ಮನೆ ಅಪರಾಧ ಮಡಿಕೇರಿಯಲ್ಲಿ ಮತೀಯ ಗೂಂಡಾಗಿರಿ; ಇಬ್ಬರ ಬಂಧನ

ಮಡಿಕೇರಿಯಲ್ಲಿ ಮತೀಯ ಗೂಂಡಾಗಿರಿ; ಇಬ್ಬರ ಬಂಧನ

0

ಮಡಿಕೇರಿ(Madikeri):  ಖಾಸಗಿ ಬಸ್‌ನಿಲ್ದಾಣದಲ್ಲಿ ಹಿಂದೂ ಹಾಗೂ ಮುಸ್ಲಿಮ್ ಧರ್ಮದ ವಿದ್ಯಾರ್ಥಿಗಳು ಒಟ್ಟಿಗೆ ಕುಳಿತಿದ್ದಾರೆಂಬ ಕಾರಣಕ್ಕೆ ಗಲಾಟೆ ಮಾಡಿದ ಆರೋಪದಡಿ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

ವಿನಯ್ ಹಾಗೂ ಮನು ರೈ ಬಂಧಿತರು.

ಯುವಕರು ನಡೆಸಿದ ಗಲಾಟೆ ಕಾರಣಕ್ಕೆ ಮನನೊಂದ ಯುವತಿಯು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಸದ್ಯ ಆರೋಗ್ಯವಾಗಿದ್ದಾರೆ.

ಜಿಲ್ಲೆಯಲ್ಲಿ ಮತೀಯ ಗೂಂಡಾಗಿರಿಗೆ ಅವಕಾಶ ನೀಡುವುದಿಲ್ಲ. ಅಂಥ ಕೃತ್ಯ ಎಸಗುವ ಯಾವುದೇ ಧರ್ಮದವರನ್ನೂ ಬಿಡುವುದಿಲ್ಲ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.