ಮನೆ ಅಪರಾಧ ನಾನು ಕಾಂಗ್ರೆಸ್ ಕಾರ್ಯಕರ್ತ: ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಹೊಡೆದ ಆರೋಪಿ

ನಾನು ಕಾಂಗ್ರೆಸ್ ಕಾರ್ಯಕರ್ತ: ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಹೊಡೆದ ಆರೋಪಿ

0

ಮಡಿಕೇರಿ(Madikeri): ನಾನೂ ಕಾಂಗ್ರೆಸ್ ಕಾರ್ಯಕರ್ತ. ಸಿದ್ದರಾಮಯ್ಯ ಅವರ ಹಿಂದೂ ವಿರೋಧಿ ಹೇಳಿಕೆಗೆ ಬೇಸತ್ತು ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಮೊಟ್ಟೆ ಹೊಡೆದೆ ಎಂದು ಸೋಮವಾರಪೇಟೆಯ ಸಂಪತ್ ಎಂಬುವವರು ಹೇಳಿಕೆ ನೀಡಿರುವ ವಿಡಿಯೊ ವೈರಲ್ ಆಗಿದೆ.

ಆದರೆ ಈ ವಿಡಿಯೊ ಚಿತ್ರೀಕರಿಸಿದವರು ಯಾರು? ಪ್ರಶ್ನೆ ಕೇಳುತ್ತಿದ್ದವರು ಯಾರು ? ಎಂಬ ಮಾಹಿತಿ ಲಭ್ಯವಾಗಿಲ್ಲ.

ಕೊಡಗಿನವರು ದನದ ಮಾಂಸ ತಿನ್ನುತ್ತಾರೆ ಎಂದು ಸಿದ್ದರಾಮಯ್ಯ ನೀಡಿದ್ದ ಹೇಳಿಕೆಯಿಂದ ಕೋಪಗೊಂಡಿದ್ದೆ. ಕೆಲಸದ ನಿಮಿತ್ತ ಬಂದಿದ್ದ ನಾನು ಪ್ರತಿಭಟನೆಯ ಗುಂಪಿನಲ್ಲಿ ಸೇರಿ ಸಿದ್ದರಾಮಯ್ಯ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಮೊಟ್ಟೆ ಹೊಡೆದೆ ಎಂದು ಅವರು ಹೇಳಿದ್ದಾರೆ.

ನಾನು ಜೀವಿಜಯ ಅವರ ಹಿಂಬಾಲಕ. ಅವರು ಜೆಡಿಎಸ್‌ನಲ್ಲಿದ್ದಾಗ ಮೊದಲು ನಾನೂ ಅಲ್ಲೇ ಇದ್ದೆ. ಅವರು ಕಾಂಗ್ರೆಸ್‌ ಗೆ ಬಂದಾಗ ನಾನೂ ಅವರೊಂದಿಗೆ ಬಂದೆ. ಸಿದ್ದರಾಮಯ್ಯ ಅವರು ಟಿಪ್ಪು ಕುರಿತು ನೀಡಿದ ಹೇಳಿಕೆಯಿಂದ ನನಗೆ ಬೇಸರವಾಗಿತ್ತು. ನಾನು ಮೊದಲು ಹಿಂದೂ ನಂತರ ಪಕ್ಷ. ಅಂದು ಪ್ರತಿಭಟನೆ ಮಾಡಲು ಬಂದಿರಲಿಲ್ಲ. ಕೆಲಸದ ನಿಮಿತ್ತ ಬಂದಿದ್ದೆ ಎಂದು ತಿಳಿಸಿದ್ದಾರೆ.