ಮನೆ ರಾಜ್ಯ ಮುರುಘಾ ಶ್ರೀಗಳ ಪ್ರಕರಣ: ಮಠದಲ್ಲಿದ್ದವರೇ ತೊಂದರೆ ಮಾಡಿದಂತಿದೆ- ಅರಗ ಜ್ಞಾನೇಂದ್ರ

ಮುರುಘಾ ಶ್ರೀಗಳ ಪ್ರಕರಣ: ಮಠದಲ್ಲಿದ್ದವರೇ ತೊಂದರೆ ಮಾಡಿದಂತಿದೆ- ಅರಗ ಜ್ಞಾನೇಂದ್ರ

0

ಶಿವಮೊಗ್ಗ(Shivamogga): ಮುರುಘಾ ಶ್ರೀಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಮಠದದಲ್ಲಿದ್ದವರೇ ಎನೋ ತೊಂದರೆ ಮಾಡಿದಂತೆ ಕಾಣುತ್ತದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಈ ಕುರಿತು ಶಿವಮೊಗ್ಗದಲ್ಲಿ ಇಂದು ಮಾತನಾಡಿದ ಅವರು,  ಚಿತ್ರದುರ್ಗದ ಮಠದಲ್ಲಿ ಇದ್ದವರೇ ತೊಂದರೆ ಮಾಡಿದಂಗೆ ಕಾಣುತ್ತೆ. ಮುರುಘಾಮಠದಲ್ಲಿನ ಒಬ್ಬ ಉದ್ಯೋಗಿ ಸರಿಯಿರಲಿಲ್ಲ. ಅವರೇ ಏನೋ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ ಎಂದು ತಿಳಿಸಿದ್ದಾರೆ.