ಮನೆ ಆರೋಗ್ಯ ನರಹುಲಿ ಸಮಸ್ಯೆಗೆ ನಿಂಬೆರಸ ಬಳಸಿ ನೋಡಿ

ನರಹುಲಿ ಸಮಸ್ಯೆಗೆ ನಿಂಬೆರಸ ಬಳಸಿ ನೋಡಿ

0

ಚರ್ಮದ ಮೇಲೆ ಅಲ್ಲಲ್ಲಿ ಕೆಲವರಿಗೆ ಉಂಟಾಗುವ ನರಹುಲಿಗಳಿಗೆ ನಿಂಬೆರಸ ಬೆಸ್ಟ್‌ ಮದ್ದು. ನಿಂಬೆಹಣ್ಣಿನ ಜೊತೆ ಬೇರೆ ಬೇರೆ ಪದಾರ್ಥಗಳನ್ನು ಮಿಶ್ರಣ ಮಾಡಿ ಹಚ್ಚುವುದರಿಂದ ಚರ್ಮದ ಮೇಲೆ ಮೂಡಿಬಂದಿರುವ ನರಹುಲಿಗಳು ಮಾಯವಾಗುತ್ತವೆ. ಅದರ ಮಾಹಿತಿ ಇಲ್ಲಿದೆ.

ನಿಂಬೆ ಹಣ್ಣಿನ ರಸ ಮತ್ತು ಬೆಳ್ಳುಳ್ಳಿ

ಬೆಳ್ಳುಳ್ಳಿ ಆಂಟಿ ವೈರಲ್, ಆಂಟಿ ಫಂಗಲ್, ಆಂಟಿ ಬ್ಯಾಕ್ಟೀರಿಯಲ್ ಗುಣಲಕ್ಷಣಗಳನ್ನು ಹೊಂದಿದ್ದು, ಇದು ನಿಮ್ಮ ನರಹುಲಿಗಳನ್ನು ಮಾಯವಾಗಿಸುವಲ್ಲಿ ಕೆಲಸ ಮಾಡುತ್ತದೆ. ಸುಮಾರು ಐದರಿಂದ ಎಂಟು ಬೆಳ್ಳುಳ್ಳಿ ಎಸಳುಗಳನ್ನು ತೆಗೆದುಕೊಂಡು ಸಿಪ್ಪೆ ತೆಗೆದು ಚೆನ್ನಾಗಿ ಜಜ್ಜಿ ಪೇಸ್ಟ್ ಮಾಡಿ ಅದನ್ನು ಗಾಯ ಉಂಟಾಗಿರುವ ಭಾಗದಲ್ಲಿ ನಿಂಬೆ ಹಣ್ಣಿನ ರಸದೊಂದಿಗೆ ಹಚ್ಚಬೇಕು. ಆನಂತರ ಬ್ಯಾಂಡೇಜ್ ಹಾಕಿ 20ರಿಂದ 30 ನಿಮಿಷಗಳು ಹಾಗೆ ಬಿಟ್ಟು ನಂತರ ಸಾಧಾರಣ ನೀರಿನಲ್ಲಿ ತೊಳೆದುಕೊಳ್ಳಬೇಕು. ದಿನದಲ್ಲಿ ಎರಡು ಬಾರಿ ಈ ರೀತಿ ಮಾಡುವುದರಿಂದ ಉತ್ತಮ ಪರಿಹಾರ ಸಿಗುತ್ತದೆ.

ನಿಂಬೆಹಣ್ಣು ಮತ್ತು ಬೇಕಿಂಗ್ ಸೋಡಾ

ಆಂಟಿ ಸೆಪ್ಟಿಕ್ ಮತ್ತು ಆಂಟಿ ಇನ್ಫಾಮೇಟರಿ ಗುಣ ಲಕ್ಷಣಗಳನ್ನು ಒಳಗೊಂಡಿರುವ ಬೇಕಿಂಗ್ ಸೋಡಾ ನಿಮ್ಮ ದೇಹದ ಚರ್ಮದ ಮೇಲಿನ ಸೋಂಕುಗಳನ್ನು ದೂರ ಆಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದಕ್ಕಾಗಿ ನೀವು 2 ಟೇಬಲ್ ಸ್ಪೂನ್ ಬೇಕಿಂಗ್ ಸೋಡಾ ತೆಗೆದುಕೊಂಡು ಅದಕ್ಕೆ ನಿಂಬೆ ಹಣ್ಣಿನ ಜ್ಯೂಸ್ ಹಾಕಿ ಪೇಸ್ಟ್ ತರಹ ಮಾಡಿಕೊಂಡು ಅದನ್ನು ನಿಮ್ಮ ಚರ್ಮದ ಮೇಲೆ ಅನ್ವಯಿಸಿ. ಉಗುರು ಬೆಚ್ಚಗಿನ ನೀರಿನಲ್ಲಿ ಆನಂತರ ತೊಳೆದುಕೊಳ್ಳಬಹುದು. ದಿನದಲ್ಲಿ ಎರಡು ಬಾರಿ ಕೆಲವು ವಾರಗ ಳವರೆಗೆ ಈ ರೀತಿ ಮಾಡುವುದರಿಂದ ಪರಿಹಾರ ಸಿಗುತ್ತದೆ.

ನಿಂಬೆಹಣ್ಣು ಮತ್ತು ವಿನೆಗರ್

ನರಹುಲಿಗಳು ರೂಪುಗೊಳ್ಳಲು ಕಾರಣವಾಗುವ ಜೀವಕೋಶಗಳನ್ನು ವಿನೆಗರ್ ಸಂಪೂರ್ಣವಾಗಿ ನಾಶ ಮಾಡುತ್ತದೆ. ಏಕೆಂದರೆ ಇದು ಆಮ್ಲಿಯತೆ ಪಡೆದುಕೊಂಡಂತಹ ಒಂದು ದ್ರವ ಆಗಿದೆ. ನೀವು ನಿಂಬೆಹಣ್ಣು ರಸ ಮತ್ತು ವಿನೆಗರ್ ಅನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ ಅದರಲ್ಲಿ ಒಂದು ಹತ್ತಿಯ ಉಂಡೆಯನ್ನು ಅದ್ದಿಕೊಂಡು ಅದನ್ನು ನರಹುಲಿ ಉಂಟಾಗಿರುವ ಜಾಗದಲ್ಲಿ ಇಟ್ಟು ಮೇಲೆ ಬ್ಯಾಂಡೇಜ್ ಮಾಡಿ. ನೀವು ಬ್ಯಾಂಡೇಜ್ ತೆಗೆದಾಗ ಸಾಧಾರಣ ಉಗುರು ಬೆಚ್ಚಗಿನ ನೀರಿನಲ್ಲಿ ಗಾಯವನ್ನು ತೊಳೆದು ಸ್ವಲ್ಪ ಹೊತ್ತು ಗಾಳಿಯಲ್ಲಿ ಒಣಗಿಸಬೇಕು. ಸಾಧಾರಣ ವಿನೆಗರ್ ಬದಲು ನೀವು ಆಪಲ್ ಸೈಡರ್ ವಿನೆಗರ್ ಬಳಸಿ.

ಈರುಳ್ಳಿ ಬಳಸಿ

ನಮ್ಮ ದೈನಂದಿನ ಅಡುಗೆಗಳಿಗೆ ಬಳಸುವ ಈರುಳ್ಳಿಯಲ್ಲಿ ಹೆಚ್ಚಿನ ಪ್ರಮಾಣದ ಔಷಧೀಯ ಗುಣ ಲಕ್ಷಣಗಳು ಇರುವುದರ ಜೊತೆಗೆ ಆಂಟಿ ವೈರಲ್ ಸ್ವಭಾವಗಳು ಯಥೇಚ್ಛವಾಗಿ ಕಂಡು ಬರುತ್ತದೆ.

ಹೀಗೆ ಮಾಡಿ

ಒಂದು ಮಧ್ಯಮ ಗಾತ್ರದ ಈರುಳ್ಳಿ ಒಂದು ತುಂಡನ್ನು ಹುರಿದುಕೊಂಡು ಅದನ್ನು ಬಾಧಿತ ಜಾಗಕ್ಕೆ ಇಟ್ಟು ಕೊಂಡು ಬ್ಯಾಂಡೇಜ್ ಮಾಡಿ. ಒಂದು ದಿನಪೂರ್ತಿ ಹಾಗೆಯೇ ಇಟ್ಟುಬಿಡಿ. ವಾರದಲ್ಲಿ ಎರಡು ಮೂರು ದಿನ ಹೀಗೆ ಮಾಡುತ್ತಾ ಬಂದರೆ, ಈ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.

ಮುಲೇಟಿ

ತನ್ನಲ್ಲಿ ಅಧಿಕ ಪ್ರಮಾಣದಲ್ಲಿ ಔಷಧೀಯ ಗುಣಗಳನ್ನು ಹೊಂದಿರುವ ಈ ಗಿಡಮೂಲಿಕೆಯಲ್ಲಿ ನೋವು ನಿವಾರಕ ಗುಣಗಳು ಹೇರಳವಾಗಿ ಕಂಡು ಬರುತ್ತದೆ. ಹೀಗಾಗಿ ಈ ಗಿಡಮೂಲಿಕೆಯ ಸಂಪೂರ್ಣ ಪ್ರಯೋಜನಗಳನ್ನು ಪಡೆದುಕೊಳ್ಳಬೇಕು ಎಂದರೆ, ಇದರಿಂದ ಮೊದಲು ಪೇಸ್ಟ್ ರೀತಿ ತಯಾರು ಮಾಡಿ ಕೊಂಡು, ಈ ಪೇಸ್ಟ್‌ಗೆ ಅರ್ಧ ಚಮಚದಷ್ಟು ಸಾಸಿವೆ ಎಣ್ಣೆ ಹಾಕಿಕೊಂಡು, ಗುಳ್ಳೆಗಳು ಉಂಟಾಗಿರುವ ಭಾಗಕ್ಕೆ ಸರಿಯಾಗಿ ಉಜ್ಜಿಕೊಳ್ಳಬೇಕು. ರಾತ್ರಿ ಮಲಗುವ ಮೊದಲು, ಹೀಗೆ ಮಾಡಿದರೆ ಬಹಳ ಒಳ್ಳೆಯದು.