿದೆ.

ಪಶ್ಚಿಮ ಬಂಗಾಳದಲ್ಲಿ ಸೋಲಿನ ಭಯದಲ್ಲಿ ಮಮತಾ ಬ್ಯಾನರ್ಜಿ ಇದ್ದಾರೆ. ಈ ಸೋಲಿನ ಭಯದಿಂದ ಸ್ಟ್ರಾಂಗ್ ರೂಂಗೆ ನುಗ್ಗೋದು, ಅಧಿಕಾರಿಗಳಿಗೆ ಬಾಯಿಗೆ ಬಂದಂತೆ ಬೈಯುವ ಕೆಲಸ ಮಾಡುತ್ತಿದ್ದಾರೆ. ಅವರ ಈ ರೀತಿಯ ವರ್ತನೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಎನ್ನುವುದು ತಿಳಿಯುತ್ತೆ. ಸ್ಥಳೀಯ ಚುನಾವಣೆಯಲ್ಲಿ ಜನರಿಗೆ ಯಾವ ರೀತಿ ಹಿಂಸೆ ಮಾಡಿದ್ದಾರೆ ಎನ್ನುವುದು ನಮಗೆ ಅರಿವಿದೆ ಎನ್ನಲಾಗಿದ್ದು.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಅದೇ ರೀತಿ ಅಸ್ಸೋಂ ಸೇರಿದಂತೆ ಹಲವು ರಾಜ್ಯಗಳಲ್ಲಿ ಗೆಲುವು ಸಾಧಿಸಲಿದ್ದೇವೆ. ಕೇರಳದಲ್ಲಿ ನಿರೀಕ್ಷೆಗೆ ಮೀರಿ ಸೀಟ್​​ಗಳು ಬರಲಿವೆ. ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಪಾರ್ಟಿ ಎಲ್ಲಿ ಕೂಡ ಕಾಣಿಸುತ್ತಿಲ್ಲ ಎಂದು ಹೇಳಿದರು. ರಾಜ್ಯದಲ್ಲಿ ಉಪಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಗೆಲ್ಲಲಿದ್ದೇವೆ. ಹಣದ ಹೊಳೆ ಹರಿಸಿ, ಸರ್ಕಾರದ ಯಂತ್ರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಅದರೂ ಕೂಡ ನಾವು ಎರಡೂ ಕಡೆ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು ಎನ್ನಬಹುದು.

ಕಮರ್ಷಿಯಲ್ ಎಲ್​ಪಿಜಿ ಗ್ಯಾಸ್ ಬೆಲೆ ಏರಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಕಮರ್ಷಿಯಲ್ ಸಿಲಿಂಡರ್ ಬೆಲೆ ಏರಿಕೆಯಾಗಿದೆ. ಆದರೆ ಅದನ್ನು ಅಯಾ ಕಂಪನಿಗಳು ಮಾಡಿದ್ದಾರೆ. 2004-2005 ರಲ್ಲಿ ಕಾಂಗ್ರೆಸ್ ಇದ್ದಾಗ ಕಂಪನಿಗಳಿಗೆ ಬೆಲೆ ಏರಿಕೆ ಮಾಡುವ ಅವಕಾಶ ಮಾಡಿಕೊಟ್ಟಿದ್ದಾರೆ. ಜಾಗತಿಕ ಸ್ಥಿತಿಗತಿಗಳ ಬೆಳವಣಿಗೆ ಕೂಡ ಕಾರಣವಾಗುತ್ತದೆ. ಪಾಕಿಸ್ತಾನ ಸೇರಿದಂತೆ ಕೆಲ ದೇಶಗಳಲ್ಲಿ ಎಲ್​ಪಿಜಿ, ಪೆಟ್ರೊಲಿಯಂ ಸಿಗುತ್ತಿಲ್ಲ ಎಂದಿದ್ದಾರೆ.

ಆದರೆ ಭಾರತದಲ್ಲಿ ನಿರಂತರವಾಗಿ ಸಿಗುತ್ತಿದೆ. ಹಾರ್ಮುಜ್​ ಜಲಸಂಧಿಯಿಂದಲೇ ಬರಬೇಕಾದ ಹಿನ್ನೆಲೆ ಸ್ವಲ್ಪ ತೊಂದರೆಯಾಗಿದೆ. ಆಮದು ಮಾಡಿಕೊಳ್ಳುವುದೇ ಜಾಸ್ತಿ ಇರೋದ್ರಿಂದ ಬೆಲೆ ಏರಿಕೆಯಾಗಿದೆ. ಸಮಸ್ಯೆ ಬಗೆಹರಿದ ನಂತರ ದರ ಕಡಿಮೆ ಮಾಡುವ ಕೆಲಸ ಮಾಡಲಾಗುತ್ತದೆ ಎಂದು ಅವರು ಹೇಳಿದರು. ಕಾಂಗ್ರೆಸ್​​ನಲ್ಲಿ ಸಿಎಂ ಕುರ್ಚಿ ಕಿತ್ತಾಟ ವಿಚಾರವಾಗಿ ಮಾತನಾಡಿ, ಸಿಎಂ ವಿಚಾರದಲ್ಲಿ ಮಲ್ಲಿಕಾರ್ಜುನ್ ಖರ್ಗೆಯವರನ್ನು ಎಳೆದುತಂದಿದ್ದಾರೆ. ಈ ಕುರ್ಚಿ ಕದನದಲ್ಲಿ ಖರ್ಗೆ ಹೆಸರು ತಂದು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎನ್ನಲಾಗಿದೆ .

ಡಿಕೆಶಿಯವರನ್ನು ಸಿಎಂ ಮಾಡುವುದಾಗಿ ಹೈಕಮಾಂಡ್ ನಿರ್ಧಾರ ಮಾಡಿರುವುದಾಗಿ ಚರ್ಚೆ ಶುರುವಾಗಿದೆ. ಆದ್ದರಿಂದ ಖರ್ಗೆ ಹೆಸರು, ಪರಮೇಶ್ವರ್ ಹೆಸರು ತರುತ್ತಿದ್ದಾರೆ ಎಂದರು. ಕುರ್ಚಿ ಕಿತ್ತಾಟದಲ್ಲೇ ಕಾಂಗ್ರೆಸ್ ಸರ್ಕಾರ ಇದೆ. ಇದರ ಒಟ್ಟು ಪರಿಣಾಮ ಭ್ರಷ್ಟಾಚಾರ, ಕಾನೂನು ಸುವ್ಯವಸ್ಥಿತ ಹಾಳಾಗಿದೆ. ಅವರ ಪಕ್ಷದ ವಿಚಾರ ಅದರ ಬಗ್ಗೆ ನಾವು ಮಾತಾಡೋದಿಲ್ಲ. ಹುಬ್ಬಳ್ಳಿಯಲ್ಲಿ ಡ್ರಗ್ಸ್ ಕೇಸ್​​ನಲ್ಲಿ ಯಾರದ್ದು ನೆಗೆಟಿವ್​ಬಂದಿದೆ. ಅವರ ಹತ್ತಿರ ಹಣ ಪಡೆದಿದ್ದಾರೆ. ಪಾಸಿಟಿವ್ ಬಂದಿರುವವರ ಬಳಿ ಕೂಡ ಹಣ ವಸೂಲಿ ಮಾಡಿದ್ದಾರೆ. ಪಾಸಿಟಿವ್ ಬಂದವರನ್ನು ಸರಿದಾರಿಗೆ ತರಲು ಒಂದು ಕೇಸ್ ಹಾಕಿ ನೆಗೆಟಿವ್ ಬಂದವರನ್ನು ಬಿಡಬೇಕಿತ್ತು. ಅದನ್ನು ಮಾಡದೇ ತೊಂದರೆ ಕೊಟ್ಟಿದ್ದಾರೆ. ಶಾಸಕ ಬೆಲ್ಲದ್ ಅವರ ಆರೋಪ ಕೂಡ ಗಂಭೀರವಾದ ವಿಚಾರ ಎಂದು ಜೋಶಿ ಅವರು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.