ಮನೆ ಅಪರಾಧ ಮೈಸೂರು: ನಕಲಿ ರಸಗೊಬ್ಬರ ತಯಾರಿಕೆ ಘಟಕದ ಮೇಲೆ ದಾಳಿ- ಪ್ರಕರಣ ದಾಖಲು

ಮೈಸೂರು: ನಕಲಿ ರಸಗೊಬ್ಬರ ತಯಾರಿಕೆ ಘಟಕದ ಮೇಲೆ ದಾಳಿ- ಪ್ರಕರಣ ದಾಖಲು

0

ಮೈಸೂರು(Mysuru): ನಕಲಿ ರಸಗೊಬ್ಬರ ತಯಾರಿಕಾ ಘಟಕದ ಮೇಲೆ ಕೃಷಿ ಅಧಿಕಾರಿಗಳು ದಾಳಿ ನಡೆಸಿದ್ದು, ಘಟಕ ನಡೆಸುತ್ತಿದ್ದ ಆರೋಪಿ ಮಹೇಶ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜಿಲ್ಲೆಯ ಮಂಡಕಳ್ಳಿ ಗ್ರಾಮದ ಹೊರವಲಯದಲ್ಲಿರುವ ಖಾಲಿ ಕೋಳಿ ಫಾರಂನಲ್ಲಿ ನಕಲಿ ರಸಗೊಬ್ಬರ ತಯಾರಿಕೆ ಘಟಕ ನಡೆಸಲಾಗುತ್ತಿದೆ ಎಂಬ ಅಧಿಕೃತ ಮಾಹಿತಿ ಮೇರೆಗೆ ಮೈಸೂರು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕಿ ಎಚ್.ಬಿ. ಮಧುಲತಾ‌ ಅವರ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ.

ದಾಳಿ ನಡೆಸಿದಾಗ ಅಸಲಿ ರಸಗೊಬ್ಬರ ಜೊತೆಗೆ ಜೇಡಿ ಮಣ್ಣಿನ ಕಾಳಿನ ಮಾದರಿಯ ಮಣ್ಣನ್ನು ಬೆರೆಸಿ ನಕಲಿ ರಸಗೊಬ್ಬರ ತಯಾರಿಕೆ ಮಾಡುತ್ತಿರುವುದು ಕಂಡು ಬಂದಿದೆ.

ಗೊಬ್ಬರ ತಯಾರಿಕೆಯ ಪರಿಕರಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಮೈಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.