ಮನೆ ರಾಜ್ಯ ರಾಜ್ಯದ ಇಂದಿನ ಹವಾಮಾನ ವರದಿ

ರಾಜ್ಯದ ಇಂದಿನ ಹವಾಮಾನ ವರದಿ

0

ರಾಜ್ಯದಲ್ಲಿ ಕೊಂಚ ಮಳೆ ತಗ್ಗಿದೆ. ಕರಾವಳಿ ಜಿಲ್ಲೆ ಉಡುಪಿಯಲ್ಲಿ ಮಳೆಯಾಗುತ್ತಿದ್ದು, ಹಲವೆಡೆ ಯೆಲ್ಲೋ ಮತ್ತು ಆರೆಂಜ್ ಅಲರ್ಟ್ ಅನ್ನು ಹವಾಮಾನ ಇಲಾಖೆ ಘೋಷಣೆ ಮಾಡಿದೆ. ನದಿಗಳು ಉಕ್ಕಿ ಹರಿಯುತ್ತಿದ್ದು. ಪ್ರವಾಹ, ನೆರೆ ಭೀತಿ ಹೆಚ್ಚಾಗುತ್ತಿದೆ. 

ಬೀದರ್, ಕಲಬುರಗಿ, ಮತ್ತು ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು, ಜಿಲ್ಲೆಯ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಬಾಗಲಕೋಟೆ, ಬೆಳಗಾವಿ, ವಿಜಯಪುರ, ಯಾದಗಿರಿ ಹಾಗೂ ದಕ್ಷಿಣ ಒಳನಾಡಿನ ಹಾಸನ, ಶಿವಮೊಗ್ಗ, ಜಿಲ್ಲೆಗಳ ಒಂದೆರಡು ಕಡೆಗಳಲ್ಲೂ ಮಳೆ ಸುರಿಯಲಿದೆ. ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದು, ಕೆಲ ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಬೆಂಗಳೂರು: 28-19, ಮಂಗಳೂರು: 28-24, ಶಿವಮೊಗ್ಗ: 27-21, ಬೆಳಗಾವಿ: 24-20, ಮೈಸೂರು: 28-19, ಮಂಡ್ಯ: 29-20, ಕೊಡಗು: 22-17, ರಾಮನಗರ: 29-20, ಹಾಸನ: 24-18,
ಚಾಮರಾಜನಗರ: 28-20, ಚಿಕ್ಕಬಳ್ಳಾಪುರ: 28-19, ಕೋಲಾರ: 39-20, ತುಮಕೂರು: 28-19, ಉಡುಪಿ: 28-24, ಚಿಕ್ಕಮಗಳೂರು: 23-18, ದಾವಣಗೆರೆ: 28-21, ಚಿತ್ರದುರ್ಗ: 27-21, ಹಾವೇರಿ: 27-21, ಬಳ್ಳಾರಿ: 32-23, ಗದಗ: 28-21, ಕೊಪ್ಪಳ: 29-22, ರಾಯಚೂರು: 32-23, ಯಾದಗಿರಿ: 29-22, ವಿಜಯಪುರ: 29-22, ಬೀದರ್: 28-21, ಕಲಬುರಗಿ: 31-22, ಬಾಗಲಕೋಟೆ: 26-22 ಡಿಗ್ರಿ ಸೆಲ್ಸಿಯಸ್‌ ಇರಲಿದೆ