ಮನೆ ಅಪರಾಧ ಮೈಸೂರು: ಕುಡಿದ ಬಿಲ್ ಕೇಳಿದ್ದಕ್ಕೆ ಸಪ್ಲೈಯರ್ ಹತ್ಯೆ

ಮೈಸೂರು: ಕುಡಿದ ಬಿಲ್ ಕೇಳಿದ್ದಕ್ಕೆ ಸಪ್ಲೈಯರ್ ಹತ್ಯೆ

0

ಮೈಸೂರು(Mysuru): ಕಂಠಪೂರ್ತಿ ಕುಡಿದ ಟ್ಯಾಕ್ಸಿ ಡ್ರೈವರ್ ಬಿಲ್ ಹಣ ಕೇಳಿದ ಸಪ್ಲೈಯರ್ ನನ್ನು ಚಾಕುವಿನಿಂದ ಎದೆಗೆ ಚುಚ್ಚಿ ಹತ್ಯೆ ಮಾಡಿರುವ ಘಟನೆ ಮಾನಂದವಾಡಿ ರಸ್ತೆಯ ನವರಂಗ್ ಬಾರ್ ನಲ್ಲಿ ಬುಧವಾರ ರಾತ್ರಿ ನಡೆದಿದೆ.

ಮಂಡ್ಯ ಜಿಲ್ಲೆಯ ಉಮ್ಮಡಹಳ್ಳಿಯ ನಂದನ್ ಕುಮಾರ್  (25) ಹತ್ಯೆಗೀಡಾದ ಬಾರ್ ಸಪ್ಲೆಯರ್.  ಮಹದೇವಪುರ ನಿವಾಸಿ ಟ್ಯಾಕ್ಸಿ ಡ್ರೈವರ್ ಸುಧಾಕರ್ ಹತ್ಯೆ ಮಾಡಿರುವ ಆರೋಪಿ.

ಏನಿದು ಘಟನೆ ?

ಬುಧವಾರ ರಾತ್ರಿ ಬಾರ್ ಗೆ ಬಂದ ಟ್ಯಾಕ್ಸಿ ಡ್ರೈವರ್ ಸುಧಾಕರ್ ಸಾಕಷ್ಟು ಕುಡಿದಿದ್ದಾನೆ. ಕೊನೆಗೆ ತನಗೆ ಸಪ್ಲೆ ಮಾಡಿದ ನಂದನ್ ಕುಮಾರ್ ಬಿಲ್ ತಂದಿಟ್ಟಾಗ, ಹಣ ಕೊಡುವುದಿಲ್ಲವೆಂದು ಸುಧಾಕರ್ ತಗಾದೆ ಮಾಡಿದ್ದಾನೆ ಎಂದು ಹೇಳಲಾಗಿದೆ. ಈ ವೇಳೆ ಬಾರ್ ನಲ್ಲಿದ್ದ ಇತರರು ಸಮಾಧಾನಪಡಿಸಿ ಸುಧಾಕರ್ ನನ್ನು ಹೊರ ಕಳುಹಿಸಿದ್ದಾರೆ. ಇದಾದ ಸುಮಾರು 50 ನಿಮಿಷದಲ್ಲಿ ಮತ್ತೆ ಬಾರ್ ಗೆ ಆಗಮಿಸಿದ ಸುಧಾಕರ್ ಹಠಾತ್ತನೆ ಸಪ್ಲೆಯರ್ ನಂದನ್ ಕುಮಾರ್ ಎದೆಗೆ ಚಾಕುವಿನಿಂದ ಚುಚ್ಚಿದ್ದಾನೆ. ಅದನ್ನು ತಡೆಯಲು ನಂದನ್ ಕುಮಾರ್ ಕೈ ಮೇಲೆತ್ತಿದಾಗ ಕೈಗೂ ಕೂಡ ಇರಿದು ಪರಾರಿಯಾಗಿದ್ದಾನೆ. ತಕ್ಷಣವೇ ಬಾರ್ ನಲ್ಲಿದ್ದವರು ನಂದನ್ ಕುಮಾರನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮದ್ಯೆ ಆತ ಅಸುನೀಗಿದ್ದಾನೆ.

ಈ ಸಂಬಂಧ ವಿದ್ಯಾರಣಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ಸ್ ಸ್ಪೆಕ್ಟರ್ ರಾಜು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪರಾರಿಯಾಗಿರುವ ಸುಧಾಕರ್ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ.