ಮನೆ ರಾಜ್ಯ ಭಾರಿ ಮಳೆ: ಶೃಂಗೇರಿ-ಆಗುಂಬೆ ಮಾರ್ಗದಲ್ಲಿ ರಸ್ತೆ ಕುಸಿತ

ಭಾರಿ ಮಳೆ: ಶೃಂಗೇರಿ-ಆಗುಂಬೆ ಮಾರ್ಗದಲ್ಲಿ ರಸ್ತೆ ಕುಸಿತ

0

ಚಿಕ್ಕಮಗಳೂರು (Chikmagalur): ರಾಜ್ಯದ ಹಲವೆಡೆ ಭಾರಿ ಮಳೆಯಾಗುತ್ತಿದ್ದು, ಅನೇಕ ಕಡೆ ರಸ್ತೆಗಳು ಕುಸಿದಿವೆ. ಇದರಿಂದ ಜನರು ಪರದಾಡುವಂತಾಗಿದೆ. ಇದೀಗ ಶೃಂಗೇರಿ-ಆಗುಂಬೆ ಮಾರ್ಗದಲ್ಲಿ ರಸ್ತೆ ಕುಸಿದಿದೆ.

ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ರಸ್ತೆ ಬದಿಯ ಮಣ್ಣು ಕುಸಿದಿದ್ದು, ರಸ್ತೆ ಕೊಚ್ಚಿ ಹೋಗಿದೆ. ಸುಮಾರು 200 ಅಡಿಗಳಷ್ಟು ರಸ್ತೆ ಕೊಚ್ಚಿ ಹೋಗಿದೆ. ರಸ್ತೆ ಕುಸಿದಿರುವುದರಿಂದ ಸಂಚಾರ ಬಂದ್‌ ಆಗಿದೆ.

ಈ ಮಾರ್ಗದ ಬದಲಿಯಾಗಿ ಶೃಂಗೇರಿ- ಕಾವಡಿ- ಹೊಳೆಕೊಪ್ಪ ಅಥವಾ ಶೃಂಗೇರಿ- ಕೆಲ್ಲಾರ್- ಬೇಗಾರ್ ರಸ್ತೆಯಲ್ಲಿ ಸಂಚರಿಸಲು ಸೂಚಿಸಲಾಗಿದೆ.