ಮನೆ ರಾಜ್ಯ ನಾಲೆಗೆ ಮಗುಚಿದ ಎತ್ತಿನಗಾಡಿ: ರೈತ ಸಾವು

ನಾಲೆಗೆ ಮಗುಚಿದ ಎತ್ತಿನಗಾಡಿ: ರೈತ ಸಾವು

0

ಮೈಸೂರು(Mysuru) :  ನಾಲೆಗೆ ಎತ್ತಿನಗಾಡಿ ಮಗುಚಿ ಬಿದ್ದ ಪರಿಣಾಮ ಎತ್ತಿನಗಾಡಿ ಚಲಾಯಿಸುತ್ತಿದ್ದ ರೈತ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಕೆ.ಆರ್ ನಗರ ತಾಲೂಕಿನ ಶ್ರೀರಾಂಪುರ ಗ್ರಾಮದ ಬಳಿ ನಡೆದಿದೆ.

ಕೆಸ್ತೂರು ಕೊಪ್ಪಲು ಗ್ರಾಮದ ಚಂದ್ರೇಗೌಡ(53) ಮೃತ ದುರ್ದೈವಿ.

ಮೃತ ರೈತ ಚಂದ್ರೇಗೌಡ ಶ್ರೀರಾಮಪುರ ಗ್ರಾಮದ ಮುರ್ ಕಟ್ಟೆ ಬಳಿ ತಮ್ಮ ಜಮೀನಿನಲ್ಲಿ ಕೆಲಸ ಮುಗಿಸಿ  ಬರುತ್ತಿದ್ದಾಗ ರಾಮಸಮುದ್ರ ಬಲದಂಡೆಗೆ ಎತ್ತಿನ ಗಾಡಿ ಮಗುಚಿ ಬಿದ್ದಿದೆ. ಇದನ್ನು ಗಮನಿಸಿದ ಅಕ್ಕ-ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಜನರು, ಸ್ಥಳಕ್ಕೆ ದಾವಿಸಿ ರೈತ ಚಂದ್ರೇಗೌಡರ ಪ್ರಾಣ ಉಳಿಸಲು ಪ್ರಯತ್ನಿಸಿದರು. ಆದರೂ ಸಹ ರೈತ ಚಂದ್ರೇಗೌಡರು ಬದುಕುಳಿಯಲಿಲ್ಲ. ಮೃತ ರೈತನಿಗೆ ಹೆಂಡತಿ, ಓರ್ವ ಪುತ್ರ, ಓರ್ವ ಪುತ್ರಿ ಇದ್ದಾರೆ.

ಘಟನ ಸ್ಥಳಕ್ಕೆ ಚುಂಚನಕಟ್ಟೆ ಉಪ ಪೊಲೀಸ್ ಠಾಣೆಯ ಎ.ಎಸ್ .ಐ ವಸಂತ್, ಸಿಬ್ಬಂದಿಗಳಾದ ದಯಾನಂದ್, ರಾಮೇನಹಳ್ಳಿ ಮಂಜು ಭೇಟಿ ನೀಡಿ ಪರೀಶೀಲನೆ ನಡೆಸಿದರು.

ಈ ಸಂಬಂಧ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.